Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಸೆಂಬರ್‌ 29 ರಂದು ಪಿಳ್ಳೇಕೆರನಹಳ್ಳಿಯ ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ

Facebook
Twitter
Telegram
WhatsApp

 

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 27  : ನಗರದ ಹೊರವಲಯದ ಪಿಳ್ಳೇಕೆರನಹಳ್ಳಿಯಲ್ಲಿರುವ ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದಲ್ಲಿ 12 ನೇ ವರ್ಷದ ಕಾರ್ತಿಕ ಮಹೋತ್ಸವ ಡಿಸೆಂಬರ್ 29 ರಂದು ಸಂಜೆ 6-45 ಕ್ಕೆ ಆರಂಭಗೊಳ್ಳಲಿದೆ.

ಕಾರ್ಯಕ್ರಮದ ವಿವರ :
1) ಬೆಳಗ್ಗೆ 7.30 ಗಂಟೆಗೆ ಗಂಗಾ ಪೂಜೆ.
2) ಗ್ರಾಮದ ಶಾಂತಿ ಸಮೃದ್ಧಿಯ ಸಂಕೇತವಾಗಿ ಶಕ್ತಿ ದೇವತೆಯ ಕುಂಭ ಹೊತ್ತ ಮಹಿಳೆಯರಿಂದ ಗ್ರಾಮದ ಎಲ್ಲಾ ದೇವಾಲಯಗಳಿಗೆ ತೆರಳಿ ಕುಂಕುಮ ಮತ್ತು ಅಕ್ಷತೆಯನ್ನು ಸಮರ್ಪಿಸುವುದು.
3) ಬೆಳಗ್ಗೆ 9.45ಕ್ಕೆ ಶಕ್ತಿ ದೇವತೆಗೆ ವಿಶೇಷ ಅಭಷೇಕ ಸೇವೆ
4) ಚಿತ್ರದುರ್ಗ ನಗರದ ದೇವತೆಗಳ ಅಲಂಕೃತರಿಂದ ಗ್ರಾಮದ ಶಕ್ತಿ ದೇವಿಗೆ ವಿಶೇಷ ಅಲಂಕಾರದ ಸೇವೆ.
5) 12ನೇ ವರ್ಷದ ವಿಶೇಷ ಅದ್ದೂರಿ ಕಾರ್ತಿಕೋತ್ಸವ ಅಲಂಕಾರದ ಮಹಾ ಮಂಗಳಾರತಿ
6) ಗ್ರಾಮದ ಶಕ್ತಿ ದೇವತೆಗೆ 12ನೇ ವರ್ಷದ ಅದ್ಧೂರಿ ಕಾರ್ತಿಕೋತ್ಸವದ ದೀಪೋತ್ಸವದ ಚಾಲನೆ ಸಂಜೆ 6.45ಕ್ಕೆ
7) ಸಮಸ್ತ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಸಂಜೆ 7.30ಕ್ಕೆ
8) ಶಕ್ತಿ ದೇವತೆಯ ಈ ಎಲ್ಲಾ ಕಾರ್ಯಕ್ರಮಗಳನ್ನು ಪೂಜಾರಿ ಮಹಾಂತೇಶ್ ಮತ್ತು ಪುರೋಹಿತರಾದ ರಾಜಶೇಖರಯ್ಯ ನೆರವೇರಿಸಲಿದ್ದಾರೆ.
9) ಶ್ರೀ ಶಕ್ತಿ ದೇವಿಯ ಕುಂಬ ಹೊರುವ ಎಲ್ಲಾ ಹೆಣ್ಣು ಮಕ್ಕಳು ಸರಿಯಾಗಿ ಗಂಗಾ ಪೂಜಾ ಸಮಯಕ್ಕೆ (ಕುಂಭ, ಹಸಿರು ಬಣ್ಣದ ಜಾಕಿಟ್, ತೆಂಗಿನಕಾಯಿ ತರುವುದು)
10) ರಾತ್ರಿ 9.00ಗಂಟೆ ನಂತರ ಭಜನೆ ಕಾರ್ಯಕ್ರಮ ನಡೆಯಲಿದೆ.

ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನ ಸಹಾಯ ನೀಡಿ ಮಾರಮ್ಮದೇವಿ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿಯವರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊ : 9886800003, 8618416841 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

IPL 2024 : ಆರ್‌ಸಿಬಿ vs ಸಿಎಸ್‌ಕೆ : ಆರ್‌ಸಿಬಿಗೆ ಉಂಟು 18 ರ ನಂಟು : ಇಂದು ಇತಿಹಾಸ ಮರುಕಳಿಸುತ್ತಾ ?

ಸುದ್ದಿಒನ್ :  IPL 2024 ನಲ್ಲಿ RCB vs CSK ನಡುವಿನ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ. ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲಿದೆ. ಏಕೆಂದರೆ ಇಂದಿನ ಪಂದ್ಯ ನಾಕೌಟ್ ಪಂದ್ಯವಾಗಿದೆ.

ಚಿತ್ರದುರ್ಗ | ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ಮಳೆ ವರದಿ

    ಚಿತ್ರದುರ್ಗ, ಮೇ.18:  ಶುಕ್ರವಾರ ಸಂಜೆ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 42.8ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-2ರಲ್ಲಿ 9.2ಮಿ.ಮೀ, ಭರಮಸಾಗರದಲ್ಲಿ 4.4ಮಿ.ಮೀ

ಉದ್ಯೋಗ ವಾರ್ತೆ |  ಮೇ.22 ರಂದು ನೇರ ನೇಮಕಾತಿ ಸಂದರ್ಶನ : ಇಲ್ಲಿದೆ ಮಾಹಿತಿ…

ಚಿತ್ರದುರ್ಗ. ಮೇ.18:  ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದೇ ಮೇ.22ರಂದು ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಶನದಲ್ಲಿ ವಿವಿಧ ಖಾಸಗಿ ಕಂಪನಿಗಳು ಖಾಲಿ ಇರುವ ಹುದ್ದೆಗಳಿಗೆ ಪುರುಷ, ಮಹಿಳೆ ಅಭ್ಯರ್ಥಿಗಳನ್ನು ನೇರವಾಗಿ

error: Content is protected !!