Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಾತಿಗಣತಿ ವರದಿ ನಾಪತ್ತೆ : ಸಿಎಂ ಕ್ಲಾರಿಟಿ, ವಿರೋಧ ಪಕ್ಷದ ನಾಯಕ ಅಶೋಕ್ ಆಕ್ರೋಶ

Facebook
Twitter
Telegram
WhatsApp

ಬೆಂಗಳೂರು: ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದಾಗಿನಿಂದ ರಾಜ್ಯದಲ್ಲೂ ಜಾತಿಗಣತಿ ವರದಿಗೆ ಸಾಕಷ್ಟು ಪರ ವಿರೋಧ ಶುರುವಾಗಿದೆ. ಮತ್ತೆ ಮುನ್ನೆಲೆಗೆ ಬಂದಿರುವ ಜಾತಿಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂತರಾಜು ವರದಿಯೇ ಮಿಸ್ ಆಗಿದೆ ಎಂದೇ ಹೇಳಲಾಗುತ್ತಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

 

ಕಮಿಷನ್ ಸೆಕ್ರೆಟರಿನ ನಾನು. ಮಿಸ್ ಆಗಿರುವುದನ್ನ ಹೇಳಿದ್ದು ಯಾರು..? ನಂಗಂತು ಗೊತ್ತಿಲ್ಲ. ಒಂದು ದಿನ ನನ್ನ ಭೇಟಿ ಮಾಡಿದ್ರು. ಒಂದು ತಿಂಗಳು ಎರಡು ತಿಂಗಳು ಹೆಚ್ಚು ಕಡಿಮೆ ಆಗುತ್ತೆ ಎಂದು ಹೇಳಿದ್ದಾರೆ. ಡಿಸೆಂಬರ್ ಅಥವಾ ಜನವರಿ ಒಳಗೆ ಕೊಡುತ್ತೀವಿ ಎಂದಿದ್ದಾರೆ. ನಾನಿನ್ನೂ ವರದಿಯನ್ನೇ ನೋಡಿಲ್ಲ. ವರದಿಯನ್ನು ಕೊಟ್ಟ ಮೇಲೆ ನೋಡೋಣಾ. ವರದಿ ಬಂದ ಮೇಲೆ ಚರ್ಚೆ ಮಾಡೋಣಾ. ಅದಕ್ಕೂ ಮೊದಲೇ ವಿರೋಧ ಮಾಡುವುದು ಯಾಕೆ. ಜಾತಿ ಗಣತಿಯ ವರದಿ ಇನ್ನೂ ಸ್ವೀಕಾರ ಆಗಿಲ್ಲ ಎಂದಿದ್ದಾರೆ.

 

ಇನ್ನು ಇದೇ ವಿಚಾರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದ್ದು, ವರದಿ ಮೂಲ ಪ್ರತಿ ಮಿಸ್ಸಿಂಗ್ ಆಗಲು ಸರ್ಕಾರವೇ ಕಾರಣ. ಕಾಂತರಾಜು ವರದಿ ಸಿದ್ದರಾಮಯ್ಯ ಕಾಲದಲ್ಲಿ ನೇಮಕವಾಗಿತ್ತು. ಅವರ ಸರ್ಕಾರವೇ ಇತ್ತು ಆದರೂ ಬಿಡುಗಡೆ ಮಾಡಲಿಲ್ಲ. ಐದು ವರ್ಷ ಇದ್ದರು ಬಿಡುಗಡೆ ಮಾಡಲಿಲ್ಲ. ಆಮೇಲೆ ನಮ್ಮ ಸರ್ಕಾರ ಬಂತು. ಅವರ ಸಹಿಯೇ ಇರಲಿಲ್ಲ. ಹೀಗಿದ್ದಾಗ ಅವರ ವರದಿಯೇ ಸುಳ್ಳು.

ಒಕ್ಕಲಿಗರ, ವೀರಶೈವ ಇತರ ಸಮುದಾಯ ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಅವರಿಗೆ ಯಾವ್ಯಾವ ಜಾತಿ ಬೇಕೋ, ಅದಕ್ಕೆ ಏನೇನು ಬೇಕೋ ಅದನ್ನು ಸೇರಿಸಿಕೊಳ್ಳುತ್ತಾರೆ. ನಾನೇ ನೋಡಿದ್ದೀನಿ ಆ ವರದಿಯಲ್ಲಿ ಸಹಿಯೇ ಇಲ್ಲ. ಬೋಗಸ್ ವರದಿ ಇಟ್ಟುಕೊಂಡು ಜಯಪ್ರಕಾಶ್ ಅವರ ಸಹಿ ಮಾಡಿ ಕೊಡುವ ಪ್ರಯತ್ನ ಮಾಡುತ್ತಾ ಇದ್ದಾರೆ. ಅದು ಆಗಬಾರದು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗಣೇಶ್‍ನಾಯ್ಕ ನಿಧನ

  ಸುದ್ದಿಒನ್, ಚಿತ್ರದುರ್ಗ, ಮೇ. 14 : ಮುರುಘಾಮಠದ ಸಮೀಪವಿರುವ ಅಗಸರಹಳ್ಳಿಯ ವಾಸಿ ಗಣೇಶ್‍ನಾಯ್ಕ(55) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮನೆಯಲ್ಲಿ ಎದೆನೋವು ಕಾಣಿಸಿಕೊಂಡಾಗ ಕೂಡಲೆ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು. ಮೃತರು

ಟೀಂ ಇಂಡಿಯಾದ ಕೋಚ್ ಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ : ಏನೆಲ್ಲಾ ಕ್ವಾಲಿಟಿ ಬೇಕು ಗೊತ್ತಾ..?

  ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಶುರುವಾಗಲಿದೆ. ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆಯುವುದು ಅನುಮಾನ. ಜೂನ್ ನಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿಯಲಿದೆ.‌ ಬಿಸಿಸಿಐ ಹೊಸ ಕೋಚ್

ಸಹಕಾರಿ ಸಂಘಗಳಲ್ಲಿಯೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನೀಡಿ : ರಾಜ್ಯ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್,  ಚಿತ್ರದುರ್ಗ ಮೇ. 14 :  ರಾಜ್ಯ ಸರ್ಕಾರ ಜಿ.ಪಂ. ತಾ.ಪಂ. ಗ್ರಾ.ಪಂ. ಹಾಗೂ ಮಹಾನಗರಪಾಲಿಕೆ, ನಗರಸಭೆ, ಪಟ್ಟಣ

error: Content is protected !!