ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಭವಿಷ್ಯ‌ ನುಡಿದ ಜೈನ ಮುನಿಗಳು..!

suddionenews
1 Min Read

ಬೆಳಗಾವಿ: ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ವಿಚಾರಕ್ಕೇನೆ ಸಾಕಷ್ಟು ಮನಸ್ತಾಪಗಳು ಮೂಡಿವೆ. ಐದು ವರ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರು ಸಿಎಂ ಹುದ್ದೆ ನಿರ್ವಹಿಸಲಿದ್ದಾರೆ ಎಂಬ ಮಾತುಕತೆ ನಡೆದಿತ್ತು. ಅದರಂತೆ ಸಾಕಷ್ಟು ಚರ್ಚೆಗಳು ನಡೆದಿವೆ. ಇತ್ತಿಚೆಗೆ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಕೂಡ ಹೇಳಿದ್ದರು. ಆ ಹೇಳಿಕೆ ಬೇರೆ ಬೇರೆ ಆಯಾಮದಲ್ಲಿ ಚರ್ಚೆಯಾಗಿತ್ತು. ಇದೀಗ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಜೈನ ಮುನಿಗಳು ಭವಿಷ್ಯ ನುಡಿದಿದ್ದಾರೆ.

 

ಜೈನ ಬಸದಿಯ ಪ.ಪೂ ಬಾಲಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು ಈ ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುನಾರ್ ಅವರಿಗೂ ಆಶೀರ್ವಾದ ಕೊಟ್ಟಿದ್ದೇನೆ. ಅವರು ಸಹ ಮುಖ್ಯಮಂತ್ರಿಯಾಗುತ್ತಾರೆ ಎಂದಿದ್ದಾರೆ. ಈ ಭವಿಷ್ಯದ ನುಡಿ ಡಿಕೆ ಶಿವಕುಮಾರ್ ಬೆಂಬಲಿಗರಿಗಂತೂ ಸಂತಸವನ್ನು ನೀಡಿದೆ. ಯಾಕಂದ್ರೆ ನಮ್ಮ ನಾಯಕ ಆದಷ್ಟು ಬೇಗ ಸಿಎಂ ಆಗಲಿ ಎಂದೇ ಬಯಸುತ್ತಿರುವವರು ಅವರು. ಹೀಗಿರುವಾಗ ಜೈನ ಮುನಿಗಳ ಭವಿಷ್ಯ ಆದಷ್ಟು ಬೇಗ ನಿಜವಾಗಲೀ ಎಂದೇ ಬಯಸಿದ್ದಾರೆ.

ಡಿಕೆ ಶಿವಕುಮಾರ್ ಭವಿಷ್ಯ ಮಾತ್ರವಲ್ಲ ಶಾಸಕ ವಿನಯ್ ಕುಲಕರ್ಣಿ ಅವರ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ವಿನಯ್ ಕುಲಕರ್ಣಿ ಅವರು ಸಚಿವರಾಗ್ತಾರೆ ಎಂದಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ವಿನಯ್ ಕುಲಕರ್ಣಿಗೆ ಸಚಿವರಾಗುವ ಯೋಗವಿದೆ ಎಂದೇ ತಿಳಿಸಿದ್ದಾರೆ. ಈ ಮೂಲಕ ಧಾರವಾಡಕ್ಕೆ ಹೋಗಲು ಆಗದ ಸ್ಥಿತಿಯಲ್ಲಿರುವ ವಿನಯ್ ಕುಲಕರ್ಣಿಗೆ ಸಚಿವ ಸ್ಥಾನ ಸಿಗುತ್ತೆ ಎಂಬ ಆಶೀರ್ವಾದ ಖುಷಿ ತಂದಿರುವುದರಲ್ಲಿ ಅನುಮಾನವೇ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *