Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರಿನ ಈ ಶ್ರೀದೇವಿ ಗೊಲ್ಲಾಳಮ್ಮ ಜಾತ್ರೆ : ದೇವಿಯ ಮುಂದೆ ಸೊಸೆಯಂದಿರ ಕುಣಿತ…!

---Advertisement---

 

ಸುದ್ದಿಒನ್, ಚಿತ್ರದುರ್ಗ : ಹಲವು ಕಡೆ ಹಲವು ರೀತಿಯ ಆಚರಣೆಗಳು ಇರುತ್ತವೆ. ದೇವರ ಉತ್ಸವದಲ್ಲಿ ನಾನಾ ರೀತಿಯ ಆಚರಣೆಗಳು ವಾಡಿಕೆಯಲ್ಲಿವೆ. ಹಿರಿಯೂರು ತಾಲೂಕಿನ ಬಾಲೇನಹಳ್ಳಿಯಲ್ಲಿ ಶನಿವಾರ ಶ್ರೀದೇವಿ ಗೊಲ್ಲಾಳಮ್ಮ ಜಾತ್ರೆ ನಡೆಯಿತು. ಗ್ರಾಮಕ್ಕೆ ಸೊಸೆಯಾಗಿ ಬಂದವರು ದೇವರ ಜಾತ್ರೆಯ ಕೊನೆಯ ದಿನದಂದು ಭಂಡಾರ ಉತ್ಸವ ನಡೆಯುತ್ತದೆ ಅಂದು ಗ್ರಾಮದ  ಸೊಸೆಯಂದಿರು ಕುಣಿಯುವುದು ಇಲ್ಲಿನ ವಿಶೇಷ.

ದಸರಾ ಮಹೋತ್ಸವದ ಅಂಗವಾಗಿ ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಜಾತ್ರಾ ಮಹೋತ್ಸವದ ಕೊನೆಯ ದಿನ ಊರಿನ ಸೊಸೆಯಂದಿರೆಲ್ಲಾ ಸೇರಿ ದೇವಿಯ ಮುಂದೆ ಬೇವಿನ ಸೊಪ್ಪು ಹಿಡಿದು ಕುಣಿಯುವುದು ಇಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ.

ಗೊಲ್ಲಾಳಮ್ಮ ಜಾತ್ರೆಯಲ್ಲಿ ಸೊಸೆಯಂದಿರ ಈ ನೃತ್ಯ ಎಲ್ಲರ ಗಮನ ಸೆಳೆದಿದೆ. ಪ್ರತಿ ವರ್ಷವೂ ಎಲ್ಲರೂ ಈ ಜಾತ್ರೆಯಲ್ಲಿ ಸೇರಿ, ಹಬ್ಬ ಆಚರಿಸಿ, ಕೊನೆಯಲ್ಲಿ ಕುಣಿದು ಕುಪ್ಪಳಿಸಿ, ದೇವಿಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment