Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಟೋಬರ್ 15 ರಂದು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ  ಸರ್ವಧರ್ಮೀಯರ ವಧು-ವರರ ಸಮಾವೇಶ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಅ,04 : ಮಾನವನ ಬದುಕಿನಲ್ಲಿ ಮದುವೆ ಎಂಬುದು ಮಹತ್ತರವಾದ ಘಟ್ಟ .ಈ ಮದುವೆಯ ಮಹತ್ತರ ಘಟ್ಟವನ್ನು 12ನೇ ಶತಮಾನದ ಶರಣರು “ಕಲ್ಯಾಣ”ವೆಂದು ಕರೆದಿದ್ದಾರೆ.

ನಮ್ಮ ಪುರಾತನ  ಪರಂಪರೆಯು ಸಪ್ತಪದಿ ಎಂಬುದಾಗಿ ಕರೆದಿದೆ. “ಸಾವಿರ ಸಕಾರಾತ್ಮಕ ಸುಳ್ಳು ಹೇಳಿ ಒಂದು ಮದುವೆ ಮಾಡು” ಎಂಬ ಗಾದೆ ಮಾತು ಇರುವಂತೆ  ಸತತವಾಗಿ ಮೂರು ದಶಕಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಚಿತ್ರದುರ್ಗ ಮುರುಘಾಮಠದ  ಆಶ್ರಯದಲ್ಲಿ  ಶ್ರೀ ಬಸವೇಶ್ವರ ವಧು-ವರರ ಮಾಹಿತಿ ಕೇಂದ್ರದ ವ್ಯವಸ್ಥಾಪಕರಾಗಿ ಎರಡೂವರೆ ಮೂರು   ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಜೆ .ಎಂ. ಜಂಬಯ್ಯ ಅವರ ಅನನ್ಯ ಕ್ರಿಯಾಶೀಲತೆ ಮೆಚ್ಚುವಂತಹುದು.

ಮುರುಘಾಮಠದಲ್ಲಿ ಮದುವೆಗಳೆಂದರೆ ಅದು ವಿಶ್ವಮಾನವತೆಯ ಸಂಕೇತ. ಜಗದಗಲ ಮುಗಿಲಗಲ ಮಿಗಿಯಗಲ ಎಂಬಂತೆ ಇಲ್ಲಿ ಸಾವಿರಾರು ಮದುವೆಗಳು ನಡೆದಿವೆ. ಪರಸ್ಪರ ಧರ್ಮೀಯರ, ಪರಸ್ಪರ ಜಾತಿಗಳ ಮದುವೆಗಳಂತೆ ಅಂತರ್ ಜಾತಿಯ ಮದುವೆಗಳು ನಡೆದಿರುವಂತೆಯೇ, ವಿಧುರರ, ವಿಕಲಾಂಗರ, ಕಲ್ಯಾಣಗಳಗಳಿಗೂ ಇಲ್ಲಿ ಲೆಕ್ಕವಿಲ್ಲ. ಗಮನಾರ್ಹ ಸಂಗತಿಗಳೆಂದರೆ ಬದುಕಿನ ಇಳಿಸಂಜೆಯಲ್ಲಿ ಸಂಗಾತಿಗಳನ್ನು ಕಳೆದುಕೊಂಡವರ  ಬದುಕಿಗೆ ಆಸರೆಯಾಗುವಂತ ಅಬಲೆಯರು, ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅನಾಥರು, ಹತಭಾಗ್ಯರು, ದುಃಖತಪ್ತರು ಸಪ್ತಪದಿ ತುಳಿದು ಬಾಳ ಬೆಳಕು ಕಂಡುಕೊಂಡಿದ್ದಾರೆ.

ಮುರುಘಾಮಠದಲ್ಲಿ ನಡೆಯುವ ಮದುವೆಗಳೆಂದರೆ ಸರಳ ಮಾತ್ರವಲ್ಲ ಆದರ್ಶ ವಿವಾಹಗಳು ಹೌದು. ಯಾವುದೇ ಜಾತಿಯ ಬಡವರು, ನಿರ್ಲಕ್ಷಿತರು, ದಿಕ್ಕಿಲ್ಲದವರು ಮದುವೆಯಾಗಬೇಕೆಂದರೆ ನಮಗೊಂದು ತಾಣವಿದೆ ಅದಂದರೆ ಶ್ರೀ ಮಠ ಎಂಬ ಧನ್ಯತೆಯ  ಭಾವವನ್ನು ತಳೆಯುತ್ತಾರೆ.

ಇಂತಹ ಸಾವಿರಾರು ಮದುವೆಗಳಿಗೆ ಸಂಯೋಜಕರಾಗಿ, ವ್ಯವಸ್ಥಾಪಕರಾಗಿ, ಕರ್ತವ್ಯ ನಿರ್ವಹಿಸಿದ ಜೆ.ಎಂ. ಜಂಬಯ್ಯ ಎಲೆ ಮರೆಯ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಲಿತರು, ಬಡವರು, ದುರ್ಬಲರ ಮದುವೆಗೆ ಸಾಕ್ಷಿಯಾಗಿರುವಂತೆ ಕರ್ನಾಟಕದ ಪ್ರಭಾವಿ  ಕುಟುಂಬದವರ  ಮದುವೆಗಳಿಗೂ  ಇವರು ಶ್ರಮಿಸಿದ್ದಾರೆ.ಆ ಕುಟುಂಬಗಳು ಇಂದಿಗೂ ಇವರನ್ನು ಶ್ರೀಮಠವನ್ನು ಇವರನ್ನು ಸ್ಮರಿಸುತ್ತಾರೆ.

ಬಸವಧರ್ಮ ಅರ್ಥಾತ್  ಶರಣರ ಧರ್ಮವೆಂದರೆ ಅದು ಕೇವಲ ಒಂದು  ಸಮುದಾಯಕ್ಕೆ ಸೀಮಿತವಾದ ಧರ್ಮವಲ್ಲ.ಅದು ವಿಶ್ವಧರ್ಮ ಹೀಗಾಗಿ ಬಸವಣ್ಣನ ಹೆಸರಿನಲ್ಲಿರುವ ಈ ವಧು ವರರ ಮಾಹಿತಿ ಕೇಂದ್ರ ಸರ್ವಧರ್ಮೀಯರನ್ನು ಆಲಂಗಿಸಿಕೊಂಡು ತನ್ನ ತೆಕ್ಕೆಯಲ್ಲಿ  ತೆಗೆದುಕೊಂಡೊಯ್ಯಬೇಕೆಂಬ ವಿಶಾಲ ತಳಹದಿಯ ಮೇಲೆ  ಸರ್ವ ಧರ್ಮಗಳ ವಧು ವರರ ಹತ್ತಾರು ಸಮಾವೇಶಗಳನ್ನು ಇದುವರೆಗೂ   ಅರ್ಥಪೂರ್ಣವಾಗಿ ನಡೆಸುತ್ತಾ ಬಂದಿದ್ದಾರೆ. ಇಂತಹ ಸಮಾವೇಶಗಳಿಗೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲೂ ವಧು- ವರರು ತಮ್ಮ  ಪೋಷಕರೊಂದಿಗೆ ಆಗಮಿಸಿ, ಈ ಸಮಾವೇಶಗಳ ಲಾಭ ಪಡೆದುಕೊಂಡಿದ್ದಾರೆ.

ಬಸವೇಶ್ವರ ವಧು ವರರ ಮಾಹಿತಿ ಕೇಂದ್ರ ರಚನಾತ್ಮಕ ಕಾರ್ಯದ ಸಂಬಂಧಗಳ ಬೆಸುಗೆಯನ್ನು ಸದಾ ಅಚ್ಚರಿಯಿಂದ ಅಷ್ಟೇ ಗಂಭೀರವಾಗಿ ಗಮನಿಸುತ್ತಿದ್ದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೂಡ ಜಾಗೃತವಾಗಿ, ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ತಮ್ಮ ನೌಕರರ ಮಕ್ಕಳ ಕಲ್ಯಾಣ ಕಾರ್ಯಕ್ಕೆ ಮುಂದಾಗಿದ್ದು ಕೇಂದ್ರದ ಜಂಬಯ್ಯ ಅವರೊಂದಿಗೆ ಸಮಾಲೋಚಿಸಿ, ಸಮಾವೇಶಗಳನ್ನು ನಡೆಸಿ ತಮ್ಮ ಸಮುದಾಯದ ಯುವಕ ಯುವತಿಯರನ್ನು ಸೇರಿಸಿ. ಕಂಕಣ ಭಾಗ್ಯಕ್ಕೆ ಸದಾ ಅವಕಾಶ ಕಲ್ಪಿಸಿ ಹತ್ತಾರು ಮದುವೆಗಳನ್ನು ನೆರವೇರಿಸಿದ್ದಾರೆ .ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಇಂದಿಗೂ ಜಂಬಯ್ಯ ಅವರನ್ನು ಸ್ಮರಿಸುತ್ತಾರೆ.

ಅದರಂತೆ ಇದೀಗ ಇದೇ ತಿಂಗಳ ಭಾನುವಾರ 2023 ಅಕ್ಟೋಬರ್ 15 ರಂದು ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ  ಬೆಳಗ್ಗೆ 11 ಗಂಟೆಗೆ ಸರ್ವಧರ್ಮೀಯರ ರಾಜ್ಯ ಮಟ್ಟದ  ವಧು-ವರ   ಸಮಾವೇಶವನ್ನು ಏರ್ಪಡಿಸಲಾಗಿದೆ. ಈ ಸಮಾವೇಶದ ಸಾನಿಧ್ಯವನ್ನು ಸಂಡೂರು ಪ್ರಭುದೇವರ ಸಂಸ್ಥಾನ ವಿರಕ್ತಮಠದ  ಶ್ರೀ ಪ್ರಭು ಮಹಾಸ್ವಾಮಿಗಳು, ವಿಜಯಪುರ ವನಶ್ರೀ ಸಂಸ್ಥಾನ,ಗಾಣಿಗ ಗುರುಪೀಠದ ಡಾ.ಜಯಬಸವಕುಮಾರ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ  ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಕ್ಕಿಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷರಾದ ಕೆ.ಎಮ್. ಹೇಮಯ್ಯಸ್ವಾಮಿ, ದಾವಣಗೆರೆ ಜಯದೇವ ಪ್ರೆಸ್ ಮಾಲೀಕರು,ಶ್ರೀ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟಿಗಳು ಆದ ಕಣುಕುಪ್ಪಿ ಮುರುಗೇಶಪ್ಪ  ಅವರುಗಳು ಭಾಗವಹಿಸಲಿದ್ದಾರೆಂದು ಮಾಹಿತಿ ಕೇಂದ್ರದ ವ್ಯವಸ್ಥಾಪಕರಾದ ಜೆ.ಎಂ.  ಜಂಬಯ್ಯನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆ ಸಂಪರ್ಕಿಸಲು ಕೋರಿದ್ದಾರೆ.  9980658625

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಮನಗರದ ತೋಟದ ಮನೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಫೈನಲ್ : ಯೋಗೀಶ್ವರ್ ಸಮಾಧಾನಗೊಳಿಸಲು ನಿರ್ಧಾರ..!

    ರಾಮನಗರ: ಚನ್ನಪಟ್ಟಣ ಬೈಎಲೆಕ್ಷನ್ ವಿಚಾರ ರಾಜ್ಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದ್ರೆ, ಜೆಡಿಎಸ್ ಲೆಕ್ಕಚಾರದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೂ ಬಹಳ ಮುಖ್ಯವಾಗಿದೆ. ಇಲ್ಲಿ ಮೈತ್ರಿ

ಚಿತ್ರದುರ್ಗ APMC : ಸೂರ್ಯಕಾಂತಿ, ಶೇಂಗಾ, ಕಡಲೆ ಸೇರಿದಂತೆ ಇತರ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ…!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ (ಸರಕು)    ಇಂದಿನ             

ಮುತ್ತಪ್ಪ ರೈ ಆಸ್ತಿ ವಿವಾದ ಇತ್ಯರ್ಥ : ಎರಡನೇ ಪತ್ನಿಗೆ 100 ಕೋಟಿ ಆಸ್ತಿ

ಬೆಂಗಳೂರು :ಮಾಜಿ ಡಾನ್ ಮುತ್ತಪ್ಪ ರೈ ಸಾವನ್ನಪ್ಪಿದ ಬಳಿಕ ಅವರ ಆಸ್ತಿ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಸಾವಿರಾರು ಕೋಟಿ ಆಸ್ತಿಯನ್ನು ಮುತ್ತಪ್ಪ ರೈ ಸಾಯುವುದಕ್ಕೂ ಮುನ್ನ ಮನೆಕೆಲಸದವರಿಗೂ ಸೇರಿ ಬರೆದಿದ್ದರು. 2019ರಲ್ಲಿ

error: Content is protected !!