Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಲಗಾರರು ನಿಗಧಿತ ಸಮಯಕ್ಕೆ ಅಸಲು ಮತ್ತು ಬಡ್ಡಿ ಪಾವತಿಸಿ, ಸಂಘದ ಏಳಿಗೆಗೆ ಸಹಕರಿಸಿ : ಅಧ್ಯಕ್ಷ ಹೆಚ್.ಜಲೀಲ್‍ಸಾಬ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಸದಸ್ಯರ ಸಹಕಾರದಿಂದ ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘ ಅಭಿವೃದ್ದಿಯತ್ತ ಮುನ್ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಲಾಭಾಂಶ ಕಾಣಬಹುದು ಎಂದು ಸಂಘದ ಅಧ್ಯಕ್ಷ ಹೆಚ್.ಜಲೀಲ್‍ಸಾಬ್ ತಿಳಿಸಿದರು.

ಎ.ಪಿ.ಎಂ.ಸಿ. ಆವರಣದಲ್ಲಿರುವ ಐ.ಎ.ಟಿ. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

589 ಸದಸ್ಯರುಗಳಿದ್ದು, ಏಳು ಲಕ್ಷ 95 ಸಾವಿರ ರೂ. ಷೇರು ಬಂಡವಾಳವಿದೆ. 22 ಮಂದಿ ಸದಸ್ಯತ್ವ ಪಡೆದುಕೊಂಡಿದ್ದಾರೆ. 4 ಲಕ್ಷ 51 ಸಾವಿರದ 250 ರೂ. ಠೇವಣಿಯಿದ್ದು, 7.5 ಲಕ್ಷ ರೂ.ಗಳ ಸಾಲ ನೀಡಲಾಗಿದೆ. ಸಾಲಗಾರರು ನಿಗಧಿತ ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿಯನ್ನು ಪಾವತಿಸಿ ಸಂಘದ ಏಳಿಗೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಸಾಲಗಾರರಷ್ಟೆ ಜಾಮೀನುದಾರರ ಮೇಲೆ ಜವಾಬ್ದಾರಿಯಿದೆ ಎನ್ನುವುದನ್ನು ಮರೆಯಬಾರದು. ಸಣ್ಣ ಪ್ರಮಾಣದ ನಿರೀಕ್ಷೆ ಮುಟ್ಟಿದರೆ ಸಮಾಜಕ್ಕೆ ಉಪಯುಕ್ತವಾದ ಸಹಾಯ ಮಾಡಲು ಆಗುತ್ತದೆ. ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘಕ್ಕೆ ಶಕ್ತಿ ಬರಬೇಕಾದರೆ ಠೇವಣಿ, ಷೇರುದಾರರು ಜಾಸ್ತಿಯಾಗಬೇಕು. ಠೇವಣಿ ಹಣಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನಿಭಾಯಿಸುತ್ತೇವೆ. ಅನುಮಾನ ಪಡುವುದು ಬೇಡ. ಚಳ್ಳಕೆರೆ, ಹಿರಿಯೂರು, ಚಿಕ್ಕಜಾಜೂರಿನಲ್ಲಿ ಶಾಖೆ ತೆರೆಯಬೇಕೆಂದುಕೊಂಡಿದ್ದೇವೆ. ನಮ್ಮ ವಹಿವಾಟು ಸರಿಯಾಗಿದ್ದರೆ ವರ್ಷಕ್ಕೊಮ್ಮೆ ಸರ್ವ ಸದಸ್ಯರ ಸಭೆ ಕರೆದು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಗುತ್ತದೆ. ಸದಸ್ಯರು ಸಕ್ರಿಯವಾಗಿ ವ್ಯವಹಾರಗಳಲ್ಲಿ ಭಾಗಿಯಾಗಬೇಕೆಂದು ಹೇಳಿದರು.

ವಿಶ್ವಮಾನವ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಸ್.ರಶೀದ್, ನಿರ್ದೇಶಕರುಗಳಾದ ಸಿ.ಇಮಾಂಸಾಬ್, ಎಚ್.ಮೌಲಾನ ತಾಳವಟ್ಟಿ, ಇ.ಮಹಮದ್ ಅಲಿ, ಜಿ.ಸುಭಾನು, ಹೆಚ್.ಅಬ್ದುಲ್ ಲತೀಫ್, ಷೇಕ್‍ಬುಡೇನ್‍ಸಾಬ್, ಎಂ.ಜಿ.ಶಫಿವುಲ್ಲಾ, ಪಿ.ದಾದಾವಲಿ, ಪಿ.ಬಷೀರ್ ಅಹಮದ್, ಟಿ.ಮೆಹಬೂಬ್, ಜಿ.ದಾದಾಬುಡೇನ್‍ಸಾಬ್, ಎಂ.ಅಬ್ದುಲ್ ಕಲಾಂ, ಪಿ.ಸಲೀಮಾ, ಜಹರಾಬಿ, ಕಾರ್ಯದರ್ಶಿ ಕು.ಸಿಂಧು ವಿ. ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!