Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೇತ್ರ ದಾನ ಮಾಡಿ ಇಬ್ಬರು ಬದುಕಿಗೆ ದಾರಿ ದೀಪವಾಗಿ : ಶ್ರೀಮತಿ ಗಾಯತ್ರಿ ಶಿವರಾಮ್‍

Facebook
Twitter
Telegram
WhatsApp

ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್            
ಮೊ : 98862 95817

ಸುದ್ದಿಒನ್, ಚಿತ್ರದುರ್ಗ(ಸೆ.02) : ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್‍ವತಿಯಿಂದ 38ನೇ ರಾಷ್ಟ್ರೀಯ ನೇತ್ರದಾನದ ಪಾಕ್ಷಿಕ ಅಂಗವಾಗಿ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್‍ನ ಸ್ಥಾಪನಾಧ್ಯಕ್ಷರಾದ ಶ್ರೀಮತಿ ಗಾಯತ್ರಿ ಶಿವರಾಮ್‍ರವರು ಶನಿವಾರ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ರಮೇಶ್‍ರವರಿಗೆ ನೇತ್ರದಾನದ ಬಗ್ಗೆ ಮಾಹಿತಿ ಇರುವ ಭಿತ್ತಿ ಪತ್ರವನ್ನು ನೀಡುವ ಮೂಲಕ ನೇತ್ರದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಗಾಯತ್ರಿಯವರು ನೇತ್ರದಾನ ಬಹಳ ಮುಖ್ಯವಾದ ದಾನವಾಗಿದೆ. ನಮ್ಮ ಸಾವಿನ ನಂತರವು ನಮ್ಮ ಕಣ್ಣುಗಳು ಜೀಂವತವಾಗಿ ಇರಬೇಕಾದರೆ ನಿಮ್ಮ ಮರಣದ ನಂತರ ನಿಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಇಬ್ಬರು ಅಂಧರಿಗೆ ನೇತ್ರವನ್ನು ಅಳವಡಿಸಲಾಗುವುದು ಇದರಿಂದ ಇಬ್ಬರ ಬದುಕಿಗೆ ದಾರಿ ದೀಪವಾದಂತೆ ಆಗಲಿದೆ ಎಂದರು.

ರೋಟರಿ ಕ್ಲಬ್ ಫೋರ್ಟ್ ಅಧ್ಯಕ್ಷ ಎಂ ಗಿರೀಶ್ ಮಾತನಾಡಿ ನೇತ್ರ ಮಾನವನಿಗೆ ಅತಿ ಅಮೂಲ್ಯವಾದ ಆಂಗವಾಗಿದೆ ಮಾನವ ತನ್ನ ದೇಹದಲ್ಲಿ ಬೇರೆ ಅಂಗಗಳು ಉನಾದರೂ ಸಹಾ ಬದುಕನ್ನು ನಡೆಸಬಹುದಾಗಿದೆ ಆದರೆ ನೇತ್ರ ಇಲ್ಲವಾದರೇ ನಮ್ಮ ಬದುಕನ್ನು ನಡೆಸಲು ಬೇರೆಯವರ ಸಹಾಯವನ್ನು ಪಡೆಯವುದು ಅನಿವಾರ್ಯವಾಗುತ್ತದೆ ಎಂದ ಅವರು ನಾವು ಸತ್ತ ನಂತರ ನಮಗೆ ಕಣ್ಣುಗಳ ಆವಶ್ಯಕತೆ ಇರುವುದಿಲ್ಲ ಈ ಹಿನ್ನಲೆಯಲ್ಲಿ ನಮ್ಮ ಕಣ್ಣುಗಳನ್ನು ನಮ್ಮ ಮರಣದ ನಂತರ ಬೇರೆಯವರಿಗೆ ದಾನ ಮಾಡುವುದರ ಮೂಲಕ ಇಬ್ಬರು ಅಂಧರಿಗೆ ಸಹಾಯ ಮಾಡಿದಂತೆ ಆಗುತ್ತದೆ ಇದರ ಮಹತ್ವದ ಬಗ್ಗೆ ನಿಮ್ಮ ಮನೆಗಳಲ್ಲಿ ತಿಳಿಸಿ ಎಂದರು.

ಕಾರ್ಯಕ್ರಮದಲ್ಲಿ ಐ ಬ್ಯಾಂಕ್ ಅಧ್ಯಕ್ಷರಾದ ಪಿ.ಬಿ.ಶಿವರಾಮ್, ಐ ಬ್ಯಾಂಕ್ ಕಾರ್ಯದರ್ಶಿ ಟಿ.ವಿ.ಸ್ವಾಮಿ, ಸಂಚಾಲಕರಾದ ಎಸ್. ವೀರೇಶ್ ಹಾಗೂ ಕಾಲೇಜಿನ ಮಹಿಳಾ ಪ್ರಾಧ್ಯಾಪಕರು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ : ಮೊದಲ ಬಾರಿಗೆ ಮಾತನಾಡಿದ ದೇವೇಗೌಡರು..!

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿದ್ದಾರೆ. ‘ಪ್ರಜ್ವಲ್ ಬಗ್ಗೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನನ್ನ ತಕರಾರು ಇಲ್ಲ ಎಂದಿದ್ದಾರೆ. ‘ರೇವಣ್ಣ ವಿರುದ್ಧ ಆರೋಪ

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

error: Content is protected !!