ಚಳ್ಳಕೆರೆ ಪೊಲೀಸರಿಂದ ಮೂವರು ಸರಗಳ್ಳರ ಬಂಧನ, ಚಿನ್ನ ಸೇರಿ 7 ಲಕ್ಷ ರೂ. ಮೌಲ್ಯದ ವಸ್ತುಗಳು ವಶ

1 Min Read

 

ಸುದ್ದಿಒನ್, ಚಳ್ಳಕೆರೆ : ಸರಗಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಚಳ್ಳಕೆರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಚಿತ್ರದುರ್ಗ ತಾಲ್ಲೂಕು ಭರಮಸಾಗರದ ಜಯಕುಮಾರ್ ಜೆ.(24), ತುಮಕೂರು ಜಿಲ್ಲೆ ತಿಪಟೂರು ನಗರದ ಸುಜಿತ್ ಕೆ.ಬಿ.(19) ಮತ್ತು ಸುಮಂತ್(19) ಎಂದು ಗುರುತಿಸಲಾಗಿದೆ. ಅವರಿಂದ‌ ಎರಡು ಮೋಟಾರ್ ಸೈಕಲ್ ಹಾಗೂ 45.ಗ್ರಾಂ ತೂಕದ ಒಂದು ಚಿನ್ನದ ಸರ ಸೇರಿ ಒಟ್ಟು 7.ಲಕ್ಷ ಮೌಲ್ಯದ ವಸ್ತುಗಳನ್ನು ಗುರುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಡಿವೈಎಸ್ಪಿ ಟಿ.ಬಿ.ರಾಜಣ್ಣ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿಯವರ ನಿರ್ದೇಶನ ಹಾಗೂ ಡಿವೈಎಸ್ಪಿ ಟಿ.ಬಿ. ರಾಜಣ್ಣ ಅವರ ಮಾರ್ಗದರ್ಶನದಲ್ಲಿ ನಿರೀಕ್ಷಕ ಆರ್.ಎಫ್.ದೇಸಾಯಿ ನೇತೃತ್ವದ ಪೊಲೀಸರ ತಂಡ ಕಾರ‍್ಯಚರಣೆ ನಡೆಸಿತ್ತು.

Share This Article
Leave a Comment

Leave a Reply

Your email address will not be published. Required fields are marked *