Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಂದ್ರಯಾನ 3 : ಪೂರ್ಣಗೊಂಡ ಡಿ-ಬೂಸ್ಟಿಂಗ್ ಪ್ರಕ್ರಿಯೆ : ಇದೀಗ ಎಲ್ಲರ ಚಿತ್ತ ಆಗಸ್ಟ್ 23 ರತ್ತ…!

---Advertisement---

 

ಸುದ್ದಿಒನ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಮಿಷನ್ ಚಂದ್ರಯಾನ-3 ಮತ್ತೊಂದು
ಮಹತ್ವದ ಹಂತವನ್ನು ಪೂರ್ಣಗೊಳಿಸಿದೆ.  ಎರಡನೇ ಮತ್ತು ಅಂತಿಮ ಡಿ-ಬೂಸ್ಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ.  ಶನಿವಾರ ಮಧ್ಯರಾತ್ರಿಯ ನಂತರ 1:50 ಗಂಟೆ ಸಮಯದಲ್ಲಿ ಎರಡನೇ ಡೀಬೂಸ್ಟಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಇಸ್ರೋ ತಿಳಿಸಿದೆ.

ಇದರೊಂದಿಗೆ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಸಮೀಪದ ಕಕ್ಷೆಯನ್ನು ತಲುಪಿದೆ. ಪ್ರಸ್ತುತ ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಕನಿಷ್ಠ 25 ಕಿಮೀ ಮತ್ತು ಗರಿಷ್ಠ 134 ಕಿಮೀ ದೂರದ ಕಕ್ಷೆಯಲ್ಲಿ ಸುತ್ತುತ್ತಿದೆ. ಚಂದ್ರಯಾನ-3 ರಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸುವುದು ಮಾತ್ರ ಉಳಿದಿದೆ. ಇದೀಗ ಎಲ್ಲರ ಚಿತ್ತ ಆಗಸ್ಟ್ 23 ರತ್ತ ನೆಟ್ಟಿದೆ.

ಈ ಪ್ರಕ್ರಿಯೆಯು ಅತ್ಯಂತ ಕ್ಲಿಷ್ಟಕರವಾಗಿರುವುದರಿಂದ ಇಸ್ರೋ ವಿಜ್ಞಾನಿಗಳು ಸಂಪೂರ್ಣ ದೃಷ್ಟಿಯನ್ನು ವಿಕ್ರಮ್ ಲ್ಯಾಂಡರ್ ಮೇಲೆ  ಕೇಂದ್ರೀಕರಿಸಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಚಂದ್ರಯಾನ-3 ಆಗಸ್ಟ್ 23ರ ಸಂಜೆ ವೇಳೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. “ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ ಪ್ರಕ್ರಿಯೆಯ ನಂತರ, ಲ್ಯಾಂಡರ್ ಮಾಡ್ಯೂಲ್ 25 ಕಿಮೀ x 134 ಕಿಮೀ ಕಕ್ಷೆಯನ್ನು ಪ್ರವೇಶಿಸಿದೆ. ವಿಕ್ರಮ್ ಮಾಡ್ಯೂಲ್ ಅನ್ನು ಆಂತರಿಕವಾಗಿ ಪರಿಶೀಲಿಸಬೇಕಾಗಿದೆ.‌ ಆಯ್ದ ಲ್ಯಾಂಡಿಂಗ್ ಪ್ರದೇಶದಲ್ಲಿ ಸೂರ್ಯೋದಯಕ್ಕಾಗಿ ಎದುರು ನೋಡುತ್ತಿದ್ದೇವೆ. ಚಂದ್ರನ ಮೇಲಿನ ಲ್ಯಾಂಡಿಂಗ್ ಪ್ರಕ್ರಿಯೆಯು ಆಗಸ್ಟ್ 23 ರ ಸಂಜೆ 5.45ಕ್ಕೆ ಪ್ರಾರಂಭವಾಗುತ್ತದೆ‌
ಎಂದು ಇಸ್ರೋ ಟ್ಟಿಟ್ಟರ್ ನಲ್ಲಿ ತಿಳಿಸಿದೆ.

ಡಿ-ಬೂಸ್ಟಿಂಗ್ ಪೂರ್ಣಗೊಂಡ ನಂತರ, ವಿಕ್ರಮ್ ಲ್ಯಾಂಡರ್ ಚಂದ್ರನ ಕಕ್ಷೆಯಿಂದ ಸ್ವಯಂಚಾಲಿತ ಕ್ರಮದಲ್ಲಿ ಇಳಿಯುತ್ತದೆ.
ಅದೇ ಲ್ಯಾಂಡಿಂಗ್ ಪ್ರದೇಶವನ್ನು ನಿರ್ಧರಿಸುತ್ತದೆ. ಶುಕ್ರವಾರ ಮೊದಲ ಡಿ-ಬೂಸ್ಟಿಂಗ್ ಪೂರ್ಣಗೊಂಡ ನಂತರ, ಇಸ್ರೋ ಮಾಜಿ ಅಧ್ಯಕ್ಷ ಕೆ ಶಿವನ್, ಚಂದ್ರಯಾನ -2 ಮಿಷನ್‌ನಲ್ಲಿ ಬಳಸಲಾದ ಚಂದ್ರಯಾನ -3 ಲ್ಯಾಂಡರ್ ಅನ್ನು ಮೊದಲೇ ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳಿದರು.  ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಚಂದ್ರಯಾನ-2 ಉಡಾವಣೆಯಲ್ಲಿನ ದೋಷಗಳನ್ನು ಸರಿಪಡಿಸಲು ಈ ಕಾರ್ಯಾಚರಣೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದ್ದರು.

ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟ ನಂತರ, ಲ್ಯಾಂಡರ್ ಗುರುವಾರ ಚಂದ್ರನ ಮೇಲ್ಮೈಯ ಮೊದಲ ಸ್ಪಷ್ಟ ಚಿತ್ರಗಳನ್ನು ತೆಗೆದುಕೊಂಡು ಭೂಮಿಗೆ ಕಳುಹಿಸಿತು.  ವಿಕ್ರಮ್ ಚಂದ್ರನ ಮೇಲೆ ಇಳಿದ ಎರಡು ಗಂಟೆಗಳ ನಂತರ, ಪ್ರಗ್ಯಾನ್ ರೋವರ್ ಹೊರಬರುತ್ತದೆ ಮತ್ತು ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುತ್ತದೆ. 14 ದಿನಗಳವರೆಗೆ (ಚಂದ್ರನ ಮೇಲೆ ಒಂದು ದಿನ) ಚಂದ್ರನ ಮೇಲ್ಮೈಯನ್ನು ರಾಸಾಯನಿಕ ಸಂಯೋಜನೆಗಳು ಮತ್ತು ನೀರಿಗಾಗಿ ಹುಡುಕಲಾಗುತ್ತದೆ.

ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್ವಿಎಂ 3 ರಾಕೆಟ್ ಮೂಲಕ ಚಂದ್ರಯಾನ-3 ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಯಿತು. ಅದು ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment