Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿಕ್ಕಬಳ್ಳಾಪುರದಲ್ಲಿ ನಡೀತು ಮದುವೆಯಾಗದ ಯುವಕರಿಂದ ವಿಚಿತ್ರ ಆಚರಣೆ..!

Facebook
Twitter
Telegram
WhatsApp

 

 

ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಮಳೆ ನಾಪತ್ತೆಯಾಗಿದೆ. ಮಳೆ ಸರಿಯಾದ ಸಮಯಕ್ಕೆ ಬಂದಿದ್ದರೆ, ಇಷ್ಟೊತ್ತಿಗೆ ಹೊಲದಲ್ಲಿ ಬೀಜ ಮೊಳಕೆಯೊಡೆಯಬೇಕಿತ್ತು. ಆದರೆ ಮಳೆ ಗಗನ ಕುಸುಮವಾಗಿದೆ. ರೈತನ ನಿರೀಕ್ಷೆಯನ್ನೇ ಹುಸಿಗೊಳಿಸಿದೆ. ಮಳೆ ಬಾರದೆ ಇದ್ದಲ್ಲಿ ಸರ್ಕಾರ ಮೋಡ ಬಿತ್ತನೆ ಮಾಡುವ ಸಂಪ್ರದಾಯವಿಟ್ಟುಕೊಂಡಿದೆ. ಇತ್ತ ಜನ ಕೂಡ ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸುತ್ತಾರೆ. ಆದ್ರೆ ಚಿಕ್ಕಬಳ್ಳಾಪುರದಲ್ಲಿ ತುಂಬಾ ವಿಚಿತ್ರವಾದ ಸಂಪ್ರದಾಯವೊಂದು ಇದೆ.

ಬಾಗೇಪಲ್ಲಿಯ ಮಾಡಪ್ಪಲ್ಲಿಯ ಗ್ರಾಮದಲ್ಲಿನ ಜನ ಮಳೆಗಾಗಿ ದೇವರನ್ನೇ ಸುಡುತ್ತಾರೆ. ಮಳೆಗಾಗಿ ದೇವರನ್ನೇ ಸುಟ್ಟಿದ್ದಾರೆ. ಊರಿನ ಜನರು ಗ್ರಾಮದೇವತೆಗಳಿಗೆ ಬೆಂಕಿ ಹಚ್ಚಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ವಿಶೇಷ ಅಂದ್ರೆ ಮದುವೆಯಾಗದ ಯುವಕರಿಂದ ಈ ಆಚರಣೆ ಮಾಡಿಸಿದ್ದಾರೆ. ಈ ರೀತಿ ಆಚರಣೆ ಮಾಡುವುದರಿಂದ ಮಳೆ ಬರುತ್ತೆ ಎಂದೇ ಇಲ್ಲಿನ ಮಂದಿ ನಂಬಿದ್ದಾರೆ.

ಹೀಗಾಗಿ ಇಲ್ಲಿನ ವಿಚಿತ್ರ ಸಂಪ್ರದಾಯ ಕಂಡು ಎಲ್ಲರು ಅಚ್ಚರಿಗೊಂಡಿದ್ದಾರೆ. ಗ್ರಾಮದೇಚತೆಗಳನ್ನು ಸುಡುವಾಗ ಗಂಗಮ್ಮನ ಸುಡ್ರೋ.. ಚೌಡೇಶ್ವರಿಯನ್ನು ಸುಡ್ರೋ ಅಂತೆಲ್ಲಾ ಘೋಷಣೆ ಕೂಗಿದ್ದಾರೆ. ಈ ರೀತಿ ಕೂಗಿಕೊಂಡು ಆಚರಣೆ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!