ಶಕ್ತಿಧಾಮ ಮಕ್ಕಳ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ : ಶಿವಣ್ಣ ನೇತೃತ್ವದಲ್ಲಿ ಮಕ್ಕಳು ಮಾಡಿದ್ದೇನು..?

1 Min Read

 

 

ಮೈಸೂರು: ಶಕ್ತಿಧಾಮ ಈಗ ಶಿವಣ್ಣನ ಮುಂದಾಳತ್ವದಲ್ಲಿ ನಡೆಯುತ್ತಿದೆ. ಆಗಾಗ ಶಕ್ತಿಧಾಮಕ್ಕೆ ಶಿವಣ್ಣ ಹಾಗೂ ಗೀತ ಶಿವ ರಾಜ್ಕುಮಾರ್ ಭೇಟಿ ನೀಡುತ್ತಾ ಇರುತ್ತಾರೆ. ಈ ವಾರವೂ ಶಕ್ತಿಧಾಮಕ್ಕೆ ಭೇಟಿ ನೀಡಿದಾಗ ಮಕ್ಕಳಿಂದ ಮೆಚ್ಚುಗೆಯ ಕೆಲಸ ಮಾಡಿಸಿದ್ದಾರೆ.

ಫ್ರೆಂಡ್ಶಿಪ್ ಡೇ ಬಂತು ಅಂದ್ರೆ ಸಾಕು ಎಲ್ಲರೂ ತಮ್ಮ ತಮ್ಮ ಸ್ನೇಹಿತರಿಗೆ ಬ್ಯಾಂಡ್ ಕಟ್ಟಿ, ಶುಭಾಶಯ ತಿಳಿಸುತ್ತಾರೆ. ಆದ್ರೆ ಶಕ್ತಿಧಾಮ ಮಕ್ಕಳು ಫ್ರೆಂಡ್ಶಿಪ್ ಡೇಯನ್ನು ಬಹಳ ವಿಭಿನ್ನವಾಗಿ ಆಚರಣೆ‌ ಮಾಡಿದ್ದಾರೆ. ಸದಾ ಟ್ರಾಫಿಕ್ ನಲ್ಲಿ ನಿಂತು ಎಲ್ಲವನ್ನು ಸುಧಾರಿಸುವ ಪೊಲೀಸರ ಜೊತೆಗೆ ಫ್ರೆಂಡ್ಶಿಪ್ ಡೇ ಆಚರಿಸಿಕೊಂಡಿದ್ದಾರೆ.

ಜೀವ ಕೊಡೋ ಸ್ನೇಹಿತರ ಥರಾನೇ ಹಗಲು – ಇರಳು ರಸ್ತೆಗಳ ಮೇಲೆ ಸಾವಿರಾರು ಜನರ ಜೀವ ಕಾಪಾಡುವ ನಮ್ಮ ಮೈಸೂರಿನ ಟ್ರಾಫಿಕ್ ಪೊಲೀಸ್ ಶಕ್ತಿಯೊಂದಿಗೆ ನಮ್ಮ ಶಕ್ತಿಧಾಮದ ಮಕ್ಕಳ ಒಡನಾಟ ಹಾಗೂ ಸ್ನೇಹಿತರ ದಿನದ ಸಂಭ್ರಮ ಎಂದು ಶಿವಣ್ಣ ಟ್ವೀಟ್ ಕೂಡ ಮಾಡಿದ್ದಾರೆ. ಶಕ್ತಿಧಾಮದ ಮಕ್ಕಳ ಕೆಲಸಕ್ಕೆ ಎಲ್ಲರು ಭೇಷ್ ಎಂದಿದ್ದಾರೆ. ಅಷ್ಟೇ ಅಲ್ಲ ಪೊಲೀಸರು ಕೂಡ ಖುಷಿಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *