ಸ್ವಂತ ಬಲದಿಂದ ಹೋರಾಟ‌ಮಾಡುವ ಶಕ್ತಿ ಇದೆ : ಮಾಜಿ ಪ್ರಧಾನಿ ದೇವೇಗೌಡ

suddionenews
1 Min Read

 

 

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಭರವಸೆಯನ್ನು ಹೊಂದಿತ್ತು ಜೆಡಿಎಸ್ ಪಕ್ಷ. ಆದ್ರೆ ಅಂದುಕೊಂಡಷ್ಟು ಸೀಟುಗಳು ಬರಲಿಲ್ಲ. ಹೀಗಾಗಿ ಮುಂದಿನ ಚುನಾವಣೆಯ ಮೇಲೆ ಗಮನ ಕೇಂದ್ರಿಕರಿಸಿದ್ದು, ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ದೊಡ್ಡ ಗೌಡರು.

ಇಂದು ಮುಂದಿನ ಚುನಾವಣಾ ತಯಾರಿ ಬಗ್ಗೆ ಮಾತನಾಡಿರುವ ದೇವೇಗೌಡ ಅವರು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದೆ. ಸ್ವಂತ ಬಲದ ಮೇಲೆ ಸ್ಪರ್ಧಿಸುವ ಶಕ್ತಿ ನಮಗೆ ಇದೆ. ಪಕ್ಷ ಉಳಿಯಬೇಕು ಅಂದ್ರೆ ಏನು ಮಾಡಬೇಕು ಎಂಬುದನ್ನು ನಾವೂ ಚರ್ಚೆ ಮಾಡಬೇಕು ಎಂದಿದ್ದಾರೆ.

ಲೋಕಸಭಾ ಚುನಾವಣೆಯ ಬಗ್ಗೆ ಈಗಲೇ ಚರ್ಚೆ ಮಾಡಲು ಹೋಗಲ್ಲ. ಮುಂದೆ ಪಕ್ಷವನ್ನು ಹೇಗೆ ಅಭಿವೃದ್ಧಿ ಮಾಡಬೇಕು. ಪಕ್ಷ ಉಳಿಯಬೇಕು ಎಂದರೆ ಏನು ಮಾಡಬೇಕು..? ಎಂಬುದರ ಬಗ್ಗೆ ಚರ್ಚೆ ನಡೆಸುತ್ತೇವೆ. ನಾವೂ ಎರೆಉ ಬಾರಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೇವೆ. ಪಕ್ಷ ಉಳಿಯಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಯೋಚನೆ‌ ಮಾಡಬೇಕಾಗುತ್ತದೆ. ನಮ್ಮ ಶಕ್ತಿ ನಮ್ಮ ಕಾರ್ಯಕರ್ತರು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *