Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಚುನಾವಣೆಯಲ್ಲಿ ಗೆಲ್ಲುವುದೇ ನಾನು : ಜಿ. ರಘು ಆಚಾರ್

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮೇ.11) :  ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ, ಈ ಚುನಾವಣೆಯಲ್ಲಿ ನಾನು ಗೆದ್ದರು, ಸೋತರು ಸಹಾ ಚಿತ್ರದುರ್ಗದ ಜನತೆಗೆ ನಾನು ನನ್ನ ಪ್ರಣಾಳಿಕೆಯಲ್ಲಿ ನೀಡಿದಂತಹ ವಾಗ್ದಾನವನ್ನು ಈಡೇರಿಸಲು ನಾನು ಬದ್ದನಾಗಿದ್ದೇನೆ ಎಂದು 2023ರ ಚಿತ್ರದುರ್ಗ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ರಘುಆಚಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಅವರ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಓಡಿ ಹೋಗೋ ಮಗನಲ್ಲ, ನನ್ನ ಕ್ಷೇತ್ರದಲ್ಲಿ 30 ಸಾವಿರ ಮಕ್ಕಳು ಸಿಬಿಎಸ್‍ಸಿ ಶಾಲೆಯಲ್ಲಿ ಓದುವಂತೆ ಮಾಡುತ್ತೇನೆ. ಚುನಾವಣೆ ಸಮಯದಲ್ಲಿ ಮತದಾರರಿಗೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡುತ್ತೇನೆ.

ಸರ್ಕಾರದ ಹಣ ನೀಡಲಿ ನೀಡದಿರಲಿ ನಾನು ಅದನ್ನು ಜಾರಿ ಮಾಡುತ್ತೇನೆ. ಈ ದಿನದಿಂದ ನನ್ನ ಕುಟುಂಬಕ್ಕಾಗಲಿ, ನನ್ನ ಅಭೀಮಾನಿಗಳಿಗಾಗಲಿ, ಸ್ನೇಹಿತರಾಗಲಿ ತೊಂದರೆಯನ್ನು ನೀಡಿದರೆ ನಾನು ಸಹಾ ಆಟವನ್ನು ಆವರಿಗೆ ಆಡಿಸುತ್ತೇನೆ. ಆಹಿಂದ ಎಂದು ತೊಂದರೆಯನ್ನು ನೀಡುತ್ತಿದ್ದಾರೆ ಇದರ ಬಗ್ಗೆ ಮುಂದಿನ ದಿನದಲ್ಲಿ ಸರಿಯಾದ ರೀತಿಯಲ್ಲಿ ಮಾಡುತ್ತೇನೆ ಎಂದರು.

ಐಟಿಯವರ ಬಂದಿದ್ದು ನಿಜ ನೋಟಿಸ್ ನೀಡಿದ್ದು ನಿಜ, ಸುಮ್ಮನೇ ಸಮಯವನ್ನು ಹಾಳು ಮಾಡಿದ್ದಾರೆ. ಸಣ್ಣ ಜಾತಿಯವನೆಂದು ಈ ರೀತಿ ಕಿರುಳುಳವನ್ನು ನೀಡಲಾಗುತ್ತಿದೆ. ನಾನು ಅಹಿಂದನೇ ಸಿದ್ದಗಂಗಾ ಶ್ರೀಗಳ ಮಠದಲ್ಲಿಯೇ ನಾನು ಬೆಳದಿದ್ದು ಅಲ್ಲಿಯ ಗುಣಗಳು ನನಗೂ ಬಂದಿದೆ.

ನಾನು ಯಾರಿಗೂ ಸಹಾ ತೊಂದರೆಯನ್ನು ನೀಡಿದವನ್ನಲ್ಲ, ಎಂದ ಅವರು 17 ವರ್ಷದ ವಯಸ್ಸಿನ ಹುಡುಗ ಇಸ್ಪೇಟ್ ಆಡಲು ಪ್ರಾರಂಭ ಮಾಡಿದರೆ ಮುಂದಿನ ದಿನದಲ್ಲಿ ಮನೆಯನ್ನು ಹಾಳು ಮಾಡುತ್ತೇನೆ ಯಾವುದೇ ಕಾರಣದಿಂದಲೂ ಸಹಾ ಮೇ. 16ರ ನಂತರ ಚಿತ್ರದುರ್ಗದಲ್ಲಿ ಕ್ಲಬ್ ಇಸ್ಪೀಟ್ ಆಡಲು ಬಿಡುವುದಿಲ್ಲ, ರೌಡಿಜಂ ಮಾಡಲು ಬಿಡುವುದಿಲ್ಲ ನನ್ನ ಹಣೆಬರಹವನ್ನು ಬರೆದವರು ಚಿತ್ರದುರ್ಗದ ಜನ. ನಾನು ಇಲ್ಲೇ ಇರುತ್ತೇನೆ ಓಡಿ ಹೋಗುವ ಮಗ ನಾನಲ್ಲ ಈ ಚುನಾವಣೆಯಲ್ಲಿ ಗೆಲ್ಲುವುದೇ ನಾನು ಎಂದು ಆತ್ಮ ವಿಶ್ವಾಸದಿಂದ ರಘು ಆಚಾರ್ ನುಡಿದರು.

ನನಗೆ ಯಾವುದೇ ಭಯ ಇಲ್ಲ ನನ್ನ ಹಣವನ್ನು ನಾನು ಖರ್ಚು ಮಾಡುತ್ತೇನೆ, ಐಟಿಯವರು ನೋಟಿಸ್ ನೀಡಿದರೆ ಅದಕ್ಕೆ ತಕ್ಕ ಉತ್ತರವನ್ನು ನಮ್ಮ ವಕೀಲರು ನೀಡುತ್ತಾರೆ. ನಾನು ಯಾವುದೇ ರೀತಿಯ ದಂಧೆಯನ್ನು ಮಾಡಿಲ್ಲ, ನನ್ನ ಸ್ವಂತ ಹಣದಿಂದ ಬದುಕನ್ನು ನಡೆಸುತ್ತಿದ್ದೇನೆ, ಐಟಿಯವರ ಪ್ರಶ್ನೆಗೆ ತಕ್ಕ ಉತ್ತರವನ್ನು ನೀಡಲಾಗುವುದು ಪ್ರಣಾಳಿಕೆಯನ್ನು ಹೇಳಿದಂತೆ ಮಾಡುತ್ತೇನೆ ಆಸ್ಪತ್ರೆಯನ್ನು ಸಹಾ ಕಟ್ಟಿಸುತ್ತೇನೆ. ಇದರ ಬಗ್ಗೆ ಯಾವುದೇ ಆನುಮಾನ ಬೇಡ ಎಂದು ಹೇಳಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!