‘ಅಮೃತ ವರ್ಷಿಣಿ’ ಶರತ್ ಬಾಬು ಸ್ಥಿತಿ ಗಂಭೀರ : ಆಸ್ಪತ್ರೆಗೆ ದಾಖಲು..!

suddionenews
1 Min Read

 

ಚೆನ್ನೈ: ಬಹುಭಾಷಾ ನಟ ಶರತ್ ಬಾಬುಗೆ ಅನಾರೋಗ್ಯ ಕಾಡಿದೆ. ಇದರ ಪರಿಣಾಮ ಶರತ್ ಬಾಬು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಶರತ್ ಬಾಬುಗೆ ಏನಾಗಿದೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.

ಶರತ್ ಬಾಬು ಅನಾರೋಗ್ಯದ ವಿಚಾರವನ್ನು ಕರಾಟೆ ಕಲ್ಯಾಣಿ ಹಂಚಿಕೊಂಡಿದ್ದಾರೆ. ನನ್ನ ನೆಚ್ಚಿನ ಹೀರೋ ಬೇಗನೆ ಗುಣಮುಖರಾಗಲಿ ಎಂದು ಕರಾಟೆ ಕಲ್ಯಾಣಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳೆಲ್ಲಾ ಹಾರೈಸಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಅಂತಿದ್ದಾರೆ.

ಇನ್ನು ಶರತ್ ಬಾಬು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಅಮೃತವರ್ಷಿಣಿ, ರಣಚಂಡಿ, ಶಕ್ತಿ, ಬೃಂದಾವನ, ಹೃದಯ ಹೃದಯ, ನಮ್ಮೆಜಮಾನ್ರು ಸೇರಿದಂತೆ ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು.

Share This Article
Leave a Comment

Leave a Reply

Your email address will not be published. Required fields are marked *