Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ಹುಟ್ಟುಹಬ್ಬ : ಅಭಿಮಾನಿಗಳಿಗೆ ಒಂದು ಕಡೆ ಸಂಭ್ರಮ.. ಮತ್ತೊಂದು ಕಡೆ ಅಪ್ಪು ಇಲ್ಲದ ಬೇಸರ..!

Facebook
Twitter
Telegram
WhatsApp

 

 

ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬ. 48ನೇ ವರ್ಷದ ಹುಟ್ಟುಹಬ್ಬ. ಅವರಿಲ್ಲದೆ ಅಭಿಮಾನಿಗಳೇ ಆಚರಿಸುತ್ತಿರುವ ಎರಡನೇಯ ಹುಟ್ಟುಹಬ್ಬ. ವಿಧಿಯ ಕರೆಗೆ ಅಪ್ಪು ಹೊರಟು ಹೋಗಿ ಒಂದು ವರ್ಷದ ಮೇಲಾಯ್ತು. ಆದ್ರೆ ಅಭಿಮಾನಿಗಳು ಅವರಿಗಾಗಿ ತಮ್ಮ ಅಭಿಮಾನವನ್ನು ಮರೆತಿಲ್ಲ. ಅವರ ಸಮಾಧಿಯ ಬಳಿಯೇ ಅವರನ್ನು ಕಾಣುತ್ತಿದ್ದಾರೆ.

ನಿನ್ನೆ ಮಧ್ಯರಾತ್ರಿಯಿಂದಾನೇ ಅಪ್ಪು ಅಭಿಮಾನಿಗಳು ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಫಲ, ಪುಷ್ಪಗಲನ್ನು ತಂದು ಅಪ್ಪು ಅವರ ಬಳಿ ಇಟ್ಟು, ನಮಸ್ಕಾರ ಮಾಡಿ, ಶುಭಕೋರುತ್ತಿದ್ದಾರೆ. ಇನ್ನು ಬೆಳಗ್ಗೆ ಕೂಡ ಅಭಿಮಾನಿಗಳೆಲ್ಲ ಸಮಾಧಿ ಬಳಿ ಸಾಲುಗಟ್ಟಿ ನಿಂತಿದ್ದಾರೆ.

ಕುಟುಂಬಸ್ಥರು ಈಗಾಗಲೇ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಅಪ್ಪು ಅಭಿಮಾನಿಗಳಿಗಾಗಿ ಗಿಡಗಳನ್ನು ನೀಡುತ್ತಿದ್ದಾರೆ. ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸಿ, ರಾಜ್‍ಕುಮಾರ್ ಅವರ ಸಮಾಧಿ ಬಳಿ ಬಂದು ಗಿಡಗಳನ್ನು ತೆಗೆದುಕೊಂಡು ಸಾಗುತ್ತಿದ್ದಾರೆ. ಸುಮಾರು ಹತ್ತು ಸಾವಿರ ಗಿಡಗಳನ್ನು ದೊಡ್ಮನೆ ಕುಟುಂಬ ಹಂಚಿಕೆ ಮಾಡ್ತಾ ಇದೆ.

ಆದ್ರೆ ಅಪ್ಪು ಕಳೆದುಕೊಂಡು ಒಂದು ವರ್ಷ ನಾಲ್ಕು ತಿಂಗಳು. ಆ ನೋವಿನಲ್ಲಿಯೇ ಕರ್ನಾಟಕದ ಜನತೆ ದಿನದೂಡಿ ಬಿಟ್ಟರು. ಆದರೂ ಅಪ್ಪು ನಮ್ಮೊಂದಿಗಿಲ್ಲ ಅಂತ ಅನ್ನಿಸೋದೆ ಇಲ್ಲ. ಅವರ ಸಿನಿಮಾ, ಅವರ ಮಾತುಗಳೇ ಎಲ್ಲರಿಗೂ ಸ್ಪೂರ್ತಿ. ಅವರ ಸಮಾಧಿ ನೋಡಿದಾಗ, ಅವರ ಫೋಟೋಗೆ ಹಾರ ಹಾಕಿರುವುದನ್ನು ನೋಡಿದಾಗಲೇ ಅಪ್ಪು ಇಲ್ಲ ಎಂಬ ಬೇಸರ ಕಾಡುತ್ತೆ. ಜೊತೆಗಿರದ ಜೀವ ಎಂದಿಗಿಂತ ಜೀವಂತ ಎಂಬ ಮಾತಿನಂತೆ ಸದಾ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

error: Content is protected !!