Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಟಿ ರವಿ ವಿರುದ್ಧ ರೊಚ್ಚಿಗೆದ್ದ ಚಿಕ್ಕಮಗಳೂರು ಗ್ರಾಮಸ್ಥರು..!

Facebook
Twitter
Telegram
WhatsApp

 

ಚಿಕ್ಕಮಗಳೂರು: ಸಿಟಿ ರವಿ ಜಿಲ್ಲೆಯಲ್ಲಿ ಸಾಕಷ್ಟು ಓಡಾಡುತ್ತಾ ಇರುತ್ತಾರೆ. ಆದ್ರೆ ಈಗ ಅಭಿವೃದ್ಧಿ ವಿಚಾರವಾಗಿ ಜನ ಪ್ರಶ್ನೆ ಮಾಡುವಂತೆ ಮಾಡಿಕೊಂಡಿದ್ದಾರೆ. ಉದ್ದೆಬೋರನಹಳ್ಳಿ ಜನ ಸಿಟಿ ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮಯ್ಯ ಅವರು ಈಗಾಗಲೇ ಬಿಜೆಪಿ ತೊರೆದು ಸಿಟಿ ರವಿ ವಿರುದ್ಧ ಕೆಂಡಕಾರಿ, ಕಾಂಗ್ರೆಸ್ ಗೆ ಸೇರಿದ್ದಾರೆ. ಹೇಳಿ‌ ಕೇಳಿ ಲಿಂಗಾಯತರೇ ಹೆಚ್ಚಾಗಿರುವಂತ ಕ್ಷೇತ್ರ ಉದ್ದೆಬೋರನಹಳ್ಳಿ. ಹೀಗಾಗಿ ಅಲ್ಲಿನ ಮತಗಳನ್ನು ಸೆಳೆಯುವುದಕ್ಕೆ ಸಿಟಿ ರವಿ ಪ್ರಯತ್ನ ನಡೆಸುತ್ತಿದ್ದು, ತನ್ನ ಬಾಮೈದನನ್ನು ಮುಂದೆ ಬಿಟ್ಟು, ಸಭೆಗಳನ್ನು ನಡೆಸುತ್ತಿದ್ದಾರೆ.

ಉದ್ದೆಬೋರನಹಳ್ಳಿ ಸಿಟಿ ರವಿ ಪ್ರಚಾರ ಸಭೆಯನ್ನು, ಸಿಟಿ ರವಿ ಪರವಾಗಿ ಬಾಮೈದ ಸಭೆಗೆ ಮುಂದಾಗಿದ್ದರು. ಈ ವೇಳೆ ಅಲ್ಲಿನ ಜನ ರೊಚ್ಚಿಗೆದ್ದಿದ್ದಾರೆ. ಲಿಂಗಾಯತರ ಅಭಿವೃದ್ಧಿಗೆ ಸಿಟಿ ರವಿ ಕೊಟ್ಟ ಕೊಡುಗೆ ಏನು..? ಅಭಿವೃದ್ದಿ ಮಾಡುವುದಕ್ಕೆ ಇಷ್ಟು ವರ್ಷ ಬೇಕಾಯ್ತಾ..? ಇಷ್ಟು ವರ್ಷ ಎಲ್ಲಿ ಹೋಗಿದ್ರಿ. ಈಗ ಗ್ರಾಮಕ್ಕೆ ಬಂದಿದ್ದೀರಾ..? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇತ್ತಿಚೆಗೆ ಗ್ರಾಮದ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಲಾಗಿತ್ತು. ಆಗ ಸೀರೆ ಯಾರಿಗೆ ಬೇಕು. ಸೀರೆ ತೆಗೆದುಕೊಳ್ಳುವುದಕ್ಕೆ ದೇವರು ಶಕ್ತಿ ಕೊಟ್ಟಿದ್ದಾರೆ. ಸೀರೆ ಬೇಡ ಮೊದಲು ಊರು ಉದ್ಧಾರ ಮಾಡಿ ಎಂದು ಜನ ಬಿಜೆಪಿ ಕೊಟ್ಟ ಸೀರೆಯನ್ನೇ ಸುಟ್ಟು ಹಾಕಿತ್ತು. ಈಗ ನೇರ ನೇರವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್ : ಶಿವಮೊಗ್ಗದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಶಿವಮೊಗ್ಗ: ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳು ಭರ್ಜರಿ ಮತಯಾಚನೆ ನಡೆಸುತ್ತಿವೆ. ರಾಹುಲ್ ಗಾಂಧಿ ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದು, ಗೀತಾ ಶಿವ ರಾಜ್‍ಕುಮಾರ್ ಪರವಾಗಿ ಮತಯಾಚನೆ ಮಾಡಿದ್ದಾರೆ. ಈ ವೇಳೆ

ಪ್ರಜ್ವಲ್ ರೇವಣ್ಣ ತಪ್ಪಿಸಿಕೊಳ್ಳಲು ಆಗಲ್ಲ.. ಬರದೆ ಇದ್ದರೆ ಅರೆಸ್ಟ್ ಮಾಡ್ತೀವಿ : ಜಿ ಪರಮೇಶ್ವರ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಹಾಸನದ ಹಾದಿ ಬೀದಿಯಲ್ಲಿ ಚೆಲ್ಲಾಡಿವೆ. ಈ ವಿಚಾರ ಬೆಳಕಿಗೆ ಬಂದ ಕೂಡಲೇ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ವಹಿಸಿದೆ‌. ಇದರ ಬೆನ್ನಲ್ಲೇ ಪ್ರಜ್ವಲ್

error: Content is protected !!