Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದೂ ದೇವಾಲಯದಲ್ಲಿ ವಿವಾಹವಾದ ಮುಸ್ಲಿಂ ಜೋಡಿ

Facebook
Twitter
Telegram
WhatsApp

ಸುದ್ದಿಒನ್ ವೆಬ್ ಡೆಸ್ಕ್

ಒಂದು ಮದುವೆ ಮತ್ತೊಮ್ಮೆ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶವನ್ನು ಸಾರಿ ಹೇಳಿದೆ.

ಮುಸ್ಲಿಂ ಜೋಡಿಯೊಂದು ಹಿಂದೂ ದೇವಾಲಯದಲ್ಲಿ ವಿವಾಹವಾಗಿದ್ದು ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿದೆ.

ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ರಾಮ್‌ಪುರ ಹಿಂದೂ ದೇವಾಲಯದಲ್ಲಿ ಈ ಮದುವೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಠಾಕೂರ್ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಈ ಮದುವೆ ನಡೆದಿರುವುದು ವಿಶೇಷ.

ಇದಲ್ಲದೆ, ಹಿಂದೂಗಳು ಮತ್ತು ಮುಸ್ಲಿಮರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು.
ಮೌಲ್ವಿ ಸೇರಿದಂತೆ ಕುಟುಂಬ ವರ್ಗದವರು ಮತ್ತು ವಕೀಲರ ಸಮ್ಮುಖದಲ್ಲಿ ವಿವಾಹ ನಡೆಯಿತು. ಧಾರ್ಮಿಕ ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಜನರಿಗೆ ತಿಳಿಸುವುದು ದೇವಾಲಯದ ಆವರಣದಲ್ಲಿ ವಿವಾಹದ ಮುಖ್ಯ ಉದ್ದೇಶವಾಗಿದೆ.

ಸತ್ಯನ್ನಾರಾಯಣ ದೇವಸ್ಥಾನ ಸಂಕೀರ್ಣವು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜಿಲ್ಲಾ ಕಚೇರಿಯಾಗಿದೆ ಎಂಬುದು ಗಮನಾರ್ಹ.

ಠಾಕೂರ್ ಸತ್ಯನಾರಾಯಣ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ ಮಾತನಾಡಿ..’ವಿಶ್ವ ಹಿಂದೂ ಪರಿಷತ್ ಈ ದೇವಾಲಯದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಚೇರಿಯೂ ಆಗಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಆರ್‌ಎಸ್‌ಎಸ್ ಆಗಾಗ್ಗೆ ಮುಸ್ಲಿಂ ವಿರೋಧಿ ಎಂದು ಆರೋಪಿಸಲಾಗುತ್ತದೆ.

ಆದರೆ ಇಲ್ಲೊಂದು ಮುಸ್ಲಿಂ ಜೋಡಿ ಹಿಂದೂ ದೇವಾಲಯದ ಆವರಣದಲ್ಲಿ ವಿವಾಹವಾಯಿತು ಸನಾತನ ಧರ್ಮ ಸದಾ ಎಲ್ಲರನ್ನೂ ಒಳಗೊಳ್ಳುವಂತೆ ಪ್ರೇರೇಪಿಸುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ ಎಂದರು.

ವಧುವಿನ ತಂದೆ ಮಹೇಂದ್ರ ಸಿಂಗ್ ಮಲಿಕ್ ಮಾತನಾಡಿ, ‘ರಾಂಪುರದ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ಮಗಳ ಮದುವೆ ನಡೆದಿದ್ದು, ವಿಶ್ವ ಹಿಂದೂ ಪರಿಷತ್ ಆಗಲಿ, ದೇವಸ್ಥಾನದ ಟ್ರಸ್ಟ್ ಆಗಲಿ, ನಗರದ ಜನತೆ ಸಕಾರಾತ್ಮಕವಾಗಿ, ಉತ್ಸಾಹದಿಂದ ಈ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ್ದರು.

ರಾಂಪುರದ ಜನರು ಸಹೋದರ ಭಾವವನ್ನು ತೋರಿಸಿದ್ದಾರೆ.  ಪರಸ್ಪರ ಭ್ರಾತೃತ್ವಕ್ಕೆ ಧಕ್ಕೆಯಾಗುವಂತೆ ನಾವು ಪರಸ್ಪರ ದಾರಿ ತಪ್ಪಿಸಬಾರದು ಎಂದರು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಎಂ.ಟೆಕ್ ಓದಿರುವ ಮಗಳು ಚಿನ್ನದ ಪದಕ ಪಡೆದಿದ್ದು, ಮಗ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದರು.

ಮೂರು ವರ್ಷಗಳ ಹಿಂದೆ ಕೇರಳದ ಮಸೀದಿಯೊಂದರಲ್ಲಿ ಹಿಂದೂ ದಂಪತಿಗಳು ವಿವಾಹವಾಗಿದ್ದರು. ಔತಣಕೂಟದಲ್ಲಿ 1000 ಅತಿಥಿಗಳಿಗೆ ಸಸ್ಯಾಹಾರವನ್ನು ನೀಡಲಾಯಿತು. ಅಲ್ಲದೆ, ವಧುವಿಗೆ ವರದಕ್ಷಿಣೆಯಾಗಿ ರೂ. 2 ಲಕ್ಷ ನೀಡಲಾಯಿತು. ಮಸೀದಿಯ ಧಾರ್ಮಿಕ ಮುಖಂಡರು ಚಿನ್ನದ ಆಭರಣಗಳನ್ನು ನೀಡುವ ಮೂಲಕ ತಮ್ಮ ಮಹಾನ್ ಹೃದಯವನ್ನು ತೋರಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತ ಮಹೋತ್ಸವ | ಚಿತ್ರದುರ್ಗ ಭಾವೈಕ್ಯತೆಯ ಊರು, ಶಾಂತಿಯ ತೋಟ : ಎಂ.ಕೆ.ತಾಜ್‍ಪೀರ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಜು. 7 :  ಚಿತ್ರದುರ್ಗ ಎಂದರೆ ಭಾವ್ಯಕತ್ಯೆಯ ಶಕ್ತಿಯನ್ನು ಹೊಂದಿದ ಊರಾಗಿದೆ ಇಲ್ಲಿ ಮಠಗಳು, ಮಸೀದಿಗಳು,

ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಎಸ್ಟಿ ವಿಭಾಗದ ಅಧ್ಯಕ್ಷ ಬಿ.ಮಂಜುನಾಥ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್,ಚಿತ್ರದುರ್ಗ, ಜುಲೈ. 07 : ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಮಂಜುನಾಥ್ ಲೋಕೋಪಯೋಗಿ ಸಚಿವ ಸತೀಶ್‍ಜಾರಕಿಹೊಳಿರವರ

ರಾಜಕೀಯದಲ್ಲಿ ಮುಸ್ಲಿಂ ಸಮಾಜಕ್ಕೆ ಅಧಿಕಾರವಿಲ್ಲ, ಆದ್ಯತೆಯಿಲ್ಲ, ಮುಸ್ಲಿಮರು ಕೇವಲ ಮತ ನೀಡುವುದಕ್ಕಷ್ಟೆ ಸೀಮಿತ : ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್,ಚಿತ್ರದುರ್ಗ, ಜುಲೈ. 07 : ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸಿದರೆ ಇತರೆಯವರಿಗೆ ಪ್ರೇರಣೆಯಾಗುತ್ತದೆಂದು

error: Content is protected !!