ಜೀವನ್ಮರಣದ ನಡುವೆ ಹೋರಾಡುತ್ತಿರುವ ಅಭಿಮಾನಿ ಕಂಡು ಕಣ್ಣೀರಾದ ಧ್ರುವ ಸರ್ಜಾ..!

1 Min Read

ನಟ ಧ್ರುವ ಸರ್ಜಾ ಅವರ ಅಭಿಮಾನಿಯೊಬ್ಬ ಫೆಬ್ರವರಿ 14ರಂದು ಚಿಕ್ಕಬಳ್ಳಾಪುರ ಶಿಡ್ಲಘಟ್ಟದ ಬಳಿ ಬೈಕ್ ಆಕ್ಸಿಡೆಂಟ್ ನಡೆದಿತ್ತು. ಈ ವೇಳೆ ಧ್ರುವ ಅಭಿಮಾನಿ ಪೃಥ್ವಿರಾಜ್ ತಲೆಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೂಡ ನೀಡಲಾಗಿತ್ತು. ಆದ್ರೆ ಈನ್ನು ಕೋಮಾದಿಂದ ಹೊರಗೆ ಬಂದಿಲ್ಲ ಎಂಬ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ.

ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೃಥ್ವಿರಾಜ್ ಮತ್ತೆ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಚಾರ ತಿಳಿದ ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ. ಪೃಥ್ವಿರಾಜ್ ದೇಹವನ್ನು ದಾನ ಮಾಡುವುದಕ್ಕೆ ಹೊರಟಿದ್ದಾರೆ. ಅದಕ್ಕೂ ಮುನ್ನ ಕೋಮಾದಲ್ಲಿದ್ದರು ಆತನ ಆಸೆ ಈಡೇರಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ.

ಪೃಥ್ವಿರಾಜ್, ಧ್ರುವ ಸರ್ಜಾ ಅಪ್ಪಟ ಅಭಿಮಾನಿಯಾಗಿದ್ದರು. ಅಂದು ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುತ್ತಿದ್ದ ಕಾರಣವೇ ಇಂದು ಕೋಮಾ ಸ್ಥಿತಿ ತಲುಪುವುದಕ್ಕೆ ಕಾರಣ ಎನ್ನಲಾಗಿದೆ. ಧ್ರುವ ಸರ್ಜಾ ಅವರನ್ನು ನೋಡಲೇಬೇಕು ಆಸೆ ಇಟ್ಟುಕೊಂಡಿದ್ದರಂತೆ ಪೃಥ್ವಿರಾಜ್. ಹೀಗಾಗಿ ಇಂದು ಮಧ್ಯಾಹ್ನ ಧ್ರುವ ಸರ್ಜಾ ಕೂಡ ಆಸ್ಪತ್ರೆಗೆ ಭೇಟಿ ನೀಡಿ, ಅಭಿಮಾನಿಯನ್ನು ನೋಡಿಕೊಂಡು ಬಂದಿದ್ದಾರೆ. ಅವರ ಪೋಷಕರು ಕಣ್ಣೀರು ಹಾಕಿದ್ದನ್ನು ಕಂಡು ಧ್ರುವ ಅವರಿಗೂ ಕಣ್ಣೀರು ಒದ್ದೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *