Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗ ಜಿಲ್ಲೆಯ ಈ ತಾಲ್ಲೂಕಿನಲ್ಲಿ ಫೆಬ್ರವರಿ 16ರಂದು ವಿದ್ಯುತ್ ವ್ಯತ್ಯಯ

---Advertisement---

ಚಿತ್ರದುರ್ಗ(ಫೆ.14) : 220 ಕೆ.ವಿ.ಎ ಎಸ್.ಆರ್.ಎಸ್, ಕವಿಪ್ರನಿನಿ ಚಿತ್ರದುರ್ಗ ವತಿಯಿಂದ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ 220 ಕೆ.ವಿ ಮಧುರೆ ಸ್ವೀಕರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ಈ ಸ್ವೀಕರಣಾ ಕೇಂದ್ರದಿಂದ  ಹೊರಹೋಗುವ 66 ಕೆ.ವಿ. ಮಾರ್ಗಗಳಿಂದ ವಿದ್ಯುತ್ ಸರಬರಾಜು ಮಾಡುವ ಹಾಲುರಾಮೇಶ್ವರ, ಹೊಸದುರ್ಗ, ನೀರಗುಂದ, ಮಾಡದಕೆರೆ, ರಾಮಗಿರಿ ಮತ್ತು ಬಾಗೂರು ವಿ.ವಿ ಕೇಂದ್ರಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಈ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೋಗುವ ಎಲ್ಲಾ ಎನ್‍ಜೆವೈ ಮತ್ತು ಕೃಷಿ 11 ಕೆವಿ ಮಾರ್ಗಗಳಲ್ಲಿ ಇದೇ ಫೆಬ್ರವರಿ 16ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು: ಮಧುರೆ, ಗುತ್ತಿಕಟ್ಟೆ, ಮಾವಿನಕಟ್ಟೆ, ದೇವಿಗೆರೆ, ಹಾಲುರಾಮೇಶ್ವರ, ಹುಣವಿನೋಡು, ದೊಡ್ಡಘಟ್ಟ, ಜಾನಕಲ್ಲು, ತನಿಕೆಕಲ್ಲು, ಕಂಠಾಪುರ, ದೇವಪುರ, ರಾಮಜ್ಜನಹಳ್ಳಿ, ಅತ್ತ್ತಿಮಗ್ಗೆ, ಹೋನ್ನೇನಹಳ್ಳಿ, ದುಗ್ಗಾವರ, ಗೂಳಿಹಟ್ಟಿ, ಬೋಚೆನಹಳ್ಳಿ, ಹೊಸದುರ್ಗ, ವೇದಾವತಿ ವಾಟರ್ ಸಪ್ಲೈ, ಕಪ್ಪಗೆರೆ, ಕೊರಟಗೆರೆ, ಸಂಕಯ್ಯನಹಟ್ಟಿ, ಸಿದ್ದರಾಮನಗರ, ಚನ್ನಸಮುದ್ರ, ನೀರಗುಂದ, ಅದ್ರಿಕಟ್ಟೆ, ಶ್ರೀಮಠ, ಆಲದಹಳ್ಳಿ,  ಸೀರನಕಟ್ಟೆ, ರಂಗಪ್ಪ ದೇವಸ್ಥಾನ, ಎಸ್.ಕೆ.ಹಳ್ಳಿ, ಕೆಂಕೆರೆ, ನಾಕಿಕೆರೆ, ಪೂಜಾರಹಟ್ಟಿ, ಮಾಡದಕೆರೆ, ಕಣಿವೆಹಳ್ಳಿ, ತಾಲಘಟ್ಟ, ಗೌಡಿಹಳ್ಳಿ, ಗುಂಡಸಮುದ್ರ, ರಾಮಗಿರಿ, ತುಪ್ಪದಹಳ್ಳಿ, ಕಾಲ್ಕೆರೆ, ಆರ್.ನುಲೆನೂರು, ಆರ್.ಡಿ.ಕಾವಲು, ಹನುಮಲಿ, ಮುದ್ದಾಪುರ, ರಂಗಾಪುರ, ಹೊಸದುರ್ಗ ರಸ್ತೆ ಎಕ್ಸ್ ಪ್ರೇಸ್, ಬಾಗೂರು, ಐಲಾಪುರ, ಹೆಬ್ಬಳ್ಳಿ, ಸಾಣಿಹಳ್ಳಿ, ಎಸ್.ಆರ್.ಪುರ, ಆನೀವಾಳ, ಹೊಸದುರ್ಗ ರಸ್ತೆ ಗ್ರಾಮೀಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

220 ಕೆ.ವಿ.ಎ ಎಸ್.ಆರ್.ಎಸ್, ಕವಿಪ್ರನಿನಿ., ಚಿತ್ರದುರ್ಗ ವತಿಯಿಂದ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ. ಮಾಡನಾಯಕನಹಳ್ಳಿ ಮತ್ತು ತುರುವನೂರು ವಿ.ವಿ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಕ್ಕಾಗಿ ವಿ.ವಿ ಕೇಂದ್ರಗಳಿಗೆ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಎನ್.ಜೆ.ವೈ ಮತ್ತು ಕೃಷಿ 11 ಕೆ.ವಿ ಮಾರ್ಗಗಳಲ್ಲಿ ಇದೇ ಫೆಬ್ರವರಿ 16ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು: ಐನಹಳ್ಳಿ, ಮಾದನಾಯ್ಕನಹಳ್ಳಿ, ಸಿ.ಜಿ.ಹಳ್ಳಿ, ಯಳವರ್ತಿ, ಮುದ್ದಾಪುರ, ಹೊಸಗೋಲ್ಲರಹಟ್ಟಿ, ರಾಯನಹಳಿ, ಸುರೇನಹಳ್ಳಿ, ಬೋಮ್ಮಕ್ಕನಹಳ್ಳಿ, ಕೋನಬೇವು, ಅವಳೇನಹಳ್ಳಿ, ದೊಡ್ಡಘಟ್ಟ, ತುರುವನೂರು, ಕರಿಯಮ್ಮನಹಟ್ಟಿ, ಕೋಟೆಹಟ್ಟಿ, ಹುಣಸೆಕಟ್ಟೆ, ಪೇಲಾರಹಟ್ಟಿ, ಉಪ್ಪಾರಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...