Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ನೇಹಿತೆಯಿಂದ ದೂರ ಮಾಡಿ, ಆಕೆಯ ಗಂಡನನ್ನೇ ಮದುವೆಯಾದಳು : ಆರೋಪಕ್ಕೆ ‘ಬಿಂದಾಸ್’ ನಟಿ ಹೇಳಿದ್ದೇನು..?

Facebook
Twitter
Telegram
WhatsApp

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಿಂದಾಸ್ ಸಿನಿಮಾದಲ್ಲಿ ನಟಿ ಹನ್ಸಿಕಾ ಮೋಟಾನ್ವಿ ಮಿಂಚಿದ್ದರು. ಇತ್ತಿಚೆಗಷ್ಟೇ ಅದ್ದೂರಿಯಾಗಿ ಬ್ಯುಸಿನೆಸ್ ಮ್ಯಾನ್, ಸೋಹೈಲ್ ಜೊತೆಗೆ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಆದರೆ ಸೋಹೈಲ್, ಹನ್ಸಿಕಾ ಆಪ್ತ ಸ್ನೇಹಿತೆಯ ಪತಿ. ಅವರಿಂದ ದೂರಾಡಿ, ನಟಿ ತಾನೇ ಮದುವೆಯಾದರು ಎಂಬ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಅದಕ್ಕೆ ನಟಿ ಹಾಗೂ ಸೋಹೈಲ್ ಇಬ್ಬರು ಉತ್ತರ ನೀಡಿದ್ದಾರೆ.

ಕೆಲ ವರ್ಷಗಳ ಡೇಟಿಂಗ್ ಬಳಿಕ ಹನ್ಸಿಕಾ ಹಾಗೂ ಸೋನೈಲ್ ಮದುವೆಯಾಗಿದ್ದಾರೆ. ಒಟಿಟಿನಲ್ಲಿ ಮದುವೆ ವಿಡಿಯೋ ಪ್ರಸಾರವಾಗುತ್ತಿದ್ದು, ಇದರ ಮೊದಲ ಎಪಿಸೋಡಿನಲ್ಲಿ ಹನ್ಸಿಕಾ ಹಾಗೂ ಸೋನೈಲ್ ತಮ್ಮ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹನ್ಸಿಕಾ ತನ್ನ ಮೇಲಿದ್ದ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರಿಂಕಿ ಮತ್ತು ಹನ್ಸಿಕಾ ಇಬ್ಬರು ಫ್ರೆಂಡ್ಸ್. ಸೋನೈಲ್ ಹಾಗೂ ರಿಂಕಿ ಮದುವೆಯಾಗಿದ್ದರು. ಈ ಇಬ್ಬರ ಮದುವೆಗೆ ಹನ್ಸಿಕಾ ಕೂಡ ಹೋಗಿದ್ದರು. ಆದ್ರೆ ಈಗ ಅದೇ ಸೋನೈಲ್ ನ ಹನ್ಸಿಕಾ ಮದುವೆಯಾಗಿದ್ದಾರೆ ಎಂಬ ಆರೋಪಕ್ಕೆ ಉತ್ತರ ಕೊಟ್ಟ ನಟಿ, ಆ ಸಮಯದಲ್ಲಿ ಆ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ, ಎಲ್ಲವೂ ನಂದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೂ ನನಗೂ ಸಂಬಂಧವೇ ಇಲ್ಲ. ನಾನು ಪಬ್ಲಿಕ್ ಫಿಗರ್ ಆಗಿರುವ ಕಾರಣ, ನನ್ನ ಕಡೆ ಬೆರಳು ಮಾಡಿ ತೋರಿಸುವುದು ಬಹಳ ಸುಲಭ ಎ‌ಂದಿದ್ದಾರೆ.

ಇನ್ನು ಸೋಹೈಲ್ ಕೂಡ ಈ ಬಗ್ಗೆ ಮಾತನಾಡಿದ್ದು, ನಾನು ಈ ಮೊದಲು ಮದುವೆಯಾಗಿದ್ದೆ. ಆ ಮದುವೆ ಮುರಿದು ಬಿತ್ತು. ಇದಕ್ಕರ ಹನ್ಸಿಕಾ ಕಾರಣ ಎಂದು ಹೇಳಲಾಗಿತ್ತು. ಆದ್ರೆ ಅದು ಸತ್ಯವಲ್ಲ. ನಾವಿಬ್ಬರು ಸ್ನೇಹಿತರು. ಹನ್ಸಿಕಾ ನನ್ನ ಮದುವೆಗೆ ಹಾಜರಾಗಿದ್ದ ಫೋಟೋ ನೋಡಿದ್ದರಿಂದ ಆ ರೀತಿಯ ಊಹಾಪೋಹಗಳು ಹಬ್ಬಿದ್ದವು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!