Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

‘ಸಲಗ’ ಸುನಾಮಿ ಎಂಟ್ರಿಗೆ ಕೌಂಟ್ ಡೌನ್ ಶುರು- ಕ್ರೇಜ್ ಅಂತೂ ಬಲು ಜೋರು..!

Facebook
Twitter
Telegram
WhatsApp

ಲಾಕ್ ಡೌನ್ ಕೊರೋನಾ ಆರ್ಭಟದ ನಂತರ ಈಗ ಗಾಂಧಿನಗರದಲ್ಲಿ ಸಿನಿಮಾ ಸುನಾಮಿ ಶುರುವಾಗಿದೆ. ಅಂದ ಹಾಗೆ ಸದ್ಯ ಥಿಯೇಟರ್ ನಲ್ಲಿ 100% ಪ್ರೇಕ್ಷಕರಿಗೆ ಅವಕಾಶ ನೀಡಿರೋ ಬೆನ್ನಲ್ಲೆ ಸಲಗ ಸೌಂಡ್ ಮಾಡೋಕೆ ರೆಡಿಯಾಗಿದೆ. ದುನಿಯಾ ವಿಜಯ್ ನಾಯಕನಾಗಿ ನಟಿಸಿ, ನಿರ್ದೇಶನ ಮಾಡಿರೋ ಸಲಗದ ಸಂಭ್ರಮ‌ ಈಗಾಗಲೇ ಹಲವು ಥಿಯೇಟರ್ ಗಳ ಮುಂದೆ ಶುರುವಾಗಿದೆ.


ಬೆಂಗಳೂರಿನ ಸಂತೋಷ್, ನವರಂಗ್, ಕೆ ಆರ್ ಪುರಂನ ವಿಜಯಲಕ್ಷ್ಮಿ ಥಿಯೇಟರ್, ಯಾದಗಿರಿಯ ಥಿಯೇಟರ್ ಸೇರಿದಂತೆ ಹಲವು ಥಿಯೇಟರ್ ಗಳ ಮುಂದೆ ಈಗಾಗಲೇ ಸಲಗ ಕಟೌಟ್ ನಿಲ್ಲಿಸಿ ಸಂಭ್ರಮಿಸ್ತಿದ್ದಾರೆ ಅಭಿಮಾನಿಗಳು. ರಿಲೀಸ್ ಗೂ ಮುಂಚೆಯೆ ಟ್ಯಾಟೋ ಹಾಕಿಸಿಕ್ಕೊಳ್ಳೋದು ಪಟಾಕಿ‌ ಸಿಡಿಸೋದು, ಕಟೌಟ್ ಗೆ ಹಾರ ಹಾಕೋ ಮೂಲಕ ಅಭಿಮಾನಿಗಳು ಸಂಭ್ರಮಿಸ್ತಿರೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ.


ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾ ದೊಡ್ಡ ಪ್ರೀ ರಿಲೀಸ್ ಇವೆಂಟ್ ಗೆ ಚಿತ್ರತಂಡ ಭರ್ಜರಿ ಪ್ಲಾನ್ ಮಾಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಅತಿಥಿಯಾಗಿ ಆಹ್ವಾನಿಸಿದೆ. ಸದ್ಯ ಹಲವು ತಿಂಗಳುಗಳಿಂದ ತಣ್ಣಗಾಗಿದ್ದ ಗಾಂಧಿನಗರ ಥಿಯೇಟರ್ ಅಂಗಳದಲ್ಲಿ ಸಲಗ ರಿಲೀಸ್ ದಿನ ಪ್ರೇಕ್ಷಕರ ಕಲರವ ಕಾಣಲಿದೆ‌. ಲಾಕ್ ಡೌನ್ ನಂತರ ಮೊದಲು ರಿಲೀಸ್ ಆಗ್ತಿರೋ ಸ್ಟಾರ್ ನಟನ ಸಿನಿಮಾ ಇದಾಗಿದ್ದು, ಸಲಗ ಸುನಾಮಿ ರೀತಿಯಲ್ಲಿ ಥಿಯೇಟರ್ ಗೆ ಎಂಟ್ರಿ ಕೊಡೋಕೆ ರೆಡಿಯಾಗಿದೆ. ದುನಿಯಾ ವಿಜಯ್ ಜೊತೆ ಡಾಲಿ ಧನಂಜಯ್ ಕೂಡ ಪೊಲೀಸ್ ಆಫೀಸರ್ ಗೆಟಪ್‌ನಲ್ಲಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ದಸರಾ ಹಬ್ಬದ ಗಿಫ್ಟ್ ಆಗಿ ಬೆಳ್ಳಿಪರದೆ ಮೇಲೆ ಸಲಗ ಅದ್ಯಾವ ರೀತಿ ದರ್ಬಾರ್ ಮಾಡುತ್ತೆ ಅನ್ನೋದನ್ನ ಕಾದು ನೋಬೇಕಿದೆ.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

ಇಂದು ಸಂಜೆ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ : ಪ್ರಚಾರದ ವೇಳೆ ಪೆನ್ ಡ್ರೈವ್ ವಿಚಾರ ಪ್ರಸ್ತಾಪ ಮಾಡ್ತಾರಾ..?

ಶಿವಮೊಗ್ಗ: ಎರಡನೇ ಹಂತದ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ‌. ಚುನಾವಣೆಯ ಹೊತ್ತಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮುಜುಗರವಾಗುವಂತ ಘಟನೆ ನಡೆದಿದೆ. ರಾಜ್ಯದೆಲ್ಲೆಡೆ ಪೆನ್ ಡ್ರೈವ್ ಸುದ್ದಿ ತಾಂಡವವಾಡುತ್ತಿದ್ದರೆ,

error: Content is protected !!