ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ : ರೇಣುಕಾಚಾರ್ಯರನ್ನು ಕೆಳಗಿಳಿಸಿದ ನ್ಯಾಮತಿ ಜನ..!

suddionenews
1 Min Read

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಯಾವಾಗಲೂ ಜನರ ನಡುವೆ ಇರುತ್ತಾರೆ. ಜನ ನಾಯಕ ಎನಿಸಿಕೊಂಡಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬುದು ಆಗಾಗ ಪ್ರೂವ್ ಆಗ್ತಾ ಇರುತ್ತೆ. ಆದ್ರೆ ಇಂದು ಅದೇ ಜನ ಶಾಸಕ ರೇಣುಕಾಚಾರ್ಯ ಅವರನ್ನು ಭಾಷಣ ಮಾಡುವ ಮಾಡುವಾಗಲೇ ಕೆಳಗೆ ಇಳಿಸಿದ್ದಾರೆ.

ರಾಜಕೀಯ ವ್ಯಕ್ತಿಗಳು ಭಾಷಣ ಮಾಡುವಾಗ ಎಲ್ಲಿಯೇ ಭಾಷಣ ಮಾಡಿದರು, ಯಾವುದೇ ಕಾರ್ಯಕ್ರಮ ಭಾಷಣ ಮಾಡುತ್ತಿದ್ದರು ತಮ್ಮ ಭಾಷಣದಲ್ಲಿ ರಾಜಕೀಯವೇ ತುಂಬಿರುತ್ತೆ. ಇಂದು ಅದೇ ವಿಚಾರಕ್ಕೆ ರೇಣುಕಾಚಾರ್ಯ ಅವರನ್ನು ಕೆಳಗಿಳಿಸಲಾಗಿದೆ. ಚೀಲೂರ ಸರ್ಕಾರಿ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಅವರು ಭಾಷಣ ಆರಂಭಿಸಿದರು. ಆ ಭಾಷಣದಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಶಾಂತನಗೌಡ ಅವರಿಗೆ ಟೀಕೆ ಮಾಡುತ್ತಿದ್ದರು. ಇದನ್ನು ಕೀಳಿಸಿಕೊಂಡ ವ್ಯಕ್ತಿಯೊಬ್ಬ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ಶಾಲಾ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮ ಅಲ್ಲ ಎಂದಿದ್ದಾರೆ. ಶಾಲಾ ಮಕ್ಕಳ ಮುಂದೆ ರಾಜಕೀಯ ಬೇಡ ಎಂದು ಹೇಳಿದರು. ಆಗ ಸ್ವಲ್ಪ ಸಮಯ ವಾಗ್ವಾದ ಕೂಡ ನಡೆಯಿತು. ಭಟಷಣ ನಿಲ್ಲಿಸಿ ಶಾಸಕರನ್ನು ಕೆಳಗೆ ಇಳಿಸುವ ತನಕ ಅಲ್ಲಿನ ಜನ ಬಿಟ್ಟಿಲ್ಲ.

Share This Article
Leave a Comment

Leave a Reply

Your email address will not be published. Required fields are marked *