Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರೇಕ್ಷಕರ ಮನಗೆದ್ದ ಯೋಗಿ – ‘ಲಂಕೆ’ ಸಿನಿಮಾ ದಾಟಿದೆ ಯಶಸ್ವಿ 25 ದಿನ..!

Facebook
Twitter
Telegram
WhatsApp

ಒಂದ್ಕಡೆ ಕೊರೊನಾ ಭಯ..ಮತ್ತೊಂದ್ಕಡೆ 50% ಪ್ರೇಕ್ಷಕರಿಗಷ್ಟೇ ಅನುಮತಿ..ಜನ ಮನೆಯಿಂದ ಹೊರ ಬರ್ತಾರಾ ಅನ್ನೋ ದುಗುಡ ದುಮ್ಮಾನದಲ್ಲೇ ರಿಲೀಸ್ ಆದ ಸಿನಿಮಾ ‘ಲಂಕೆ’. ಲೂಸ್ ಮಾದ ಯೋಗೀಶ್ ಅಭಿನಯ ಈ ಎಲ್ಲಾ ಭಯಗಳಿಗೂ ಬ್ರೇಕ್ ಹಾಕಿದೆ. ಪ್ರೇಕ್ಷಕರನ್ನ ಥಿಯೇಟರ್ ಎಡೆಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ. ಎಸ್, ‘ಲಂಕೆ’ ಸಿನಿಮಾ ಯಶಸ್ವಿ 25 ದಿನಗಳನ್ನ ಪೂರೈಸಿ, ಅದೇ ಖುಷಿಯಲ್ಲಿ ಮುನ್ನುಗ್ಗುತ್ತಿದೆ.

ಕಳೆದ ಒಂದೂವರೆ ವರ್ಷದಿಂದ ಸಕ್ಸಸ್ ಫುಲ್ಲಿ 25 ದಿನ ಓಡಿದೆ ಅನ್ನೋ ಮಾತನ್ನ ಕೇಳೋದೇ ಕಡಿಮೆ ಆಗಿತ್ತು. ಯಾಕಂದ್ರೆ ಪ್ರತಿ ವಾರ ಅಷ್ಟು ಸಿನಿಮಾಗಳು ರಿಲೀಸ್ ಆಗ್ತಾ ಇತ್ತು. ಥಿಯೇಟರ್ ನಲ್ಲಿ ರಿಲೀಸ್ ಆದ ಸಿನಿಮಾಗಳು ಉಳಿಯೋದೆ ಕಷ್ಟವಾಗ್ತಾ ಇತ್ತು. ಇದೀಗ ಬಹಳ ದಿನಗಳ ನಂತರ 25 ದಿನಗಳ ಸಂಭ್ರಮದ ಕಳೆ ತಂದು‌ಕೊಟ್ಟಿದೆ ‘ಲಂಕೆ’ ಸಿನಿಮಾ.

ಗಣೇಶ ಚತುರ್ಥಿಯ ದಿನ ಲೂಸ್ ಮಾದ ಯೋಗಿ ಉಘೆ ಉಘೆ ಅಂತ ‘ಲಂಕೆ’ಗೆ ಬಂದಿದ್ರು. ಲೂಸ್ ಮಾದ ಯೋಗಿಯ ಡಿಫ್ರೆಂಟ್ ಲುಕ್, ಮ್ಯಾನರಿಸಂ, ಆಕ್ಷನ್ ಸೀನ್ ಗಳಿಗೆ ಪ್ರೇಕ್ಷಕ ಪ್ರಭು ಫುಲ್ ಫಿದಾ ಆಗಿದ್ದಾನೆ. ಹೀಗಾಗಿ ಸಿನಿಮಾ ಗೆದ್ದಿದೆ. ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಈ ಬಗ್ಗೆ ಚಿತ್ರತಂಡ ಕೂಡ ತಮ್ಮ ಖುಷಿಯನ್ನ ಸುದ್ದಿಗೋಷ್ಠಿಯಲ್ಲಿ ಮನತುಂಬಿ ಹೊರ ಹಾಕಿದೆ.ಚಿತ್ರದಲ್ಲಿ ಸಂಚಾರಿ ವಿಜಯ್ ಕೂಡ ವಿಶೇಷ ಗಮನ ಸೆಳೆಯುತ್ತಾರೆ. ದಶಕಗಳ ಹಿಂದೆ ನಡೆದ ನೈಜ ಘಟನೆಯ ಪಾತ್ರವೊಂದಕ್ಕೆ ವಿಜಯ್ ಜೀವ ತುಂಬಿದ್ದಾರೆ. ಅವರ ಪಾತ್ರ ಮನಸ್ಸಿಗೆ ನಾಟುವಂತಿದ್ರೆ, ಅವರಿಲ್ಲದಿರುವಿಕೆ ಪ್ರೇಕ್ಷಕನ ಮನಸ್ಸಿಗೆ ತೀರಾ ನೋವುಂಟು ಮಾಡಿದೆ.

ಪಟೇಲ್ ಶ್ರೀನಿವಾಸ್ ಮತ್ತು ಸುರೇಖಾ ರಾಮ್ ಪ್ರಸಾದ್ ಸಿನಿಮಾ ನಿರ್ಮಿಸಿದ್ದಾರೆ. ರಾಮ್​ ಪ್ರಸಾದ್​ ನಿರ್ದೇಶನದವಿದ್ದು, ಕೃಷಿ ತಾಪಂಡ, ಕಾವ್ಯ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಲಂಕೆ’ ಚಿತ್ರ ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. 50 ದಿನಗಳತ್ತ ಮುನ್ನುಗ್ಗುತ್ತಿರುವ ಕನ್ನಡದ ‘ಲಂಕೆ’ಗೆ ನಮ್ಮದು ಒಂದು ಆಲ್ ದಿ ಬೆಸ್ಟ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು?

ಇಂದಿನ ರಾಶಿ ಭವಿಷ್ಯ. ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಮತ್ತು ಸಿಂಹ ರಾಶಿಯವರಿಗೆ ಸಪ್ತಮ ಶನಿ ಏನು ಸಮಸ್ಯೆ ಕಾಡಬಹುದು? ಸೋಮವಾರ ರಾಶಿ ಭವಿಷ್ಯ -ಮೇ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:34 ಶಾಲಿವಾಹನ

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

error: Content is protected !!