Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಣಿಗಲ್ ನಲ್ಲಿ ಹೆಜ್ಜೇನು ದಾಳಿಗೆ 2 ಕೋಟಿ ಮೌಲ್ಯದ ಕುದುರೆಗಳು ಸಾವು..!

Facebook
Twitter
Telegram
WhatsApp

ತುಮಕೂರು: ಹೆಜ್ಜೇನು ದಾಳಿಯಿಂದಾಗಿ ಕೋಟಿ ಕೋಟಿ ಕುದುರೆಗಳು ಬಲಿಯಾಗಿರುವ ಘಟನೆ ಕುಣಿಗಲ್ ಕುದರೆ ಫಾರ್ಮ್ ಹೌಸ್ ನಲ್ಲಿ ನಡೆದಿದೆ. ಒಂದೊಂದು ಕುದುರೆಯೂ ಒಂದೊಂದು ಕೋಟಿ ಬೆಲೆ ಬಾಳುವಂತ ಕುದರೆಯಾಗಿದೆ. ಅಮೆರಿಕ ಮತ್ತು ಐರ್ಲೆಂಡ್ ನಿಂದ ಈ ಎರಡು ಕುದುರೆಗಳನ್ನು ತರಿಸಲಾಗಿತ್ತು. ಮೇಯಲು ಬಿಟ್ಟಾಗ ಕುದುರೆಗಳ ಮೇಲೆ ಹೆಜ್ಜೇನು ದಾಳಿ ನಡೆದಿದೆ.

ಕಳೆದ ಬುಧವಾರ ಈ ಘಟನೆ ನಡೆದಿದ್ದು, ಎಂದಿನಂತೆ ಕುದುರೆಗಳನ್ನು ಮೇಯುವುದಕ್ಕೆ ಬಿಟ್ಟದ್ದರಂತೆ. ಈ ವೇಳೆ ಕುದುರೆಗಳ ಮೇಲೆ ಹೆಜ್ಜೇನು ದಾಳಿಯಾಗಿದೆ. ಈ ದಾಳಿಯಿಂದ ಕುದುರೆಗಳು ಕಿರುಚಾಡಿವೆ, ನೋವು ತಾಳಲಾರದೆ ನೆಲಕ್ಕೆ ಬಿದ್ದಿವೆ. ಅಲ್ಲಿಯೇ ಇದ್ದ ಸಿಬ್ಬಂದಿಗಳು ಅದನ್ನು ಗಮನಿಸಿದ್ದು, ತಕ್ಷಣ ಓಡಿ ಬಂದಿದ್ದಾರೆ. ವೈದ್ಯರಿಗೂ ಮಾಹಿತಿ ನೀಡಿದ್ದಾರೆ.

ವೈದ್ಯರು ಕೂಡ ಸ್ಟರ್ಡ್ ಫಾರ್ಮ್ ಹೌಸ್ ನಲ್ಲಿ ಕುದುರೆಗಳಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಹೆಜ್ಜೇನು ದಾಳಿ ತೀವ್ರವಾಗಿದ್ದ ಕಾರಣ, ಚಿಕಿತ್ಸೆ ಫಲಕಾರಿಯಾಗದೆ ಕುದುರೆಗಳು ಸಾವನ್ನಪ್ಪಿವೆ. ಕುಣಿಗಲ್ ಸ್ಟರ್ಡ್ ಫಾರ್ಮ್ ಹೌಸ್ ನಲ್ಲಿ ಈ ಎರಡು ಕುದುರೆಗಳು ತುಂಬಾನೇ ಆಕರ್ಷಣೆ ಮಾಡುತ್ತಿದ್ದವು. ಎರಡು ಕೋಟಿ ಬೆಲೆ ಬಾಳುವ ಕುದುರೆಗಳು ಹೆಜ್ಜೇನು ದಾಳಿಗೆ ಬಲಿಯಾಗಿದ್ದು, ಮಾಲೀಕರಿಗೂ ದುಃಖ ತರಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!