Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾದಾಮಿಯಲ್ಲಿ ಓಡಾಟ ಕಷ್ಟ ಎಂದಿದ್ದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಕೊಡಿಸ್ತೀವಿ ಎಂದ ಜನತೆ..!

Facebook
Twitter
Telegram
WhatsApp

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಸದ್ಯ ಇನ್ನು ಕ್ಷೇತ್ರ ಆಯ್ಕೆ ಮಾಡಿಕೊಂಡಿಲ್ಲ. ಇನ್ನು ಗೊಂದಲದಲ್ಲಿಯೇ ಇದ್ದಾರೆ. ಅತ್ತ ಕಡೆ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದಲ್ಲಿಯೇ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕುವುದಕ್ಕೆ ಬಿಜೆಪಿ ಕೂಡ ಕಾಯುತ್ತಿದೆ. ಈ ಮಧ್ಯೆ ಟಿಕೆಟ್ ಗಾಗಿ ಅರ್ಜಿ ಹಾಕಿದಾಗಲೇ ಸಿದ್ದರಾಮಯ್ಯ ಅವರು, ನಾನು ಬಾದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ. ಯಾಕಂದ್ರೆ ಬಾದಾಮಿ ತುಂಬಾ ದೂರ. ಜನರ ನಡುವೆ ಇರುವುದಕ್ಕೆ ಆಗಲ್ಲ ಅಂತ ಹೇಳಿದ್ದರು.

ಆದರೆ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಾನೆ ಸ್ಪರ್ಧಿಸುವಂತೆ ಒತ್ತಾಯ ಜಾಸ್ತಿಯಾಗುತ್ತಿದೆ. 2023ರ ಚುನಾವಣೆಯಲ್ಲಿ ಬಾದಾಮಿಯಿಂದಾನೇ ಸ್ಪರ್ಧೆ ಮಾಡಬೇಕು. ನಾವೆಲ್ಲಾ ಸೇರಿ ಹೆಲಿಕಾಪ್ಟರ್ ಕೊಡಿಸುತ್ತೇವೆ ಎಂದು ಮಚಖಂಡಯ್ಯ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಗಟ್ಟಿ ಮನಸ್ಸು ಮಾಡುತ್ತಿಲ್ಲ. ನಾವೂ ಕೇಳಿದಾಗೆಲ್ಲಾ, ಇಲ್ಲ ಇದು ದೂರ ಆಗುತ್ತೆ, ಇಷ್ಟು ದೂರ ಬರೋದಕ್ಕೆ ಆಗಲ್ಲ ಎಂದೇ ಹೇಳುತ್ತಾರೆ. ಇದಕ್ಕಾಗಿ ಬಾದಾಮಿ ಮತದಾರರೆಲ್ಲಾ ಸೇರಿ ಸಿದ್ದರಾಮಯ್ಯ ಅವರಿಗೆ ಹೆಲಿಕಾಪ್ಟರ್ ಕೊಡಿಸುತ್ತೇವೆ. ಬೆಳಗಾವಿ ಅಧಿವೇಶನ ಮುಗಿದ ತಕ್ಷಣ ಸಾವಿರಾರು ಕಾರ್ಯಕರ್ತರು ಬಾದಾಮಿಯಿಂದ ಬೆಂಗಳೂರಿಗೆ ಆಗಮಿಸಿ ಸಿದ್ದರಾಮಯ್ಯ ಅವರ ಮನೆ ಮುಂದೆ ಸತ್ಯಾಗ್ರಹ ಮಾಡುತ್ತೇವೆ. ಅವರು ಬಾದಾಮಿ ಕ್ಷೇತ್ರದಿಂದಾನೇ ಸ್ಪರ್ಧೆ ಮಾಡಬೇಕು. ಹೀಗಾಗಿ ಅವರನ್ನು ವಾಪಾಸ್ ಕರೆದುಕೊಂಡು ಬರುತ್ತೀವಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಂಗಳೂರಿನಲ್ಲಿ KAS ಆಫೀಸರ್ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!

ಬೆಂಗಳೂರು: ಹೈಕೋರ್ಟ್ ವಕೀಲೆಯಾಗಿದ್ದ ಚೈತ್ರಾ ಬಿ.ಗೌಡ ಎಂಬುವವರು ಸಾವನ್ನಪ್ಪಿದ್ದಾರೆ. ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದರಿಂದ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಚೈತ್ರಾಗೆ ಇನ್ನು 35 ವರ್ಷ ವಯಸ್ಸಾಗಿತ್ತಷ್ಟೆ. ಸಂಜಯ್ ನಗರ ಪೊಲೀಸ್ ಠಾಣಾ

ಟೀಂ ಇಂಡಿಯಾ ಕೋಚ್ ಹುದ್ದೆಗೆ ಮೂವರ ಹೆಸರು ರೇಸ್ ನಲ್ಲಿ : ದ್ರಾವಿಡ್ ಗೆ ಸಿಗಲ್ವಾ ಮತ್ತೆ ಹುದ್ದೆ..?

ಐಪಿಎಲ್ ಮುಗಿದ ಕೂಡಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಅದಕ್ಕೆ ಉಳಿದಿರುವುದು ಇನ್ನು ಕೇವಲ 20 ದಿನಗಳಷ್ಟೇ. ಆದರೆ ಈ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ಬಗ್ಗೆ ಚರ್ಚೆ ಶುರುವಾಗಿದೆ. ಈಗ ಇರುವ ಟೀಂ ಇಂಡಿಯಾದ

ರಾಜ್ಯದಲ್ಲಿ ಮುಂದಿನ 6 ದಿನ ಧಾರಾಕಾರ ಮಳೆ : ಹವಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ರಾಜ್ಯದಾದ್ಯಂತ ಈಗಾಗಲೇ ಮಳೆ ಶಯರುವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜೋರು ಮಳೆ ಬರುತ್ತಿದೆ. ಮುಂದಿನ 6 ದಿನಗಳ ಕಾಲ ಜೋರು ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು

error: Content is protected !!