Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಮುಲು ಮೇಲೆಯೂ ವೈರಿಗಳು ಕಣ್ಣಿಟ್ಟಿದ್ದರು : ಜನಾರ್ದನ ರೆಡ್ಡಿ

Facebook
Twitter
Telegram
WhatsApp

ಬೆಂಗಳೂರು: ರಾಜಕೀಯದ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲು ರೆಡಿಯಾಗಿರುವ ಜನಾರ್ದನ ರೆಡ್ಡಿ ಇಂದು ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ತನ್ನ ಸ್ನೇಹಿತನ ಬಗ್ಗೆ ಮಾತನಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ರಾಮುಲು ನಾನು ಚಿಕ್ಕಂದಿನಿಂದಲೂ ಸ್ನೇಹಿತರು. ಶ್ರೀರಾಮುಲು ಮಾವ ರಾಜಕೀಯದಲ್ಲಿದ್ದರು. ಬಳ್ಳಾರಿಯಲ್ಲಿ ಮಾವನ ಕೊಲೆ ಆಯ್ತು. ಮಾವನ ಕೊಲೆಯ ಬಳಿಕ ರಾಮುಲು ರಾಜಕೀಯ ಶುರು ಮಾಡಿದರು. ರಾಮುಲು ಮೇಲೇಯೂ ವೈರಿಗಳು ಕಣ್ಣಿಟ್ಟಿದ್ದರು. ರಾಮುಲು ನಾನು ಹೋಗಿ ನಾಮ ಪತ್ರ ಸಲ್ಲಿಸಿದೆವು.

ಆಗ ಇಬ್ಬರು ಸುಷ್ಮಾ ಸ್ವರಾಜ್ ಸಂಪರ್ಕಕ್ಕೆ ಸಿಕ್ಕಿದೆವು. ನಮಗೆ ಸುಷ್ಮಾ ಸ್ವರಾಜ್ ತಾಯಿಯಂತೆ ಕಂಡರು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದರು. ಮನೆ ಮನೆಗೆ ಹೋಗಿ ಬಿಜೆಪಿ ತಲುಪಿಸುವ ಕೆಲಸ ಮಾಡಿದೆವು. ಸುಷ್ಮಾ ಸ್ವರಾಜ್ ಜೊತೆಗೂ ಚುನಾವಣೆ ಕೆಲಸ ಮಾಡಿದೆವು. ಸುಷ್ಮಾ ಸ್ವರಾಜ್ ಸೋಲು ತುಂಬಾ ನೋವು ತಂದಿತ್ತು.

ಅಂದು ಬೊಮ್ಮಾಯಿ ಜೆಡಿಯು ನಲ್ಲಿದ್ದರು. ಬೊಮ್ಮಾಯಿ ಅವರು ಜೆಡಿಯುನಲ್ಲಿದ್ದಾಗ ನನ್ನನ್ನು ಪಕ್ಷಕ್ಕೆ ಕರೆದಿದ್ದರು. ಆದರೆ ಬಿಜೆಪಿ ಬಿಟ್ಟು ಬರಲ್ಲ ಎಂದು ಹೇಳಿದ್ದೆ. ಬಿಜೆಪಿಗಾಗಿ ನಾನು ನಿಸ್ವಾರ್ಥದಿಂದ ಸೇವೆ ಮಾಡಿದ್ದೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಧಾರಾಕಾರ ಮಳೆಗೆ ಕೋಲಾರದಲ್ಲಿ ಎರಡೂವರೆ ಎಕರೆ ಬಾಳೆ ನಾಶ..!

ಕೋಲಾರ: ಮಳೆಯನ್ನು ಕಂಡು ರೈತ ಅದೆಷ್ಟೋ ವರ್ಷಗಳು ಆಗಿತ್ತೇನೋ ಎಂಬ ಭಾವನೆ ಈ ಬಾರಿಯ ಬಿಸಿಲು ನೋಡಿ ಮೂಡಿತ್ತು. ಆದರೆ ವರುಣರಾಯ ಕೃಪೆ ಏನೋ ತೋರಿದ್ದಾನೆ. ನಿನ್ನೆಯಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಇನ್ಮುಂದೆ ಉತ್ತಮ ಮಳೆಯಾಗುವ

30 ವರ್ಷದ ಹಳೇ ಕಥೆ ಹೇಳಿದ ಶಿವರಾಮೇಗೌಡ : ಇಂಗ್ಲೆಂಡ್ ನಲ್ಲೂ ತಗಲಾಕಿಕೊಂಡಿದ್ರಂತೆ ರೇವಣ್ಣ..!

ಮಂಡ್ಯ: ಅಬ್ಬಬ್ಬಾ.. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರಗಳು ದಿನೇ‌ ದಿನೇ ಒಂದೊಂದು ವಿಚಾರಗಳು ಬೆಳಕಿಗೆ ಬರುತ್ತಿವೆ. ಕಳೆದ ಮೂವತ್ತು ವರ್ಷಗಳ ಹಿಂದೆಯೂ ಇಂಥದ್ದೊಂದು ಘಟನೆ ಅದರಲ್ಲೂ ಇಂಗ್ಲೆಂಡ್ ನಲ್ಲಿ‌ ನಡೆದಿತ್ತಂತೆ. ಈ

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

error: Content is protected !!