ಚಿತ್ರದುರ್ಗ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ.ಬಿ.ಸುರೇಶ್‍ ಅವಿರೋಧ ಆಯ್ಕೆ

1 Min Read

ಚಿತ್ರದುರ್ಗ, (ನ.25): ಚಿತ್ರದುರ್ಗ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹದಿನೆಂಟನೆ ವಾರ್ಡಿನ ಸದಸ್ಯ ಕೆ.ಬಿ.ಸುರೇಶ್ ಶುಕ್ರವಾರ ತಮ್ಮ ಕೊಠಡಿಗೆ ಪೂಜೆ ಸಲ್ಲಿಸಿದರು.

ನಗರಸಭೆ ಸಾಮಾನ್ಯ ಸಭೆಯಲ್ಲಿ ಗುರುವಾರ ಸರ್ವ ಸದಸ್ಯರ ಒಮ್ಮತದಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಬಿ.ಸುರೇಶ್ ಕೊಠಡಿ ಪೂಜೆ ಏರ್ಪಡಿಸಿದ್ದ ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಮಂಜುಳ ವೇದ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರುಗಳಾದ ತಾರಕೇಶ್ವರಿ, ಶ್ವೇತಾ ವೀರೇಶ್, ವೆಂಕಟೇಶ್, ನಗರಸಭೆ ವ್ಯವಸ್ಥಾಪಕಿ ಮಂಜುಳ ಸೇರಿದಂತೆ ಸಿಬ್ಬಂದಿಯವರು ಹಾಜರಿದ್ದು ಕೆ.ಬಿ.ಸುರೇಶ್‍ರವರಿಗೆ ಶುಭ ಹಾರೈಸಿದರು.
ಬಸವಶಾಸ್ತ್ರಿ ಸ್ವಾಮೀಜಿ ಸಾಂಗ್ಯವಾಗಿ ಪೂಜೆ ನೆರವೇರಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *