Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಾಲು, ಮೊಸರು ದರ ಹೆಚ್ಚಳ : ಎಸ್ ಯು ಸಿ ಐ(ಸಿ) ಖಂಡನೆ

Facebook
Twitter
Telegram
WhatsApp

 

ಚಿತ್ರದುರ್ಗ, (ನ.24) : ಕರ್ನಾಟಕ ಹಾಲು ಮಹಾಮಂಡಳಿ ( ಕೆಎಂಎಫ್) ಯು ನಂದಿನಿ ಬ್ರ್ಯಾಂಡ್ ನ ಎಲ್ಲಾ ಮಾದರಿಯ ಹಾಲು ಹಾಗೂ ಮೊಸರಿನ ದರವನ್ನು ಪ್ರತಿ ಲೀಟರ್ ಗೆ  2 ರೂಗಳನ್ನು ಹೆಚ್ಚಿಸಿರುವುದನ್ನು ಎಸ್ ಯು ಸಿ ಐ (ಸಿ) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ಕರ್ನಾಟಕ ಸರ್ಕಾರವು ಈ ಬೆಲೆ ಏರಿಕೆಯನ್ನು ತಡೆಗಟ್ಟುವುದರ ಬದಲು ಅನುಮೋದನೆ ನೀಡಿರುವುದು ಅತ್ಯಂತ ಖಂಡನಾರ್ಹ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲೂ ಒಂದಲ್ಲ ಒಂದು ಸಬೂಬು ಹೇಳುವುದು ಎಲ್ಲಾ ಜನವಿರೋಧಿ ಸರ್ಕಾರಗಳ ವಾಡಿಕೆ.

ಅಂತೆಯೇ ಈ ಸಂದರ್ಭದಲ್ಲೂ ರೈತರಿಗೆ ನೆರವು ನೀಡಬೇಕೆಂದು ಕುಂಟು ನೆಪವೊಡ್ಡಿ ಹಾಲು, ಮೊಸರಿನ ದರ ಏರಿಸುವುದರ ಮೂಲಕ ಈಗಾಗಲೇ ಸಂಕಷ್ಟದಲ್ಲಿರುವ ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನರ ಹೆಗಲ ಮೇಲೆ ಭಾರ ಹೊರಿಸಿರುವುದು, ಸರ್ಕಾರದ ಅತ್ಯಂತ ಜನ ವಿರೋಧಿ ನಿಲುವನ್ನು ಪ್ರದರ್ಶಿಸುತ್ತದೆ. ಸರ್ಕಾರ ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುವ   ಕ್ರಮಗಳನ್ನು ಕೈ ಬಿಟ್ಟು ತನ್ನ ಖಜಾನೆಯಿಂದ  ರೈತರಿಗೂ ಸಹಾಯ ಧನ ನೀಡಿ ಅವರ ಸಂಕಷ್ಟಗಳನ್ನು ನಿವಾರಿಸಬೇಕು. ಅಂತೆಯೇ ಗ್ರಾಹಕರಿಗೂ ಬೆಲೆ ಹೆಚ್ಚಳವಾಗದಂತೆ ಸಹಾಯಧನ ನೀಡುತ್ತಾ ಉತ್ಪಾದನಾ ವೆಚ್ಚವನ್ನೂ ಸರಿದೂಗಿಸಬೇಕು.

ಜನಸಾಮಾನ್ಯರಿಗೆ ನೆರವಾಗಲು ಬಳಸಬೇಕಾದ ಇಂತಹ ಹಣವನ್ನು  ಕಾರ್ಪೊ ರೇಟ್ ಮನೆತನಗಳಿಗೆ ತೆರಿಗೆ ವಿನಾಯಿತಿ, ಸಹಾಯಧನ   ನೀಡಲು ವಿನಿಯೋಗಿಸುತ್ತಿರುವುದನ್ನು  ನಿಲ್ಲಿಸಬೇಕು. ಈಗಾಗಲೇ ಬೆಲೆ ಏರಿಕೆ, ನಿರುದ್ಯೋಗಗಳಿಂದ ತತ್ತರಿಸುತ್ತಿರುವ ಬಡಜನರ ಜೇಬಿಗೆ ಕನ್ನಾ ಹಾಕುವ ನೀತಿಗಳನ್ನು ಕೈಬಿಟ್ಟು ಜನರ ಜೀವನವನ್ನು ಸುಧಾರಿಸುವ ನೀತಿಗಳನ್ನು ಜಾರಿಗೊಳಿಸಬೇಕೆಂದು ಎಸ್ ಯು ಸಿ ಐ(ಸಿ) ರವಿ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಜಿಲ್ಲೆಯ ರೈತರಿಗೆ ಉಪಯುಕ್ತ ಮಾಹಿತಿ | ಬೆಳೆ ಪರಿಹಾರ ಪಾವತಿ ಸಂಬಂಧ ಸಹಾಯವಾಣಿ ಆರಂಭ : ಇಲ್ಲಿದೆ ತಾಲ್ಲೂಕುವಾರು ಮಾಹಿತಿ

ಚಿತ್ರದುರ್ಗ. ಮೇ.08:   ಬೆಳೆ ಪರಿಹಾರ ಪಾವತಿ ಸಂಬಂಧ ಮಾಹಿತಿ ಪಡೆದುಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ  ಹಾಗೂ ಜಿಲ್ಲೆಯ 6 ತಾಲ್ಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ದಾವಣಗೆರೆ ಈ ಪ್ರದೇಶಗಳಲ್ಲಿ ಮೇ 9 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ.ಮೇ.8: 66/11 ಕೆ.ವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‍ಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ದೀಪದ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯ ತುರ್ತು ಕಾರ್ಯವನ್ನು ನಿರ್ವಹಿಸಬೇಕಾಗಿರುವುದರಿಂದ ಮೇ.9 ರಂದು ಬೆಳಿಗ್ಗೆ 10 ರಿದ ಮಧ್ಯಾಹ್ನ 2

ಚಿತ್ರದುರ್ಗ | ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವಿವರ : ಬಬ್ಬೂರಿನಲ್ಲಿ ಹೆಚ್ಚು ಮಳೆ

ಚಿತ್ರದುರ್ಗ. ಮೇ.08:  ಮೇ.08ರ ಮಳೆಯ ವಿವರದನ್ವಯ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರಿನಲ್ಲಿ 27.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆಯಾಗಿದೆ. ಹಿರಿಯೂರು ತಾಲ್ಲೂಕು ಹಿರಿಯೂರಿನಲ್ಲಿ 22.6ಮಿ.ಮೀ, ಇಕ್ಕನೂರು 10 ಮಿ.ಮೀ,

error: Content is protected !!