Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಲಿತ & ಮಹಿಳಾ ಡಿಸಿಎಂ ಆಯ್ತು.. ಈಗ ವೀರಶೈವರಿಗೂ ಡಿಸಿಎಂ ಸ್ಥಾನ : ಏನಿದು ಕುಮಾರಸ್ವಾಮಿ ಅವರ ಭರವಸೆಯ ಸುರಿಮಳೆ..?

Facebook
Twitter
Telegram
WhatsApp

 

ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಮಧ್ಯೆ ಮೂರು ಪಕ್ಷಗಳು ಅಧಿಕಾರದ ಚುಕ್ಕಾಣಿಗಾಗಿ ಜಪ ಮಾಡುತ್ತಿದ್ದಾರೆ. ಜನರ ಬಳಿ ಮತ ಕೇಳುವುದಕ್ಕೆ ಭರವಸೆಯ ಪಟ್ಟಿಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಜಿಲ್ಲೆ ಜಿಲ್ಲೆಯನ್ನು ಸುತ್ತುತ್ತಾ, ಪಟ್ಟಿಯಲ್ಲಿರುವ ಭರವಸೆಯ ಬಾಣಗಳನ್ನು ಒಂದೊಂದಾಗಿ ಬಿಡುತ್ತಿದ್ದಾರೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ವೀರಶೈವರಿಗೂ ಡಿಸಿಎಂ ಸ್ಥಾನ ಕೊಡುತ್ತಾರಂತೆ.

ಕೋಲಾರದಿಂದ ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಆರಂಭ ಮಾಡಿದೆ. ಈ ಯಾತ್ರೆಯ ಉದ್ಧಕ್ಕೂ ಜನರ ನೋವು-ನಲಿವುಗಳನ್ನು ಕೇಳುತ್ತಾ ಸಾಗುತ್ತಿದ್ದಾರೆ ಕುಮಾರಸ್ವಾಮಿಯವರು. ಇದರ ನಡುವೆ ನಡುವೆಯೇ ಭರವಸೆಗಳ ಸುರಿಮಳೆಯನ್ನು ಸುರಿಸುತ್ತಿದ್ದಾರೆ. ಇತ್ತಿಚೆಗೆ ನಾವೂ ಬಹುಮತದಿಂದ ಅಧಿಕಾರಕ್ಕೆ ಬಂದರೆ ದಲಿತ ಡಿಸಿಎಂ ಮಾಡುವ ಭರವಸೆಯನ್ನು ನೀಡಿದ್ದರು.

ಇಂದು ಕೂಡ ಪಂಚರತ್ನ ಯಾತ್ರೆ ಕೋಲಾರದಲ್ಲಿ ಸಾಗಿದ್ದು, ಚಿಂತಾಮಣಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನದು ಭಾಗ್ಯಗಳ ಕಾರ್ಯಕ್ರಮವಲ್ಲ. ಬಡವರ ಬದುಕನ್ನು ಕಟ್ಟಿಕೊಡುವ ಯಾತ್ರೆ ಎಂದಿದ್ದಾರೆ. ಇದೆ ವೇಳೆ, ಸಾಲ ಮನ್ನಾ ಕ್ರೆಡಿಗೂ ಕಾಂಗ್ರೆಸ್ ಗೂ ಸಲ್ಲಬೇಕು. ಕಾಂಗ್ರೆಸ್ ಸರ್ಕಾರದ ವೇಳೆ ಜಾರಿಯಾದ ಭಾಗ್ಯಗಳಿಗೆ ಹಣ ನಿಲ್ಲಬಾರದು. ಗಲಾಟೆ ಮಾಡಿ ಆಗ ಹಣಕಾಸು ಇಲಾಕೆಯನ್ನು ತೆಗೆದುಕೊಂಡಿದ್ದೆ. ಯಾರೋ ಕಟ್ಟಿದ ಗೂಡನ್ನು ಸಿದ್ದರಾಮಯ್ಯ ಅವರು ಸೇರಿದ್ದಾರೆ.

ದಲಿತರಿಗೆ ಮಾತ್ರವಲ್ಲ ವೀರಶೈವರಿಗೂ ಡಿಸಿಎಂ ಸ್ಥಾನ ನೀಡುತ್ತೇನೆ. ಕಾಟಚಾರದ ಡಿಸಿಎಂಗಳನ್ನು ಮಾಡುವುದಿಲ್ಲ. ಆ ಹುದ್ದೆಗೆ ಸ್ಥಾನಮಾನ, ಸಂಪೂರ್ಣ ಅಧಿಕಾರ ಕೊಡುತ್ತೇನೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!