Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಂಗಳೂರು ಬ್ಲಾಸ್ಟ್ ಕೇಸ್ : ಸರಿಯಾಗಿ ಬ್ಲಾಸ್ಟ್ ಆಗಿದ್ದರೆ ಅನಾಹುತ ದೊಡ್ಡಮಟ್ಟದ್ದಾಗಿರುತ್ತಾ ಇತ್ತು : FSL ವರದಿ..!

Facebook
Twitter
Telegram
WhatsApp

 

ಮಂಗಳೂರು: ನಗರದಲ್ಲಿ ಆಟೋದಲ್ಲಿ ಕುಕ್ಕರ್ ಒಳಗೆ ಬ್ಲಾಸ್ಟ್ ಆದ ಬಾಂಬ್ ಬಗ್ಗೆ ಇದೀಗ FSL ವರದಿ ಹೊರಬಿದ್ದಿದ್ದು, ಭಯನಾಕ ಸತ್ಯವೊಂದು ತಿಳಿದು ಬಂದಿದೆ. ಒಂದು ವೇಳೆ ಈ ಬಾಂಬ್ ಸರಿಯಾದ ಮಾದರಿಯಲ್ಲೇನಾದರೂ ಬ್ಲಾಸ್ಟ್ ಆಗಿದ್ದರೆ, ಅಂದು ದೊಡ್ಡ ಅನಾಹುತವೇ ಆಗಬೇಕಿತ್ತು. ಆಟೋದಲ್ಲಿ ಪ್ರಯಾಣಿಸುತ್ತಿದ್ದವರ ಅದೃಷ್ಟವೂ ಚೆನ್ನಾಗಿತ್ತು ಎನಿಸುತ್ತದೆ.

ಈ ಸಂಬಂಧ ಎಫ್ ಎಸ್ ಎಲ್ ವರದಿ ಬಂದಿದ್ದು, ಶಾರೀಖ್ ಬಳಿ ಕುಕ್ಕರ್ ನಲ್ಲಿದ್ದ ಬಾಂಬ್ ಗೆ ಒಂದು ಬಸ್ ಅನ್ನು ಸ್ಪೋಟಿಸುವ ಶಕ್ತಿ ಇತ್ತಂತೆ. ಆದರೆ ಸರಿಯಾದ ಮಾದರಿಯಲ್ಲಿ ಸ್ಪೋಟಗೊಳ್ಳದ ಕಾರಣ ಕಡಿಮೆ ಪ್ರಮಾಣದಲ್ಲಿ ಅನಾಹುತವಾಗಿದೆ. ಮೂರು ಲೀಟರ್ ಕುಕ್ಕರ್ ತುಂಬಾ ಸ್ಪೋಟಕವನ್ನು ಇಡಲಾಗಿತ್ತು. ಅದಕ್ಕೆ ಡಿಟೋನೇಟರ್ ಕೂಡ ಇತ್ತಂತೆ. ಅದಕ್ಕೆ ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಇಟ್ಟಿದ್ದಾನೆ. ಬ್ಲಾಸ್ಟ್ ಆಗುವಾಗ ಈ ಪ್ಲಸ್ ಅಂಡ್ ಮೈನಸ್ ಸರಿಯಾದ ಮಾದರಿಯಲ್ಲಿ ಕನೆಕ್ಟ್ ಆಗಿಲ್ಲ ಎಂದು ಎಫ್ ಎಸ್ ಎಲ್ ವರದಿಯಲ್ಲಿ ತಿಳಿಸಲಾಗಿದೆ.

ಕುಕ್ಕುರ್ ಒಳಗಿದ್ದ ಸ್ಪೋಟಕ್ಕೆ ಪ್ಲಸ್ ಮತ್ತು ಮೈನಸ್ ಸರಿಯಾಗಿ ವರ್ಕ್ ಆಗಿಲ್ಲ. ಹೀಗಾಗಿ ಡಿಟೋನೇಟರ್ ಗೆ ಪವರ್ ಸಪ್ಲೈ ಆಗದೆ, ಜೆಲ್ ಗೆ ಮಾತ್ರ ಬೆಂಕಿ ತಗುಲಿದೆ. ಇದರಿಂದ ಬ್ಲಾಸ್ಟ್ ಆಗಿದ್ದು, ಸುತ್ತಲೂ ದಟ್ಟ ಹೊಗೆ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!