Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿಮ್ಮ ಗ್ಯಾಂಗ್ ನ ಪ್ರತಿಯೊಂದು ಚಾಟ್ & ರೆಕಾರ್ಡ್ ನನ್ನ ಬಳಿ ಇದೆ : ಸಿಎಂ ಕೇಜ್ರಿವಾಲ್ ಗೆ ಬೆದರಿಕೆ ಹಾಕಿದರಾ ಸುಖೇಶ್..?

Facebook
Twitter
Telegram
WhatsApp

 

ದೆಹಲಿ: ಪ್ರಕರಣವೊಂದರಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಿದ್ದಾರೆ. ಏಳನೇ ಪತ್ರದಲ್ಲಿ ಸಿಎಂ ಕೇಜ್ರಿವಾಲ್ ಅವರಿಗೇನೆ ಬ್ಲಾಕ್ ಮೇಲ್ ಮಾಡಿರುವ ಸ್ಟೈಲ್ ನಲ್ಲಿ ಪತ್ರ ಬರೆದಿದ್ದಾರೆ. ನಿಮ್ಮ ಗ್ಯಾಂಗ್ ನ ಚಾಟ್ ಮತ್ತು ರೆಕಾರ್ಡಿಂಗ್ ಎಲ್ಲಾ ನನ್ನ ಬಳಿಯೇ ಇದೆ. ನಾನು ಅತಿಯಾದ ಆತ್ಮ ವಿಶ್ವಾಸದಿಂದ ಇದ್ದೇನೆ ಎಂದಿದ್ದಾರೆ.

ಪತ್ರದಲ್ಲಿ ಶಾಲೆಗಳ ಹಣದ ವಿಚಾರವನ್ನು ಉಲ್ಲೇಖಿಸಿದ್ದು, ಕೇಜ್ರಿವಾಲ್ ಜೀ ನೀವೂ ನನ್ನನ್ನು ದರೋಡೆಕೋರ ಎಂದು ಕರೆದಿದ್ದೀರಿ. ಆದ್ರೆ ಮಕ್ಕಳ ಶಿಕ್ಷಣ ಕಲ್ಯಾಣಕ್ಕಾಗಿರುವ ಹಣವನ್ನು ಲಪಾಟಾಯಿಸಿರುವ ದೊಡ್ಡ ದರೋಡೆಕೋರರು ನೀವೂ, ಕಳ್ಳರು ನೀವೂ. ಎಲ್ಲೆಡೆ ದೆಹಲಿ ಸ್ಕೂಲ್ ಮಾಡೆಲ್ ಹೆಸರಿನಲ್ಲಿ ಹಣ ಪಡೆಯುತ್ತೀರಿ. ಸತ್ಯೇಂದರ್ ಜಿ, ಮನೀಷ್ ಜಿ ಹಣ ಪಡೆಯುತ್ತೀರಿ. ಸತ್ಯೇಂದ್ರ ಜೈನ್ 2017ರ ಫೆಬ್ರವರಿಯಲ್ಲಿ 20 ಮಿಲಿಯನ್ ಡಾಲರ್ ಗಳನ್ನು ರೂಪಾಯಿಗೆ ವರ್ಗಾವಣೆ ಮಾಡಿಸಿ, ಒಂದು ಭಾಗವಾಗಿ ಬಿಟ್ ಕಾಯಿನ್ ಆಗಿಸಿ ಬೆಂಗಳೂರಿನಲ್ಲಿ ತನ್ನ ವ್ಯಾಪಾರದ ಸಹದ್ಯೋಗಿಗಳಿಗೆ ನೀಡುವುದಕ್ಕೆ ತಿಳಿಸಿದ್ದರು.

ಕೇಜ್ರಿವಾಲ್ ಜೀ ಈಗ ಮತ್ತೊಮ್ಮೆ ನೀವು ಅಳುವುದು ಖಚಿತವಾಗಿದೆ. ಇದಲ್ಲಾ ಕಲ್ಪನೆ ಎನ್ನುವುದಾದರೆ ಪಾಲಿಗ್ರಾಫ್ ಪರೀಕ್ಷೆಗೆ ನೀವೂ ಒಳಪಡಬೇಕು ಎಂದು ನಾನು ಬಯಸುತ್ತೇನೆ. ನಾನು ಎಲ್ಲಾ ಪುರಾವೆಗಳೊಂದಿಗೆ ನನ್ನ ಆರೋಪವನ್ನು ಸಾಬೀತುಪಡಿಸುತ್ತೇನೆ. ಅತಿಯಾದ ಆತ್ಮವಿಶ್ವಾಸ ನನಗಿಲ್ಲ ಎಂದು ಭಾವಿಸಬೇಡಿ. ನಿಮ್ಮ ಗ್ಯಾಂಗ್ ನ ಚಾಟ್ ಮತ್ತು ರೆಕಾರ್ಡ್ ನನ್ನ ಬಳಿ ಇದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ: ದಾವಣಗೆರೆಯಲ್ಲಿ  ಸಿ.ಎಂ. ಸಿದ್ದರಾಮಯ್ಯ ಹೇಳಿಕೆ

ದಾವಣಗೆರೆ ಮೇ 4: ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಲ್ಲಿ ನಡೆದ

ಬೆಂಗಳೂರಿನಲ್ಲಿ 3 ದಿನ ಸಾಧಾರಣ ಮಳೆ‌: ಉಳಿದಂತೆ ಎಲ್ಲೆಲ್ಲಿ ಎಷ್ಟು ಮಳೆ ಸಾಧ್ಯತೆ..?

ಬೆಂಗಳೂರು: ಬಿಸಿಬಿಸಿ ಎನ್ನುತ್ತಿದ್ದ ಬೆಂಗಳೂರು ಮಂದಿಗೆ ನಿನ್ನೆ ವರುಣರಾಯ ತಂಪೆರೆದಿದ್ದ. ಮಧ್ಯಾಹ್ನವೇ‌ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕತ್ತಲು ಕವಿದಿತ್ತು. 3 ಗಂಟೆಯ ವೇಳೆಗೆ ಎಲ್ಲೆಲ್ಲೂ ಜೋರು ಮಳೆಯಾಗಿತ್ತು. ಮಳೆ ಕಂಡು ಬೆಂಗಳೂರು ಮಂದಿ

error: Content is protected !!