ಶಾಸಕ ಬಾಲಕೃಷ್ಣ ಮನೆಗೆ ಬೆಂಕಿ : ಕಾರು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ..!

suddionenews
1 Min Read

ಹಾಸನ: ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಅವರ ಕೊಬ್ಬರಿ ತುಂಬಿದ್ದ ಮನೆ ಬೆಂಕಿಗಾಹುತಿಯಾಗಿದೆ. ಇದರ ಪರಿಣಾಮ ಮನೆಯಲ್ಲಿಯೇ ಇದ್ದ ಕಾರು ಸೇರಿದಂತೆ ಲಕ್ಷಾಂತರ ರೂಪಾಯಿ ವಸ್ತುಗಳು ಕೂಡ ಬೆಂಕಿಗಾಹುತಿಯಾಗಿದೆ.

ಚನ್ನರಾಯಪಟ್ಟಣದ ಚೋಳೆನಹಳ್ಳಿಯಲ್ಲಿ ಶಾಸಕ ಬಾಲಕೃಷ್ಣ ಅವರ ವಾಸದ ನಿವಾಸವಿದೆ. ಅದರ ಕೂಗಳತೆ ದೂರದಲ್ಲಿಯೇ ಕೊಬ್ಬರಿ ತುಂಬಿದ ಮನೆ ಇದೆ. ಆದರೆ ಆಕಸ್ಮಿಕವಾಗಿ ಬೆಳಗಿನ ಜಾವ ತಗುಲಿದ ಬೆಂಕಿಗೆ ಇಡೀ ಮನೆ ಸುಟ್ಟು ಭಸ್ಮವಾಗಿದೆ. ನೋಡ ನೋಡುತ್ತಿದ್ದಂತೆಯೇ ದಟ್ಟ ಹೊಗೆ ಆಕ್ರಮಿಸಿಕೊಂಡಿದೆ.

ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಹೊಗೆ ಅಲ್ಲಿನ ಪ್ರದೇಶವನ್ನೆಲ್ಲ ತುಂಬಿಕೊಂಡಿದೆ. ಸ್ಥಳೀಯರು ಸಹ ಅಗ್ನಿಶಾಮಕ ಸಿಬ್ಬಂದಿ ಜೊತೆಗೆ ಸೇರಿ ಬೆಂಕಿ ನಂದಿಸುವ ಕೆಲಸಕ್ಕೆ ಸಹಾಯ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *