Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪುಸ್ತಕಗಳನ್ನು ಓದುವ ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ವಿಷಾದನೀಯ : ಟೀಕಾ ಸುರೇಶಗುಪ್ತ

Facebook
Twitter
Telegram
WhatsApp

 

ಚಿತ್ರದುರ್ಗ : ನವೆಂಬರ್‌ ಮಾಸ ಬಂದರೆ ಸಾಕು ಎಲ್ಲೆಡೆ ಕನ್ನಡದ ಕಾರ್ಯಕ್ರಮಗಳ ಸುಗ್ಗಿ. ಪ್ರತಿವರ್ಷ ಕನ್ನಡಿಗರೆಲ್ಲ ವ್ರತಾಚರಣೆ ಎಂಬಂತೆ ಸಂಭ್ರಮದಿಂದ ಹಳೆಯ ತಲೆಮಾರಿನ ಕವಿಗಳು, ಕಾವ್ಯಗಳು, ಹಾಡುಗಳನ್ನು ನಮ್ಮ ಸಂಸ್ಕೃತಿಯ ಸಂಕೇತವೆಂದು ಭಾವಿಸಿ, ನೆನಪುಗಳನ್ನು ಹಂಚಿಕೊಳ್ಳಲು ತವಕಿಸುತ್ತೇವೆ. ಜೊತೆಗೆ ನಮ್ಮೊಂದಿಗೆ

ಬಾಳುತ್ತಿರುವ ಸಾಧಕರನ್ನು ಜಿಲ್ಲಾ ಹಾಗು  ರಾಜ್ಯ ಮಟ್ಟದಲ್ಲಿ ಸತ್ಕರಿಸುವ ಪರಿಪಾಠ ನಾಡಿನೆಲ್ಲೆಡೆ ಹಬ್ಬಿದೆ. ನಾಡು-ನುಡಿಯ ಗೌರವವು ಅಳಿಯದೆ ಉಳಿದು ಬೆಳೆಯಲು ಪ್ರಜೆಗಳೆಲ್ಲರ ಸ್ವಾಭಿಮಾನದ ಪಾಲ್ಗೊಳ್ಳುವ ಅನಿವಾರ್ಯತೆ ಇದೆ. ಇದನ್ನು ಮನಗಂಡು ಕೋಟ್ಯಂತರ ಸಹೃದಯರು ಈ ವ್ರತದಲ್ಲಿ ತಮ್ಮದೇ ಆದ ರೀತಿಯಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಸಂಸ್ಕೃತಿಯು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಇದು ವಿಷಾದನೀಯ. ಓದುವ ಹವ್ಯಾಸ ಕಡಿಮೆಯಾದರೆ ಪುಸ್ತಕಗಳನ್ನು ವಿಶೇಷವಾಗಿ ಕನ್ನಡದ ಪುಸ್ತಕಗಳನ್ನು ಕೊಳ್ಳುವ, ಓದುವ ಪದ್ದತಿ ಮಾಯವಾಗಿ ಬಿಟ್ಟರೆ ಪರಿಸ್ಥಿತಿ ಅಂಧಕಾರಮಯವಾಗುವ ಅಪಾಯದ ಗಂಟೆ ಬಾರಿಸೀತು ಎನ್ನುವ ಆತಂಕ ಸಹಜ. ಇದಕ್ಕಾಗಿ ಈ ಮಾಸದಲ್ಲಾದರೂ ಕೆಲವು ಕನ್ನಡ ಪುಸ್ತಕಗಳಿಗಾಗಿ ನಿಮ್ಮ ಕಿಂಚಿತ್ ಹಣ ವಿನಿಯೋಗ ಮಾಡಿ. ನೀವೂ ಓದಿರಿ. ಉಡುಗೊರೆಯಾಗಿ ಪುಸ್ತಕಗಳನ್ನು ನೀಡಿರಿ. ಈ ಸಂಪ್ರದಾಯ ರೂಢಿಸಿಕೊಂಡರೆ ಕನ್ನಡ ಉಳಿದೀತು. ಜೊತೆಗೆ ಪ್ರತಿದಿನ ಒಂದು ಗಂಟೆಯಾದರೂ ಕನ್ನಡವನ್ನು ಓದಿರಿ ಬರೆಯಿರಿ.

ಇದರಿಂದ ಕನ್ನಡ ನಾಡು ನುಡಿಗೆ ಉತ್ತಮ ಭವಿಷ್ಯ ಲಭಿಸೀತು.  ಏನಂತೀರಿ ಮಿತ್ರರೇ?

ಟೀಕಾ. ಸುರೇಶಗುಪ್ತ
ಚಿತ್ರದುರ್ಗ,
ಮೊ : 99454 61834

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪಾಕ್ ಜಿಂದಾಬಾದ್ ಎಂದವನಿಗೆ ನಾವೇ ಗುಂಡಿಟ್ಟು ಸಾಯಿಸುತ್ತೇವೆ : ಸಚಿವ ಜಮೀರ್

ರಾಯಚೂರು: ಪಾಕಿಸ್ತಾನ ಘೋಷಣೆ ಕೂಗುವವರನ್ನು ಗುಂಡಿಟ್ಟು ಕೊಲ್ಲಬೇಕು. ಟಿಶ್ಕ್ಯಾಂ ಟಿಶ್ಕ್ಯಾಂ ಟಿಶ್ಕ್ಯಾಂ ಅಂತ ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ಭರ್ಜರಿ ಪ್ರಚಾರ

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

error: Content is protected !!