ನನ್ನ ಜೊತೆ ಬಳ್ಳಾರಿ ಮುಸ್ಲಿಂರಿದ್ದಾರೆ.. ನಮ್ಮವರೆ ನನಗೆ ತೊಂದರೆ ಕೊಡೋ ಸ್ಥಿತಿ ಇದೆ : ಜನಾರ್ದನ ರೆಡ್ಡಿ

1 Min Read

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ಬರಬೇಕು ಎಂದು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಮಾಧ್ಯಮದವರ ಮುಂದೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಇದೀಗ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಬಿಜೆಪಿಯ ಹಲವರ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.

ನಿನ್ನೆ ಪ್ರೀಮಿಯರ್ ಮುಸ್ಲಿಂ ಲೀಗ್ ಉದ್ಘಾಟನೆ ಮಾಡಿ, ಮಾತನಾಡಿದ ರೆಡ್ಡಿ ಅವರು, ನಮ್ಮವರೂ ಕೂಡ ತೊಂದರೆ ಕೊಡುವ ಪರಿಸ್ಥಿತಿಯಲ್ಲಿ ನಾನಿದ್ದೀನಿ. ಅದೆನೋ ರಾಜಕಾರಣದಲ್ಲಿ ಹಾಗೇ ಆಗಬೇಕು. ಹೀಗೆ ಆಡಬೇಕು ಎಂಬ ಆಸೆ ಕೂಡ ಇಲ್ಲ. ಆದರೆ ಯಾವ ಪಕ್ಷವನ್ನು ನಾನು ಇವತ್ತು ಕರ್ನಾಟಕದಲ್ಲಿ ಬೆಳೆಸಿದ್ದೇನೋ..? ನನ್ನ ಶತ್ರುಗಳು ಇವತ್ತು ಕಾಂಗ್ರೆಸ್ ಆಗಿರಬಹುದು. ಆದರೆ ನಮ್ಮವರೆ ನನಗೆ ತೊಂದರೆ ಕೊಡುತ್ತಿದ್ದಾರೆ.

ಮುಂದೊಂದು ದಿನ ರಾಜಕೀಯ ಸ್ಟೇಟ್ಮೆಂಟ್ ನೊಂದಿಗೆ ಜನರ ಬಳಿ ಮರಳುತ್ತೇನೆಂಬ ನಂಬಿಕೆ ಇದೆ. ಮುಂದಿನ ದಿನ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಜೊತೆಗೆ ಬಳ್ಳಾರಿಯ ಮುಸ್ಲಿಂ ಬಾಂಧವರಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *