ನಾನು ಬದುಕಲು ಅರ್ಹನಲ್ಲ : ಮಳವಳ್ಳಿ ಮಗುವಿನ ಬದುಕು ಮುಗಿಸಿದ ಪಾಪಿಯ ಮಾತು..!

1 Min Read

 

ಮಂಡ್ಯ: ಇನ್ನು ಕೇವಲ 10 ವರ್ಷದ ಮಗು ಅದು. ಚೆನ್ನಾಗಿ ಓದಲಿ ಎಂದು ಸ್ಕೂಲಿನ ಪಾಠದ ಜೊತೆಗೆ ಟ್ಯೂಷನ್ ಗೆ ಕೂಡ ಹಾಕಿದ್ದರು. ಮಗುವಿನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಪೋಷಕರಿಗೆ ಅತ್ಯಾಚಾರ ಮಾಡಿ ಮಗುವನ್ನೆ ಕೊಲೆಗೈದಿದ್ದ ಟ್ಯೂಷನ್ ಮೇಲ್ವಿಚಾರಕ. ಪೋಷಕರ ಕನಸನ್ನು ಕಸಿದು, ಮಗುವಿನ ಅಮೂಲ್ಯವಾದ ಜೀವವನ್ನೇ ತಿಂದು ಈಗ ಪಶ್ಚಾತ್ತಾಪ ಪಡುತ್ತಿದ್ದಾನಂತೆ.

ಆತನನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ, ನಾನು ಬದುಕುವುದಿಲ್ಲ ಸತ್ತು ಹೋಗುತ್ತೇನೆ. ನಾನು ಮಾಡಿರುವ ಕೆಲಸದ ಕುರಿತು ಪಶ್ಚಾತ್ತಾಪ ಕಾಡುತ್ತಿದೆ. ನನ್ನಿಂದ ತಪ್ಪಾಗಿದೆ. ಸಮಾಜದಲ್ಲಿ ನಾನು ಎಂದಿಗೂ ತಲೆ ಎತ್ತಿಕೊಂಡು ತಿರುಗುವುದಕ್ಕೆ ಸಾಧ್ಯವಿಲ್ಲ. ನಾನು ಬದುಕಲು ಅರ್ಹನಲ್ಲ ಎಂದು ಕಣ್ಣೀರಿಟ್ಟಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 11ರಂದು ಮಳವಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿತ್ತು. 10 ವರ್ಷದ ಬಾಲಕಿಯೊಬ್ಬಳು ಟ್ಯೂಷನ್ ಗೆ ಅಂತ ಮನೆಯಿಂದ ಹೊರ ಹೋದವಳು ಸಿಕ್ಕಿದ್ದು ಮಾತ್ರ ಹೆಣವಾಗಿ. ಬಳಿಕ ಗೊತ್ತಾಗಿದ್ದು ಆ ಮಗುವಿನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು. ಬಳಿಕ ಆರೋಪಿಯನ್ನು ಪತ್ತೆ ಮಾಡಿ, ಅರೆಸ್ಟ್ ಕೂಡ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *