ನಾನು ಮುಂದೆ ರಾಜಕಾರಣದಲ್ಲಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ : ಶ್ರೀರಾಮುಲು ಹಿಂಗ್ಯಾಕಂದ್ರು..?

suddionenews
1 Min Read

ಯಾದಗಿರಿ: ಸಚಿವ ಶ್ರೀರಾಮುಲು ಇದ್ದಕ್ಕಿದ್ದ ಹಾಗೇ ರಾಜಕಾರಣದಲ್ಲಿ ಇರುವುದು ಇಲ್ಲದಿರುವುದರ ಬಗ್ಗೆ ಮಾತನಾಡಿದ್ದಾರೆ. ಈ ಹೇಳಿಕೆ ಬಹಳಷ್ಟು ಆಶ್ಚರ್ಯವನ್ನುಂಟು ಮಾಡಿದೆ. ಹುಣಸಿಗಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡುತ್ತಾ ಭಾವುಕರಾಗಿದ್ದಾರೆ.

ತಮ್ಮ ಭಾಷಣದುದ್ದಕ್ಕೂ ರಾಜೂಗೌಡ ಅವರನ್ನು ಬೆಂಬಲಿಸುವಂತೆ ಕೇಳಿದ್ದು, ನಾನು ರಾಜಕಾರಣದಲ್ಲಿ ಇರುತ್ತೀನೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಸಮುದಾಯವನ್ನು ಮುನ್ನಡೆಸುವ ಶಕ್ತಿ ರಾಜೂಗೌಡ ಅವರಿಗಿದೆ. ರಾಜೂ ಗೌಡ ಮೂರು ಬಾರಿ ಶಾಸಕರಾಗಿದ್ದಾರೆ. ನುಡಿದಂತೆ ನಡೆಯುವ ರಾಜೂಗೌಡ ಅವರನ್ನು 4ನೇ ಬಾರಿ ಗೆಲ್ಲಿಸಬೇಕಿದೆ.

ಹುಣಸಗಿ ತಾಲೂಕು ಘೋಷಣೆ ಬಳಿಕ ನಿಮ್ಮ ಆಶೀರ್ವಾದ ಬಳಿಕ ಸಿಎಂ ಹಾಗೂ ನಾವೂ ಬಂದಿದ್ದೇವೆ. ಸಿಎಂ ಅವರು ಇಲ್ಲಿಗೆ ಕಲ್ಯಾಣ ರಾಜ್ಯದ ಸಂಕಲ್ಪ ಮಾಡಿ ಇಲ್ಲಿಗೆ ಬಂದಿದ್ದಾರೆ. ಕಲ್ಯಾಣ ರಾಜ್ಯ ಆಗಬೇಕು. ಕಲ್ಯಾಣ ಕರ್ನಾಟಕ ಆಗಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *