ಬಿಜೆಪಿ ತೋಡುವ ಕಂದಕದಲ್ಲಿ ಸಿದ್ದರಾಮಯ್ಯ, ಡಿಕೆಶಿ ಬೀಳಲ್ಲ : ಬಸವರಾಜ್ ರಾಯರೆಡ್ಡಿ

suddionenews
1 Min Read

ರಾಯಚೂರು: ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ, ಅವರಿಬ್ಬರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದಿದ್ದಾರೆ.

ಸುಮ್ಮನೆ ಕಂದಕ, ಭಿನ್ನಾಭಿಪ್ರಾಯ ಅಂತ ಹಬ್ಬಿಸುತ್ತಾ ಇದ್ದಾರೆ. ಆ ಕಂದಕದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬೀಳುವುದಿಲ್ಲ. ಸಿಎಲ್ ಪಿ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಹುಷಾರಾಗಿದ್ದಾರೆ. ಬಿಜೆಪಿ ತೋಡುವ ಕಂದಕದಲ್ಲಿ ಇಬ್ಬರು ಬೀಳುವುದಿಲ್ಲ ಎಂದಿದ್ದಾರೆ.

ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಎರಡು ಬಣಗಳಿವೆ ಎಂದೇ ಚರ್ಚೆಯಾಗುತ್ತಿದೆ. ಒಂದು ಡಿಕೆ ಶಿವಕುಮಾರ್ ಬಣ ಮತ್ತೊಂದು ಸಿದ್ದರಾಮಯ್ಯ ಅವರ ಬಣ. ಆಗಾಗ ಸಣ್ಣ ಸಣ್ಣ ವಿಚಾರಗಳಲ್ಲಿ ಮನಸ್ತಾಪ ಹೊಗೆಯಾಡುತ್ತಾ ಇರುತ್ತದೆ. ಹೀಗಾಗಿ ಬಿಜೆಪಿ ನಾಯಕರು ಈ ವಿಚಾರವಾಗಿ ಕಾಂಗ್ರೆಸ್ ಮೂರು ಬಾಗಿಲಾಗಿದೆ ಎಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *