Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಟ್ ಪಟ್ ನಗರದ ಸರ್ಕಾರಿ ಶಾಲೆ 75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಕಾರ್ಯಕ್ರಮ

Facebook
Twitter
Telegram
WhatsApp

ಚಿತ್ರದುರ್ಗ, (ಆ.15) : ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ಸ್ ಮಾರಾಟಗಾರರ ಸಂಘ (ರಿ). ಚಿತ್ರದುರ್ಗ (Chitradurga District IT Dealers Association)  75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವ  ಕಾರ್ಯಕ್ರಮನ್ನು ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ ಜಟ್ ಪಟ್  ನಗರ ಚಿತ್ರದುರ್ಗ ಇಲ್ಲಿ ಆ 15 ಸೋಮವಾರದಂದು ನಡೆಯಿತು,

ಕಾರ್ಯಕ್ರಮದಲ್ಲಿ ಶ್ರೀ ದೂರೆಸ್ವಾಮಿಗಳಿಂದ ಧ್ವಜಾರೋಹಣ ನೇರವೇರಿತು. ನಂತರ ಮಕ್ಕಳಿಂದ ದೇಶಭಕ್ತಿಗೀತೆ, ನಾಡಗೀತೆ ಮತ್ತು ನೃತ್ಯರೂಪಕ ಕಾರ್ಯಕ್ರಮಗಳು ನೇರೆವೇರಿದವು.

ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಮಕ್ಕಳಿಗೆ CDITDA ಸಂಘದ ವತಿಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು . ಮತ್ತು ಶಾಲೆಯ ಎಲ್ಲಾ 99 ಮಕ್ಕಳಿಗೆ ಪುಸ್ತಕ, ಪೆನ್ ,ಪೆನ್ಸಿಲ್  ಮತ್ತು ಜಾಮಿಟ್ರಿಗಳನ್ನು ಸಂಘದ ನಿರ್ದೇಶಕರಾದ  ಮಹೇಶ.ಜಿ.ಎನ್, ದಸ್ತಗೀರ್ ಬೇಗ್ ,ನಾಗರಾಜ್ ಮಲಸಾನಿ,ರಾಘವೇಂದ್ರ .ಎಂ.ಜೆ ,ವಿಜಯ್ ಕುಮಾರ್
ಮೋಹನ್ .ಸಿ.ಎನ್, ದಿವಾಕರ್ , ರಾಘವೇಂದ್ರ .ಜಿ ಮತ್ತು ಸದಸ್ಯರಾದ ಶ್ರೀ ಬಸವರಾಜಯ್ಯ ಬಿ.ಎಮ್ ವಿತರಿಸಿದರು.

CDITDA ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್.ಕೆ.ಸಿ, ಮಾತನಾಡಿ ಮಕ್ಕಳಿಗೆ ದೇಶಭಕ್ತಿಯ ಬಗ್ಗೆ ತಿಳಿಸಿದರು ಹಾಗೂ ಮುಂದಿನ ಸ್ವಾತಂತ್ರ್ಯದ ಶತಮಾನೋತ್ಸವ ಪ್ರಜೆಗಳಾಗಿ ಬಾಳಿ ದೇಶ ನಾಡಿಗೆ ಕೀರ್ತಿಯನ್ನು ತರುವಂತೆ ಆಶಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಭೂದಾನಿಗಳಾದ ದೂರೆಸ್ವಾಮಿ, SDMC  ಅಧ್ಯಕ್ಷರಾದ ಸುನಿತಾಕುಮಾರಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಧಾದೇವಿ ಆಗನೂರು,ಹಾಗೂ  ಶಿಕ್ಷಕರ ಮಂಡಳಿ ಮತ್ತು CDITDA ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್.ಕೆ.ಸಿ, ಜಿಲ್ಲಾ ಕಾರ್ಯದರ್ಶಿಯಾದ ವೆಂಕಟೇಶ್‍ಮೂರ್ತಿ.ಎನ್.ವಿ, ಹಾಗೂ ಸಂಘದ ನಿರ್ದೇಶಕರು ಮಂಡಳಿಯ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೇಹದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವೇನು ?

ಸುದ್ದಿಒನ್ : ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದು ತುಂಬಾ ಅಪಾಯಕಾರಿ. ಪರಿಣಾಮವಾಗಿ, ಅನೇಕ ರೀತಿಯ ಮಾರಣಾಂತಿಕ ಸಮಸ್ಯೆಗಳು ಉದ್ಭವಿಸುತ್ತವೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಪಾಯಕಾರಿ ಅಂಶಗಳು ಯಾವುವು ? ಅವುಗಳನ್ನು ತಡೆಯುವುದು ಹೇಗೆ ? ಮುಂತಾದ

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

error: Content is protected !!