ಫ್ರೀಡಂಮಾರ್ಚ್ ಗೆ ಪ್ರಿಯಾಂಕಾ ಗಾಂಧಿ ಕರೆತರುವುದರ ಹಿಂದಿನ ಉದ್ದೇಶವೇನು..? ಡಿಕೆಶಿ ಫ್ಲ್ಯಾನ್ ಸಕ್ಸಸ್ ಆಗುತ್ತಾ..?

ಬೆಂಗಳೂರು: ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬ ಬಹಳ ಅದ್ದೂರಿಯಾಗಿ ನಡೆದಿತ್ತು. ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗಿರುವ ಬೆಂಬಲ, ಕ್ರೇಜ್ ಅನ್ನು ಅಂದು ಸಾರಿದ್ದರು. ಆ ಕಾರ್ಯಕ್ರಮಕ್ಕೆ ಹತ್ತು ಲಕ್ಷ ಮಂದಿ ಸೇರಿದ್ದರು. ದೆಹಲಿಯಿಂದ ರಾಹುಲ್ ಗಾಂಧಿ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಇದೀಗ ಸಿದ್ದರಾಮಯ್ಯ ಅವರ ಇಮೇಜ್ ಗೆ ಕೌಂಟರ್ ಕೊಡುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ದವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಡಿಕೆಶಿ ಇದೀಗ ಪ್ರಿಯಾಂಕ ಗಾಂಧಿಯನ್ನು ರಾಜ್ಯಸಭೆಗೆ ಕಳುಹಿಸುವ ಮೊದಲ ಪ್ರಯತ್ನದಲ್ಲಿಯೇ ಡಿಕೆಶಿ ವಿಫಲಾಗಿದ್ದರು. ಆದರೆ ಇದೀಗ ರಾಜ್ಯಕ್ಕೆ ಕರೆತರುವ ಫ್ಲ್ಗಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆಗಸ್ಟ್ 15 ರಂದು ನಡೆಯುವ ಫ್ರೀಡಂಮಾರ್ಚ್ ಗೆ ಪ್ರಿಯಾಂಕ ಗಾಂಧಿಯನ್ನು ಕರೆತರಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಪ್ರಿಯಾಂಕ ಗಾಂಧಿ ಮೇನಿಯಾ ಮಾಡಲು ಹೊರಟಿರುವ ಡಿಕೆಶಿ ಎಐಸಿಸಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಆಗಸ್ಟ್ 15 ಕ್ಕೆ ಅವರು ರಾಜ್ಯಕ್ಕೆ ಬರಲೇಬೇಕೆಂದು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *