ಸಿಎಂ ಜೊತೆ ಫೋಟೋ ತೆಗೆಸಿಕೊಳ್ಳಲು ಹೋದ ಪ್ರತಾಪ್ ಸಿಂಹ : ನಂಬಿಕೆ ಇಲ್ಲವೆಂದರೆ ಹೋಗು ಎಂದಿದ್ಯಾಕೆ ಸಿಎಂ..?

1 Min Read

 

ಬೆಂಗಳೂರು: ದಸರಾ ಉತ್ಸವಕ್ಕಾಗಿ ಈಗಾಗಲೇ ತಯಾರಿ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ‌ಆ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರಿಂದ ಬೊಮ್ಮಾಯಿ ಅವರಿಗೆ ಮುಜುಗರ ಮಾಡಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಮುಜುಗರ ಮಾಡಿದ್ದಾರೆ.

ದಸರಾ ಉತ್ಸವದ ಸಭೆಯಲ್ಲಿ ಪ್ರತಾಪ್ ಸಿಂಹ ತಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಅನುಮೋಧನೆ ಪಡೆಯಲು ಪತ್ರಕ್ಕೆ ಸಹಿ ಹಾಕಿಸಿಕೊಂಡರು. ಈ ವೇಳೆ ಅದರ ಜೊತೆಗೊಂದು ಫೋಟೋ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಇದು ಸಿಎಂ ಬೊಮ್ಮಾಯಿ ಅವರಿಗೆ ಮುಜುಗರ ಉಂಟು ಮಾಡಿದೆ. ಕೋಪಗೊಂಡ ಸಿಎಂ ಪ್ರತಾಪ್ ಸಿಂಹ ಮೇಲೆ ಗರಂ ಆಗಿದ್ದಾರೆ.

ನನ್ನ ಮೇಲೆ ನಿನಗೆ ನಂಬಿಕೆ ಇಲ್ಲದೆ ಹೋದರೆ ಇದನ್ನು ತೆಗೆದುಕೊಂಡು ಹೋಗು ಎಂದು ಬೇಸರ ಮಾಡಿಕೊಂಡಿದ್ದಾರೆ. ಪ್ರತಾಪ್ ಸಿಂಹ ಸಮಜಾಯಿಷಿ ಕೊಡಲು ಹೋದಾಗ ಮತ್ತೆ ಕೋಪಗೊಂಡಿದ್ದಾರೆ. ಈ ವೇಳೆ ಸಚಿವ ಎಸ್ ಟಿ ಸೋಮಶೇಖರ್, ಶಾಸಕ ಜಿ ಟಿ ದೇವೇಗೌಡ, ಸಾರಾ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *