ಮಂತ್ರಿಯಾಗುವ ಆಸೆ ಇಲ್ಲ, ಕೊಟ್ಟರೆ ಶಿಕ್ಷಣ ಖಾತೆ ಕೊಡಲಿ : ಬಸವರಾಜ್ ಹೊರಟ್ಟಿ

ಬೆಂಗಳೂರು: ನೂತನ ಎಂಎಲ್ಸಿ ಗಳಿಂದ ಇಂದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ವಿಧಾನಸೌಧದಲ್ಲಿ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬಿಜೆಪಿಯ ಹಣಮಂತ‌ ನಿರಾಣಿ ಮತ್ತು ಬಸವರಾಜ ಹೊರಟ್ಟಿ, ಕಾಂಗ್ರೆಸ್ ನ ಮಧು ಜಿ ಮಾದೇಗೌಡ ಹಾಗೂ ಪ್ರಕಾಶ್‌ ಹುಕ್ಕೇರಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 

ಬಸವರಾಜ ಹೊರಟ್ಟಿ ಪ್ರಮಾಣ‌ ವಚನ ಸ್ವೀಕಾರ ಹಿನ್ನೆಲೆ, ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ಸಿದ್ದರಾಮಯ್ಯ ಅವರಿಗೆ ಅಹ್ವಾನ ನೀಡಿದ್ದಾರೆ.

ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ನಾನು ಇವತ್ತು ಪ್ರಮಾಣ ವಚನ ಸ್ವೀಕರಿಸ್ತಿದ್ದೇನೆ. ವಿಧಾನಪರಿಷತ್ ಸದಸ್ಯನಾಗಿ ಸ್ವೀಕರಿಸುತ್ತಿದ್ದೇನೆ. ಅದಕ್ಕೆ ಆಹ್ವಾನಿಸಲು ಬಂದಿದ್ದೇನೆ ಅಷ್ಟೇ. ಇದರಲ್ಲಿ ಯಾವ ರಾಜಕೀಯ ಕಾರಣಗಳು ಇಲ್ಲ. ಸಭಾಪತಿ ಸ್ಥಾನ ನೀಡುವ ವಿಚಾರ. ಏನು‌ ತೀರ್ಮಾನ ಮಾಡ್ತಾರೋ ಮಾಡಲಿ.

ನನಗೆ ಮಂತ್ರಿಯಾಗುವ ಇಚ್ಛೆ ಇಲ್ಲ. ಕೊಟ್ಟರೆ ಶಿಕ್ಷಣ ಖಾತೆ ಕೊಡಬಹುದು. ಆದರೆ ನನಗೆ ಸಚಿವ ಸ್ಥಾನದ ಉಸಾಬರಿಯೇ ಬೇಡ. ಈಗ ಇರುವವರನ್ನ ಸುಧಾರಿಸಲಿ. ಸಭಾಪತಿ ಸ್ಥಾನ ಕೊಟ್ಟರೆ ಸಾಕು ನಿಭಾಯಿಸುವೆ. ಬಿಜೆಪಿ ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *