ಗುಣಮಟ್ಟದ ಶಿಕ್ಷಣದಿಂದ ಮಾತ್ರ ದೇಶ, ಮಾನವನ ಪ್ರಗತಿ ಸಾಧ್ಯ : ಕೆ.ಎಸ್. ನವೀನ್

1 Min Read

ಚಿತ್ರದುರ್ಗ,(ಜು.01) : ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ಬೇಬಿ ಸಿಟ್ಟಿಂಗ್‍ ತರಗತಿಯನ್ನು ನವೀಕರಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಭೇಟಿ ನೀಡಿದರು.

ಶಾಲೆ ಉತ್ತಮವಾಗಿದ್ದು, ನಗರದ ಮಧ್ಯ ಭಾಗದಲ್ಲಿದೆ, ಉತ್ತಮವಾದ ಸಂಖ್ಯೆಯೂ ಸಹಾ ಇದೆ. ಇದರಿಂದ ನಿಮ್ಮ ಜನಾಂಗದವರಿಗೆ ಅನುಕೂಲವಾಗಲಿದೆ. ಬೇರೆ ಜನಾಂಗದ ಮಕ್ಕಳು ಸಹಾ ಇಲ್ಲಿ ಓದುತ್ತಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಮಾತ್ರ ದೇಶ, ಮಾನವನ ಪ್ರಗತಿ ಸಾಧ್ಯವಿದೆ ಎಂದು ನವೀನ್ ತಿಳಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಾಬುಲಾಲ್ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬೇಬಿ ಸಿಟ್ಟಿಂಗ್‍ನಿಂದ ಹಿಡಿದು 7ನೇ ತರಗತಿಯವರೆಗೂ ಭೋದನೆ ನಡೆಯುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದ ಉತ್ತಮವಾದ ಭೋದಕರಿದ್ದಾರೆ. ಹಲವಾರು ವರ್ಷದಿಂದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದು ಎಲ್ಲರಿಗೂ ಅನುಕೂಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಉತ್ತಮ ಚಂದ್ ಸುರಾನ, ಆಶೋಕ ರಾಥೋಡ್ ನಿರ್ದೆಶಕರಾದ ಸುರೇಶ್ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *