ಬೆಂಗಳೂರು: ನಮ್ಮ ಸಮಾಜಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಮಾಡದೆ ಇರುವ ಕಾರ್ಯಕ್ರಮಗಳನ್ನು, ನಮ್ಮ ಪಕ್ಷದ ವರಿಷ್ಠರು, ದೇವಗೌಡ್ರು ಹಾಗೂ ಕುಮಾರಸ್ವಾಮಿ ಅವ್ರು ಬಹಳಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಹೇಳಿದ್ದಾರೆ.
ನಮ್ಮ ಸಮಾಜದ ಜಾಗೃತಿ ಸಮಾವೇಶದಲ್ಲಿ ನಮ್ಮ ಬೇಡಿಕೆ ಆಲಿಸಿದ್ರು. 2018 ರಲ್ಲಿ ಅಭಿವೃದ್ಧಿ ನಿಗಮಕ್ಕೆ 12 ಸಾವಿರಕೋಟಿ ನೀಡಿದ್ರು. ನಮ್ಮ ಸಮಾಜಕ್ಕೆ ಜಾತಿ ಪ್ರಮಾಣಪತ್ರ ನೀಡಲು, ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಯೋಜನೆ ತಂದ್ರು. ಆರ್ಯವೈಶ್ಯರೆಂದರೆ ಪ್ರಾಮಾಣಿಕರು, ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ ವ್ಯಾಪಾರ ಮಾಡುತ್ತೇವೆ.
ರಾಜ್ಯದ ಅಭಿವೃದ್ಧಿಗಾಗಿ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಮೂಲಕ ನಾವು ಸಮಾಜದ ಸೇವೆ ಮಾಡ್ತಾ ಇದ್ದೇವೆ. ಸಣ್ಣ ಸಮುದಾಯದವರು ನಾವು ನಮ್ಮ ಸಮಾಜದ ಮೇಲೆ ವಿಶ್ವಾಸವಿಟ್ಟು ನನ್ನ ಮೇಲೆ ಇಟ್ಟು ಎರಡನೇ ಬಾರಿ ವಿಧಾನ ಪರಿಷತ್ ಗೆ ಆಯ್ಕೆ ಮಾಡಿದ್ದಾರೆ. ಮತ್ತೊಮ್ಮೆ ಕುಮಾರಸ್ವಾಮಿ ಸಿಎಂ ಆಗೇ ಆಗ್ತಾರೆ. 2023ರಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗೋದು ಶೇಕಾಡ 100 ರಷ್ಟು ಸತ್ಯವಾಗಿದೆ ಎಂದಿದ್ದಾರೆ.