Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೆಡಿಎಸ್ ಪಕ್ಷದಿಂದ ಗುಬ್ಬಿ ಶಾಸಕ ಅಧಿಕೃತ ಉಚ್ಛಾಟನೆ : ಶಾಸಕರ ಫಸ್ಟ್ ರಿಯಾಕ್ಷನ್ ಇಲ್ಲಿದೆ..!

Facebook
Twitter
Telegram
WhatsApp

 

ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷ ಅಧಿಕೃತವಾಗಿ ಉಚ್ಛಾಟನೆ ಮಾಡಿದೆ. ಈ ಸಂಬಂಧ ಮಾತನಾಡಿರುವ ಗುಬ್ಬಿ ಶ್ರೀನಿವಾಸ್, ಮಾಡುತ್ತಾರೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಅದರಲ್ಲಿ ಹೊಸ ವಿಚಾರವೇನು ಇಲ್ಲ. ಮಾಡಿದ್ದು ಸಂತೋಷ ತರಿಸುವಂಥದ್ದೆ ಎಂದಿದ್ದಾರೆ.

ಇದನ್ನು ನಾನು ಸನ್ಮಾನ ಅಂತಾನು ಅಂದುಕೊಳ್ಳಲ್ಲ, ಅವಮಾನ ಅಂತಾನು ಅಂದುಕೊಳ್ಳಲ್ಲ, ಮುಜುಗರ ಅಂತಾನು ಎಂದುಕೊಳ್ಳಲ್ಲ. ಯಾಕೆಂದರೆ ಒಂದು ವರ್ಷದಿಂದಲೇ ಈ ವಿಚಾರ ಗೊತ್ತಿತ್ತು. ಅಂದು ಅಭ್ಯರ್ಥಿ ಅನೌನ್ಸ್ ಮಾಡಿದಾಗಲೇ ನಮಗೆ ತಿಳಿದಿತ್ತು. ಅವರಿಗೆ ನಾನು ಬೇಡವಾಗಿದ್ದೆ ಎಂಬುದು ಗೊತ್ತಾಗಿತ್ತು. ಅಭ್ಯರ್ಥಿಯನ್ನು ಅನೌನ್ಸ್ ಮಾಡಿದಾಗಲೇ ನನ್ನ ದಾರಿ ನಾನು ನೋಡಿಕೊಳ್ಳಬೇಕಿತ್ತು. ಅದರಲ್ಲಿ ಹೊಸದೇನು ಇಲ್ಲ.

ಅವರೇ ಹಾಕಿಬಿಟ್ಟಿದ್ದಾರೆ. ಒಂದು ವರ್ಷದಿಂದ ನಾನು ಹೊರಗಿದ್ದೇನೆ ಎಂಬುದು ಅವರಿಗೂ ಗೊತ್ತಿತ್ತು, ನನಗೂ ಗೊತ್ತಿತ್ತು. ಮುಂದಿನ ನಡೆ ಡಿಸೆಂಬರ್ ನಲ್ಲಿ ನಿರ್ಧರಿಸುತ್ತೇನೆ. ಸದ್ಯಕ್ಕೆ ಈ ಪಕ್ಷದಲ್ಲಿ ಗೆದ್ದಿದ್ದೇನೆ. ಅದಕ್ಕೆ ರಾಜೀನಾಮೆ ಕೊಡಬೇಕು, ಕೊಡುತ್ತೇನೆ. ಡಿಸೆಂಬರ್ ಕಳೆದ ಬಳಿಕ ರಾಜೀನಾಮೆ ಕೊಡುತ್ತೇನೆ. ಕೊಟ್ಟ ಬಳಿಕ ಕಾರ್ಯಕರ್ತರ ಜೊತೆ ಮಾತನಾಡಿ, ಆಮೇಲೆ ತೀರ್ಮಾನಿಸುತ್ತೇನೆ. ರಾಜ್ಯಪಾಲರರ ಬಳಿ ವಜಾ ಮಾಡಿ ಅಂತ ಹೋದರೆ ಹೋಗಲಿ. ಈ ಹಿಂದೆಲ್ಲಾ ಅಡ್ಡಮತದಾನ ಮಾಡಿದಾಗಲೂ ಹೋಗಿದ್ದರು. ಏನಾಯಿತು…? ನೋಡೋಣಾ ಮುಂದೆ ಏನಾಗುತ್ತೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ

ಈ ರಾಶಿಗಳ ಸಂಸಾರದಲ್ಲಿ ಏನಾಯ್ತು? ಆಶ್ಚರ್ಯ! ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ, ಶನಿವಾರ ರಾಶಿ ಭವಿಷ್ಯ -ಮೇ-18,2024 ಸೂರ್ಯೋದಯ: 05:47, ಸೂರ್ಯಾಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!