Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೂಪೂರ್ ಶರ್ಮಾ ವಿರುದ್ಧ ದಂಗೆ.. 228 ಜನರ ಬಂಧನ, 5 ಸಾವಿರ ಜನರ ಮೇಲೆ ಎಫ್ಐಆರ್..!

Facebook
Twitter
Telegram
WhatsApp

ನವದೆಹಲಿ: ಬಿಜೆಪಿಯಲ್ಲಿದ್ದ ನೂಪೂರ್ ಶರ್ಮಾ ಇತ್ತಿಚೆಗೆ ಪೈಗಂಬರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆ ಹೇಳಿಕೆಗಳು ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿವೆ. ಹೀಗಾಗಿ ಬಿಜೆಪಿ ನೂರೂಪ್ ಶರ್ಮಾಳನ್ನು ವಜಾ ಮಾಡಿದೆ. ಆದರೆ ಆಕೆ ನೀಡಿದ ಹೇಳಿಕೆಯಿಂದ ಮುಸ್ಲಿಂರು ರೊಚ್ಚಿಗೆದ್ದಿದ್ದಾರೆ. ಬರೀ ಅಮಾನತು ಅಲ್ಲ ಆಕೆಯನ್ನು ಜೈಲಿಗೆ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದರ ಭಾಗವಾಗಿ ಇಂದು ಕೂಡ ದೇಶದ ಹಲವೆಡೆ ತೀವ್ರಗತಿಯ ಪ್ರತಿಭಟನೆ ನಡೆಸುತ್ತಿದ್ದಾರೆ.

ಉತ್ತರಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಿಕ್ಕ ಸಿಕ್ಕ ವಾಹನಗಳ ಮೇಲೂ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಸಹರಾನ್ ಪುರದಲ್ಲಿ 48, ಪ್ರಯಾಗ್ ರಾಜ್ ನಲ್ಲಿ 68, ಹತ್ರಾಸ್ ನಲ್ಲಿ 50, ಮೊರಾದಾಬಾದ್ ನಲ್ಲಿ 25, ಫಿರೋಜಾಬಾದ್ ನಲ್ಲಿ 8, ಅಂಬೇಡ್ಕರ್ ನಗರದಲ್ಲಿ 28 ಸೇರಿ ಇಲ್ಲಿಯವರೆಗೆ 228 ಜನರ ಬಂಧನವಾಗಿದೆ.

ಪ್ರಯಾಗ್ ರಾಜ್ ನಲ್ಲಿ ಐದು ಸಾವಿರ ಜನ ಮೇಲೆ ಎಫ್ಐಆರ್ ಹಾಕಿದ್ದಾರೆ. ಎಫ್ಐಆರ್ ನಲ್ಲಿ 70 ಕಿಡಿಗೇಡಿಗಳ ಹೆಸರು ಉಲ್ಲೇಖ ಮಾಡಲಾಗಿದೆ. ಪ್ರಯಾಗ್ ರಾಜ್ ನ ಅಟಲಾದಲ್ಲಿ ಖಾಕಿ ಸರ್ಪಗಾವಲಿನಂತೆ ಕಾಯುತ್ತಿದೆ. ಯುಪಿಯ ಅನೇಕ ಕಡೆ 144 ಸೆಕ್ಷನ್ ಹಾಕಲಾಗಿದೆ.

ಇನ್ನು ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆ ಜೋರಾಗಿದ್ದು,
ಪೊಲೀಸರಿಂದ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್ ಮಾಡಲಾಗಿದೆ. ಗುಂಪು ಗುಂಪಾಗಿ ಪ್ರತಿಭಟನೆ ಮಾಡುತ್ತಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ನಿಮ್ಮ ಸಂಗಾತಿ ಮಾತು ಕೇಳುತ್ತಿಲ್ಲವೇ?

ಈ ರಾಶಿಯ ನಿಮ್ಮ ಸಂಗಾತಿ ಮಾತು ಕೇಳುತ್ತಿಲ್ಲವೇ? ಈ ರಾಶಿಯವರಿಗೆ ವರ ಪಸಂದೇ ಆಗುತ್ತಿಲ್ಲ.   ಬುಧವಾರ- ರಾಶಿ ಭವಿಷ್ಯ ಮೇ-22,2024 ಸೂರ್ಯೋದಯ: 05:46, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಹೆಚ್ಚಿನ ಶುಲ್ಕ ವಸೂಲಿ – ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು

ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮತ ಎಣಿಕೆಕಾರ್ಯ ನಿರ್ವಹಿಸಲು ಸೂಚನೆ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21 : ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂನ್ 04ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಚುನಾವಣೆಯ

error: Content is protected !!