Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನನ್ನ ಭಾಷಣ ಕೇಳಿ ಎಂದರೂ ಹೊರಟು ಹೋದ ಸಿದ್ದರಾಮಯ್ಯ, ಹಠ ಬಿಡದೆ ಖಾಲಿ ವೇದಿಕೆಯಲ್ಲೇ ಮಾತು ಮುಗಿಸಿದ ಕಾಂಗ್ರೆಸ್ ಮುಖಂಡ..!

Facebook
Twitter
Telegram
WhatsApp

ಹಾಸನ: ಕಾಂಗ್ರೆಸ್ ಮುಖಂಡರಿಬ್ಬರು ನನ್ನ ಭಾಷಣವನ್ನು ಕೇಳಿಸಿಕೊಳ್ಳಿ ಎಂದು ಎಷ್ಟೇ ಮನವಿ ಮಾಡಿಕೊಂಡರು, ಸಿದ್ದರಾಮಯ್ಯ ಹಾಗೇ ಎದ್ದು ಹೋದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದ ಶಿಕ್ಷಣ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಕೂಡ ಭಾಗಿಯಾಗಿದ್ದರು. ಅವರ ಭಾಷಣ ಮುಗಿದ ಬಳಿಕ ಅಲ್ಲಿಂದ ಹೊರಟಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು ಭಾಷಣ ಮಾಡಲು ಹೋದಾಗ, ವೇದಿಕೆ ಎಲ್ಲಾ ಖಾಲಿಯಾಗುತ್ತಿರುವುದನ್ನು ಗಮನಿಸಿದರು. ಬಳಿಕ ಆ ಮುಖಂಡ ಸಿದ್ದರಾಮಯ್ಯ ಅವರನ್ನು ಕೂಗಿ ಕೂಗಿ ಮನವಿ ಮಾಡಿಕೊಂಡರು. ದಯವಿಟ್ಟು ನೀವೂ ಹೋಗಬೇಡಿ, ನನ್ನ ಭಾಷಣವನ್ನು ಕೇಳಿ ಎಂದರು.

ನೀವೂ ನಿಜವಾದ ಕಾಂಗ್ರೆಸ್ ನಾಯಕರೇ ಆದರೇ ಕುಳಿತುಕೊಳ್ಳಿ ನನ್ನ ಭಾಷಣ ಕೇಳಿ ಎಂದರು. ಆದರೆ ಸಿದ್ದರಾಮಯ್ಯ ಅಲ್ಲಿಂದ ಹೊರಟೆ ಬಿಟ್ಟರು. ಅವರ ಹಿಂದೆಯೇ ವೇದಿಕೆ ಮೇಲಿದ್ದವರೆಲ್ಲಾ ಖಾಲಿಯಾದರು. ಬಳಿ ಖಾಲಿಯಾದ ವೇದಿಕೆಯಲ್ಲೇ ನಿಂತು ಮಾತನಾಡಿದ ಸ್ಥಳೀಯ ಮುಖಂಡ, ಸಿದ್ದರಾಮಯ್ಯ ಅವರು ಇದ್ದಿದ್ದರೆ ಬಿಜೆಪಿ ಹಗರಣಗಳನ್ನು ಬಯಲಿಗೆಳೆಯುತ್ತಿದ್ದೆ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಸದುರ್ಗ | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್,‌ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

  ಸುದ್ದಿಒನ್, ಚಿತ್ರದುರ್ಗ, ಮೇ. 12  : ಇತ್ತಿಚೀಗಷ್ಟೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನ ಪಡೆದುಕೊಂಡಿದೆ. ಇತ್ತ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ

ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ

ಆತ್ಮಹತ್ಯೆ ಮಾಡಿಕೊಂಡ KAS ಆಫೀಸರ್ ಪ್ರಕರಣ : ಪೊಲೀಸರಿಗೆ ತಲೆನೋವಾದ ಕೇಸ್..!

  ಬೆಂಗಳೂರು: ನಿನ್ನೆ ಹೈಕೋರ್ಟ್ ವಕೀಲೆ ಚೈತ್ರಾ.ಬಿ. ಗೌಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಕೀಲೆಯಾಗಿ, ಮಾಡೆಲ್ ಆಗಿ ಚೆನ್ನಾಗಿದ್ದ ವಕೀಲೆ ಇದ್ದಕ್ಕಿದ್ದ ಹಾಗೇ ಹೀಗೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸಂಜಯನಗರ ಪೊಲೀಸರು

error: Content is protected !!