Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಂಗಳೂರು ವಿವಿ ಹಿಜಾಬ್ ವಿವಾದ : ಪ್ರಾಂಶುಪಾಲರ ನಿಲುವೇನು.?

Facebook
Twitter
Telegram
WhatsApp

ಮಂಗಳೂರು: ತಣ್ಣಗಾಗಿದ್ದ ಹಿಜಾಬ್ ವಿವಾದ ಮತ್ತೆ ಮಂಗಳೂರಿನಲ್ಲಿ ಹೊಗೆಯಾಡಿದೆ. ಕಾಲೇಜಿಗೆ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುತ್ತಾರೆಂಬ ಆರೋಪವಿದೆ. ಈ ಬಗ್ಗೆ ವಿವಿ ಪ್ರಾಂಶುಪಾಲೆ ಅನುಸೂಯ ರೈ ಮಾತನಾಡಿ, ನಮ್ಮ ಕಾಲೇಜು ಯೂನಿಯನ್ ಚುನಾವಣೆ ಮಾರ್ಚ್ 10ಕ್ಕೆ ನಡೆದಿದೆ. ಚುನಾವಣೆ ಬಳಿಕ ಮಕ್ಕಳು ಮನವಿಯೊಂದನ್ನು ಕೊಟ್ಟಿದ್ದರು. ಏಪ್ರಿಲ್ ನಲ್ಲಿ ಪರೀಕ್ಷೆ ನಡೆದು ರಜೆ ಇತ್ತು. ಮೇ 12ಕ್ಕೆ ಕ್ಲಾಸಸ್ ಶುರುವಾಯ್ತು. ಅಗ ಸದ್ಯಕ್ಕೆ ಆನ್ಲೈನ್ ಕ್ಲಾಸ್ ಮಾಡಿದ್ದೆವು.

ಅದಕ್ಕೂ ಮುನ್ನ ನಮ್ಮ ಕಾಲೇಜಿನಿಂದ ಒಂದು ಆದೇಶ ನೀಡಿದ್ದೆವು. ಯಾರು ತಲೆಗೆ ಶಾಲು ಹಾಕಿಕೊಳ್ಳಬೇಕು ಅಂತಾರೋ ಅವರು ನಮ್ಮ ಶಾಲೆಯ ಯೂನಿಫಾರ್ಮ್ ನಲ್ಲಿಯೇ ಹಾಕಬೇಕು. ಇದು ಹೈಕೋರ್ಟ್ ತೀರ್ಮಾನ ಕೊಡುವ ಮುನ್ನ. ಆದರೆ ಇದನ್ನು ಒತ್ತಾಯ ಮಾಡಿರಲಿಲ್ಲ. ಬೇರೆ ಯಾವ ಕಲರ್ ಹಾಕಲು ಅನುಮತಿ ಇರಲಿಲ್ಲ. ನಮ್ಮ ಯೂನಿಫಾರ್ಮ್ ಮಾತ್ರ ಹಾಕಬೇಕು ಅಂತ ಹೇಳಿದ್ದೆವು. ನಮ್ಮ ಕಾಲೇಜಿನಲ್ಲಿ 1600 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿನಿಯರು ಶಿರವಸ್ತ್ರ, ಯೂನಿಫಾರ್ಮ್ ನಲ್ಲಿರುವ ಬಟ್ಟೆಯನ್ನೆ ಶಿರವಸ್ತ್ರ ಮಾಡಿಕೊಂಡಿದ್ದಾರೆ. ಈಗಲೂ ಹಾಕಿಕೊಂಡು ಬರುತ್ತಾರೆ. ಆದರೆ ಹೈಕೋರ್ಟ್ ಆದೇಶ ಬರವುದಕ್ಕೂ ಮುನ್ನ ನಾವೂ ಅದಕ್ಕೆ ಅನುಮತಿ ನೀಡಿದ್ದೆವು.

ನಮ್ಮ ಕಾಲೇಜು ಮಂಗಳೂರು ವಿವಿ ಆರ್ಡರ್ ಪ್ರಕಾರ ನಡೆದುಕೊಳ್ಳುತ್ತೆ. ಸದ್ಯದ ಸ್ಥಿತಿ ವಿವರಿಸಿದ್ದೇವೆ. ಅವರು ಹೇಳಿದ್ದಾರೆ ಈ ತಿಂಗಳಲ್ಲಿ ಮೀಟಿಂಗ್ ಮಾಡಿ ಸಿಂಡಿಕೇಟ್ ಬಳಿ ಚರ್ಚಿಸಿ, ಆ ನಂತರ ನಿರ್ಧಾರ ತಿಳಿಸುತ್ತೇವೆ ಎಂದಿದ್ದರು. ಮೀಟಿಂಗ್ ಬಳಿಕ ವಾಟ್ಸಾಪ್ ನಲ್ಲಿ ನಾಳೆಯಿಂದ ಆಫ್ಲೈನ್ ಕ್ಲಾಸ್ ಶುರುವಾಗುತ್ತೆ. ಯೂನಿಫಾರ್ಮ್ ಮಾತ್ರ ಧರಿಸಿ, ಶಿರವಸ್ತ್ರ ಧರಿಸುವಂಗಿಲ್ಲ ಎಂದು ಮಾಹಿತಿ ನೀಡಿದ್ದೆ. ಮರುದಿನ ಬೆಳಗ್ಗೆ ವಿದ್ಯಾರ್ಥಿಗಳು ಬಂದು ಶಾಲೆಯಲ್ಲಿ ಮಾತ್ರವಲ್ಲ ಕ್ಯಾಂಪಸ್ ನಲ್ಲೂ ಹಾಕಬಾರದು ಎಂದು ಮನವಿ ಮಾಡಿದ್ದಾರೆ. ಆ ಬಳಿಕ ಇದನ್ನು ವಿಭಾಗ ಮುಖ್ಯಸ್ಥರ ಸಭೆ ಕರೆದಿದ್ದೇನೆ. ಎಲ್ಲರ ಗಮನಕ್ಕೂ ತಂದು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!