Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅವರಿಗೆ ಭಯ, ಮುಸಲ್ಮಾನರ ವೋಟು ಕೂಡ ಬಿಜೆಪಿಗೆ ಬರುತ್ತೆ ಅಂತ : ಸಚಿವ ಬಿ ಸಿ ನಾಗೇಶ್

Facebook
Twitter
Telegram
WhatsApp

ಚಾಮರಾಜನಗರ: ಮಂಗಳೂರಿನಲ್ಲಿ ಮಸೀದಿ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು. ಅದು ಕೇಶವಾ ಕೃಪದಲ್ಲಿ ನಿರ್ಧರಿಸಿದಂತೆ ಆಗುತ್ತೆ ಎಂಬುದಾಗಿ. ಈ ಬಗ್ಗೆ ಇದೀಗ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ಕನ್ನಡದ ಗಾದೆ ಕೇಳಿದ್ದೀರಾ ಅಲ್ವಾ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬುದನ್ನು. ಹೆಂಡತಿ ಬಗ್ಗೆ ಏನು ಇಲ್ಲದೆ ಇದ್ದಾಗ ಮೊಸರಲ್ಲಿ ಕಲ್ಲು ಹುಡುಕುವುದಕ್ಕೆ ಹೊರಡುತ್ತಾರೆ. ಆ ರೀತಿಯಲ್ಲಿ ಎಂದು ವ್ಯಂಗ್ಯವಾಡಿದ್ದಾರೆ.

ಯಾವುದು ತಾತ್ವಿಕ ವಿಚಾರಗಳು ಇವರ ಬಳಿ ಇಲ್ಲದೆ ಇದ್ದಾಗ ವೈಚಾರಿಕ ವಿಚಾರಗಳನ್ನು ಇಟ್ಟುಕೊಂಡು ಈ ರೀತಿ ಮಾತನಾಡುತ್ತಾರೆ. ಕೇಶವ ಕೃಪಕ್ಕೂ, ಮಂಗಳೂರಿಗೂ, ದೇವಸ್ಥಾನಕ್ಕೂ. ಕಾಶಿನೇ ಉದಾಹರಣೆ. ಏನು ಆರ್ ಎಸ್ ಎಸ್ ಹೇಳಿತ್ತಾ ಮಸೀದಿ ಇದೆ ಅಂತ. ಅಲ್ಲಿ ಯಾರೋ ಭಕ್ತಾಧಿಗಳು ಸುಪ್ರೀಂ ಕೋರ್ಟ್ ಹೋಗಿದ್ದಾರೆ. ಕೋರ್ಟ್ ಬಳಿಕ ಹೇಳಿತು ಅಲ್ಲಿನ ಕಮಿಷನರ್ ಗೆ ಅಲ್ಲಿ ಹೋಗಿ ಏನು ಮಾಡಬೇಕು ಅಂತ.

ಅದು ಕೇಶವಕೃಪಾಗೆ ಬಂತಾ. ಅಥವಾ ಡೆಲ್ಲಿಯ ಕಾರ್ಯಾಲಯದಲ್ಲಿ ನಿಶ್ಚಯವಾಗಿತ್ತಾ. ಇದ್ಯಾವುದು ಅಲ್ಲ ಏನು ತೋರದೆ ಇದ್ದರೆ ಹೀಗೆ . ಇನ್ನು ಅವರು ಆ ಭ್ರಮೆನಲ್ಲಿದ್ದಾರೆ. ಮುಸಲ್ಮಾನರ ವೋಟನ್ನು ಆರ್ ಎಸ್ ಎಸ್ ನ ಬೈದರೆ ಆಯ್ತು ಅಂತ. ಇತ್ತೀಚೆಗೆ ಅವರಿಗೆ ಹೆದರಿಕೆಯೂ ಶುರುವಾಗಿದೆ. ಮುಸಲ್ಮಾನರ ವೋಟು ಬಿಜೆಪಿಗೆ ಬರಬಹುದು ಅಂತ. ಸರ್ವೇಗಳು ಆ ರೀತಿಯಾಗಿದೆ. ಉತ್ತರಪ್ರದೇಶದಲ್ಲಿ ಮುಸಲ್ಮಾನರು ಜಾಸ್ತಿ ಇರುವ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಾದ ಮೇಲೆ ಕಾಂಗ್ರೆಸ್ ಮತ್ತು ದಳಕ್ಕೆ ಯೋಚನೆ ಶುರುವಾಗಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ವಿಶೇಷ ತನಿಖಾ ತಂಡ ರಚನೆಗೆ ಸಿಎಂ ನಿರ್ಧಾರ

ಬೆಂಗಳೂರು: ಹಾಸನದಲ್ಲಿ ಕಳೆದ ಕೆಲವು ದಿನಗಳಿಂದ ಪೆನ್ ಡ್ರೈವ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆ ಪೆನ್ ಡ್ರೈವ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಇರುವುದು ಬೆಳಕಿಗೆ ಬಂದಿದೆ. ಅದು ಒಂದಲ್ಲ ಎರಡಲ್ಲ ಸಾವಿರಾರು

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ. ಇನ್ನು ಅಡುಗೆ ಮನೆಯಲ್ಲಂತು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು, ಭಾನುವಾರ ರಾಶಿ ಭವಿಷ್ಯ -ಏಪ್ರಿಲ್-28,2024 ಸೂರ್ಯೋದಯ: 05:55, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

error: Content is protected !!