Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿರಿಧಾನ್ಯಗಳಿಂದ ರೈತ ಹಾಗೂ ಗ್ರಾಹಕರಿಗೆ ಅನುಕೂಲ :  ಸುಜಯ್

Facebook
Twitter
Telegram
WhatsApp

ಚಿತ್ರದುರ್ಗ, (ಮೇ.24) :  ಸಿರಿಧಾನ್ಯವನ್ನು ಬೆಳೆಯುವ ರೈತರಿಗೆ ನೆರವಾಗುವ ದೃಷ್ಟಿಯಿಂದ ಸಿರಿಧಾನ್ಯ ಮಿಲ್‍ನ್ನು ಪ್ರಾರಂಭ ಮಾಡಲಾಗಿದ್ದು ಇದರಿಂದ ರೈತ ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು  ಶ್ರೀ ಸರಸ್ವತಿ ಸಿರಿಧಾನ್ಯ ಮಿಲ್‍ನ ಮಾಲಿಕರಾದ  ಸುಜಯ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಸಿರಿಧಾನ್ಯದ ತವರೂರಾಗಿದೆ ಇಲ್ಲಿ ಹೆಚ್ಚಳವಾಗಿ ಸಿರಿಧಾನ್ಯವನ್ನು ಬೆಳೆಯಲಾಗುತ್ತಿದೆ. ಆದರೆ ಅದರ ಮಾರುಕಟ್ಟೆ ಇಲ್ಲವಾಗಿದೆ ಇದನ್ನು ಮನಗಂಡು 2016ರಲ್ಲಿ ಸಿರಿಧಾನ್ಯ ಮಳಿಗೆಯನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭ ಮಾಡಲಾಯಿತು.
ತದ ನಂತರ ಜನತೆ ಸಿರಿಧಾನ್ಯವನ್ನು ಬಳಸಲು ಪ್ರಾರಂಭ ಮಾಡಲಾರಂಭಿಸಿದರು.

ಇದರಿಂದ ನಾವು ಸಹಾ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯವನ್ನು ಖರೀದಿ ಮಾಡಿ ಗ್ರಾಹಕರಿಗೆ ನೀಡಲಾರಂಭಿಸಲಾಯಿತು ಎಂದರು.

ಸಿರಿಧಾನ್ಯವನ್ನು ಮಾತ್ರವೇ ಮಾರಾಟ ಮಾಡದೇ ಅದರ ಉತ್ಪನ್ನಗಳನ್ನು ಸಹಾ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ಸಿರಿಧಾನ್ಯ ಮಿಲ್‍ನ್ನು ಮೇ. 25 ರಂದು ಪ್ರಾರಂಭ ಮಾಡಲಾಗುತ್ತಿದೆ. ಇಲ್ಲಿ ಸಿರಿಧಾನ್ಯಗಳ ಜೊತೆಯಲ್ಲಿ ಅದರ ಉಪ ಉತ್ಪನ್ನಗಳನ್ನು ನಾವೇ ತಯಾರು ಮಾಡಿ ಮಾರಾಟ ಮಾಡಲಾಗುತ್ತದೆ. ವಿವಿಧ ಸಿರಿಧಾನ್ಯಗಳಿಂದ ರೂಟ್ಟಿ, ನಿಪ್ಪಟ್ಟು, ಗಾಣದಿಂದ ತಯಾರು ಮಾಡಲಾದ ಸೇಂಗಾ, ಎಳ್ಳು, ಹರಳೆಣ್ಣೆಯನ್ನು ಮಾರಾಟ ಮಾಡಲಾಗುತ್ತದೆ. ಇದರ ಉಪಯೋಗದಿಂದ ದೇಹದ ಮೇಲೆ ಯಾವುದೇ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಸಜಯ್ ತಿಳಿಸಿದರು.

ಪ್ರಾರಂಭದ ಅಂಗವಾಗಿ ಮಿಲೆಟ್ ಕಿಟ್‍ನ್ನು 700 ರೂಗಳಿಗೆ ನೀಡಲಾಗುತ್ತಿದೆ. ಇದರಲ್ಲಿ ಕುಟುಂಬಕ್ಕೆ ಬೇಕಾಗುವ ಸಿರಿಧಾನ್ಯ, ಗಾಣದ ಎಣ್ಣೆ, ಸಾವಯವ ದಿನಸಿ ಸೇರಿರುತ್ತದೆ, ಇದಲ್ಲದೆ ಕೆಮಿಕಲ್ ರಹಿತ ಸೌಂದರ್ಯ ವರ್ಧಕಗಳ ದೂರೆಯುತ್ತವೆ. ಪ್ರತಿಯೊಂದು ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡಲಾಗುತ್ತದೆ.

ಇದರೊಂದಿಗೆ ಸಿರಿಧಾನ್ಯ ಆಹಾರ ತಯಾರಿಯ ಬಗ್ಗೆ ನೇರ ಹಾಗೂ ಪೋನ್ ಕರೆ ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ. ಇದರಲ್ಲಿ ಅಧಿಕ ನಾರಿನಂಶ ಮತ್ತು ಪೋಷಕಾಂಶಗಳಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಖಾಯಿಲೆಗಳು ಬಾರದಂತೆ ತಡೆಯುತ್ತವೆ ಎಂದರು.

ಮೇ.25ರ ಸಂಜೆ 5 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ವಹಿಸಲಿದ್ದಾರೆ. ಉದ್ಘಾಟನೆಯನ್ನು ಸ್ವದೇಶಿ ಜಾಗರಣ್ ಮಂಚ್‍ನ ಕ್ಷೇತ್ರ ಸಂಘಟಕರಾದ ಜಗದೀಶ್‍ಜೀ ನೇರವೇರಿಸಲಿದ್ದಾರೆ.
ಗೋಷ್ಟಿಯಲ್ಲಿ ಪ್ರಣವ್ ಕುಮಾರ್ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಕೇಸ್: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಇದ್ದಾಗ ಮಾಡಿಕೊಂಡ ವಿಡಿಯೋ.. ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು : ಮೋದಿ ಒತ್ತಾಯ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತೆಯರನ್ನು ಕರೆಸಿ, ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಪ್ರಧಾನಿ

ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ : ಬೇಗ ಬೇಗ ವೋಟ್ ಮಾಡಿ ಬಿಡಿ

ಬೆಂಗಳೂರು: ನಿನ್ನೆಯಿಂದ ಎಲ್ಲೆಡೆ ಜೋರು ಮಳೆಯಾಗುತ್ತಿದೆ. ಇಂದು ಕೂಡ ಹವಮಾನ ಇಲಾಖೆ ಮಳೆಯ ಮುನ್ಸೂಚನೆಯನ್ನು ನೀಡಿದೆ. ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಚಾಮರಾಜನಗರ ಮತ್ತು ರಾಮನಗರದ

ಶಿಕ್ಷಕ ಎಸ್. ಶಿವಕುಮಾರ್ ನಿಧನ

    ಸುದ್ದಿಒನ್, ಚಳ್ಳಕೆರೆ, ಮೇ. 07 : ತಾಲ್ಲೂಕಿನ ತಿಮ್ಮಣ್ಣನಹಳ್ಳಿಯ  ಸಿ.ಪಿ. ಮೂಡಲಗಿರಿಯಪ್ಪ ಗ್ರಾಮಾಂತರ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಶಿವಕುಮಾರ್ (55 ವರ್ಷ) ಅವರು ಲೋ ಬಿಪಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ

error: Content is protected !!