Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯಾವನ್ ಐಜಿ..ಮೂಡಿಗೆರೆಗೆ ನಾನೇ ದೊಡ್ಡವನು : ಏನಿದು ವೈರಲ್ ಆದ ವಿಡಿಯೋದಲ್ಲಿ ಎಂ ಪಿ ಕುಮಾರಸ್ವಾಮಿಯ ಮಾತು..?

Facebook
Twitter
Telegram
WhatsApp

ಚಿಕ್ಕಮಗಳೂರು: ಎಷ್ಟು ಓದಿದರೇನು..? ಎಷ್ಟು ಪ್ರತಿಭೆ ಇದ್ದರೇನು..? ಸರ್ಕಾರಿ ನೌಕರಿ ಬೇಕು ಅಂದ್ರೆ ಸ್ವಲ್ಪೇ ಸ್ವಲ್ಪ ನಾಲೆಡ್ಜ್ ಇದ್ದರು, ಲಕ್ಷ ಲಕ್ಷ ಹಣ ಇದ್ದರೆ ಸಾಕು ಎಂಬಂತ ಸ್ಥಿತಿ ನಿರ್ಮಾಣವಾಗಿದೆ. ಒಂದೊಂದೇ ಒಂದೊಂದೆ ಬೆಳಕಿಗೆ ಬರುತ್ತಿದೆ. ಒಂದು ಕಡೆ ಪಿಎಸ್ಐ ಅಕ್ರಮದಲ್ಲಿ ಇನ್ನು ಬಂಧನವಾಗುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಬೆನ್ನಲ್ಲೇ ಪೊಲೀಸರೊಬ್ಬರಿಗೆ ಎಂ ಪಿ ಕುಮಾರಸ್ವಾಮಿ ನೀನ್ ಯಾರ್ಯಾರಿಗೆ ಎಷ್ಟು ಕೊಟ್ಟಿದ್ದಿಯಾ ಗೊತ್ತಿದೆ ಎಂಬ ಆಡಿಯೋ ವೈರಲ್ ಆಗಿದೆ.

ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಮತ್ತು ಪಿಎಸ್ಐ ರವೀಶ್ ಮಾತನಾಡಿರುವ ಸಂಭಾಷಣೆಯೊಂದು ವೈರಲ್ ಆಗಿದೆ. ಈ ಸಂಭಾಷಣೆಯಲ್ಲಿ ಮಾತನಾಡಿರುವುದು ಕುಮಾರಸ್ವಾಮಿ ಎಂದೇ ಹೇಳಲಾಗುತ್ತಿದೆ. ಆಡಿಯೋದಲ್ಲಿ ಕುಮಾರಸ್ವಾಮಿ ತೀರಾ ದರ್ಪ, ಅಧಿಕಾರದಲ್ಲಿ ಮಾತನಾಡಿರುವುದು ಕೇಳಿ ಬಂದಿದೆ. ಮೂಡಿಗೆರೆಗೆ ನಾನೇ ದೊಡ್ಡವನು ಎಂದಿದ್ದಾರೆ.

ಆಡಿಯೋದಲ್ಲಿ, ಯಾರಪ್ಪ ಇದು ನಂಬರ್ ಎಂದು ಕುಮಾರಸ್ವಾಮಿ ಅವರದ್ದು ಎನ್ನಲಾದ ಧ್ವನಿ ಕೇಳಿ ಬಂದಿದೆ. ನಾನು ಸರ್ ರವೀಶ್ ಎಂದಾಗ, ಈಗ ಎಲ್ಲಿದ್ದೀಯಪ್ಪ ಎಂದು ಕೇಳಿದ್ದಾರೆ. ಸ್ಟೇಷನ್ ಎಂದಾಗ ಇಲ್ಲಿಗೆ ಬರಬೇಡ ಅಂತ ಹೇಳಿದ್ನಲ್ಲ. ವಾಪಾಸ್ ಹೋಗಲೇ, ಮರ್ಯಾದೆಯಿಂದ ವಾಪಾಸ್ ಹೋಗು. ನನಗೆ ವಾಪಾಸ್ ಕಳುಹಿಸುವುದು ಗೊತ್ತು. ಯಾರ್ಯಾರಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದೀಯಾ ಅದು ಗೊತ್ತು ಎಂದಾಗ ಆ ಕಡೆಯಿಂದ ರವೀಶ್ ಎಂಬುವವರು ಇಲ್ಲ ಸರ್ ಯಾರಿಗೆ ಏನು ಕೊಟ್ಟಿಲ್ಲ. ಐಜಿ ಸಾರ್ ಹೇಳಿದ್ರು ಅಂತ ಬಂದೆ. ನಾಳೆ ನಿಮ್ಮನ್ನು ಬಂದು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಯಾವಾನ್ ಐಜಿ, ಮೂಡಿಗೆರೆಗೆ ನಾನೇ ದೊಡ್ಡವನು. ಸುಮ್ಮನೆ ವಾಪಾಸ್ ಹೋಗು ಎಂದಿದ್ದಾರೆ. ಈ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

error: Content is protected !!